ಸತ್ಯ ನಾಡೆಲ್ಲಾ 
ವಾಣಿಜ್ಯ

ರೋಬೋಟ್ ನಿಂದ ಜನರು ನಿರುದ್ಯೋಗಿಗಳಾಗುವುದಿಲ್ಲ: ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ

ಕೃತಕ ಬುದ್ಧಿಮತ್ತೆ ಬಳಸಿ ತಯಾರಾಗುವ ರೋಬೋಟ್ ಗಳು ಸಹ ಮಾನವರನ್ನು ಸಂಪೂರ್ಣ ನಿರುದ್ಯೋಗಿಯನ್ನಾಗಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ....

ಲಂಡನ್: ಕೃತಕ ಬುದ್ಧಿಮತ್ತೆ ಬಳಸಿ ತಯಾರಾಗುವ ರೋಬೋಟ್ ಗಳು ಸಹ ಮಾನವರನ್ನು ಸಂಪೂರ್ಣ ನಿರುದ್ಯೋಗಿಯನ್ನಾಗಿಸುವುದಿಲ್ಲ ಎಂದು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ದಿ ಸಂಡೇ ಟೆಲಿಗ್ರಾಫ್ ಗೆನೀಡಿದ್ದ ಸಂದರ್ಶನದಲ್ಲಿ ಹೇಳಿದ್ದಾರೆ.
ಜನರು ಎಂದಿಗೂ ’ಘನತೆ’ಯನ್ನು ತಂದುಕೊಡುವಂತಹಾ ಉದ್ಯೋಗವನ್ನು ಅಪೇಕ್ಷಿಸುತ್ತಾರೆ. ಹೀಗಾಗಿ ಅದಕ್ಕೆ ಹೊರತಾಗಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ನೈತಿಕವಾಗಿ ಅನ್ವಯಿಸುವುದು ಹೇಗೆನ್ನುವ ಕುರಿತು ಆಲೋಚಿಸಬೇಕು."2018 ರಲ್ಲಿ ನೈತಿಕತೆ ಕುರಿತಂತೆ ಹೆಚ್ಚು ಚರ್ಚೆಯಾಗುತ್ತಿದೆ.ಕೃತಕ ಬುದ್ಧಿಮತ್ತೆಯುಳ್ಳ ತಂತ್ರಜ್ಞಾನವನ್ನು ನಿರ್ಮಿಸುತ್ತಿರುವ  ಇಂಜಿನಿಯರ್ ಗಳು  ಮತ್ತು ಕಂಪೆನಿಗಳು ತಾವು ಅಳವಡಿಸಿಕೊಳ್ಳುವ  ತತ್ವಗಳ ಹಾಗೂ ಅದರಿಂದ ನಾವು ಆಯ್ದುಕೊಳ್ಳುವ  ಆಯ್ಕೆಗಳು ಯಾವ ಪಕ್ಷಪಾತದ ವ್ಯವಸ್ಥೆ ರಚನೆಗೆ ಕಾರಣವಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿಕೊಳ್ಳಬೇಕು." ಅವರು ಹೇಳಿದ್ದಾರೆ.
ಮೈಕ್ರೋಸಾಫ್ಟ್ ಸಂಸ್ಥೆ ಆಟೋಮೊಬೈಲ್ ಕ್ಷೇತ್ರದ ಬಳಕೆಗಾಗಿ ಪಕ್ಷಪಾತವನ್ನು ಗುರುತಿಸುವ ವಿಭಿನ್ನ ಕೃತಕ ಬುದ್ಧಿಮತ್ತೆಯುಳ್ಳ ಸಾಧನವನ್ನು ನಿರ್ಮಿಸುತ್ತಿದೆ ಎಂದು ಮೇ 25ರ ಎಂಐಟಿ ಟೆಕ್ನಾಲಜಿ ರಿವ್ಯೂ ವರದಿಯು ಹೇಳಿದೆ. ಈ ಸಾಧನವು ಕೃತಕ ಬುದ್ಧಿಮತ್ತೆಯನ್ನು ಹೊಂದಿಯೂ ತಾರತಮ್ಯವಿಲ್ಲದೆಯೇ ವ್ಯವಹಾರಗಳನ್ನು ನಡೆಸುವುದಕ್ಕೆ ಸಮರ್ಥವಾಗಿದೆ. 
"ನಾವು ಪರಿಪೂರ್ಣತೆಯನ್ನು ಖಂಡಿತವಾಗಿ ನಿರೀಕ್ಷಿಸುವುದಿಲ್ಲ ಆದರೆ ಸಾಕಷ್ಟು ಪ್ರಮಾಣದಲ್ಲಿ ಪಕ್ಷಪಾತ ನಡೆಯದಂತೆ ಇದನ್ನು ರೂಪಿಸಲಾಗಿದೆ" ಅವರು ಹೇಳಿದ್ದಾರೆ.
ಸಂಸ್ಥೆ ಉತ್ತಮ ಇತಿಹಾಸವನ್ನು ಹೊಂದಿದೆ. ಹಾಗೆಯೇ ಸಂಸ್ಥೆಯ ವ್ಯವಹಾರವು ಗ್ರಾಹಕರನ್ನು ಆಧರಿಸಿದೆ ಎಂದು ನಾಡೆಲ್ಲಾ ಸಂದರ್ಶನದಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT