ಸಂಗ್ರಹ ಚಿತ್ರ 
ವಾಣಿಜ್ಯ

ಎಂಐ ಕ್ರೆಡಿಟ್: ಗ್ಯಾಜೆಟ್ ಗಳ ಬಳಿಕ ಇದೀಗ ವೈಯುಕ್ತಿಕ ಸಾಲ ಸೇವೆ ಆರಂಭಿಸಿದ ಶಿಯೋಮಿ

ಚೀನಾ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ಇದೀಗ ಭಾರತದಲ್ಲಿ ತನ್ನ ವೈಯುಕ್ತಿಕ ಸಾಲ ಸೇವೆಯನ್ನೂ ಕೂಡ ಆರಂಭಿಸಿದೆ.

ನವದೆಹಲಿ: ಚೀನಾ ಮೂಲದ ಖ್ಯಾತ ಮೊಬೈಲ್ ತಯಾರಿಕಾ ಸಂಸ್ಥೆ ಶಿಯೋಮಿ ಇದೀಗ ಭಾರತದಲ್ಲಿ ತನ್ನ ವೈಯುಕ್ತಿಕ ಸಾಲ ಸೇವೆಯನ್ನೂ ಕೂಡ ಆರಂಭಿಸಿದೆ.

ಹೌದು.. ಶಿಯೋಮಿ ಕಂಪೆನಿಯು ಭಾರತದಲ್ಲಿ ಎಂಐ ಕ್ರೆಡಿಟ್ ನ್ನು ಬಿಡುಗಡೆಗೊಳಿಸಿದ್ದು, ಯುವ ವೃತ್ತಿಪರರಿಗೆ ತ್ವರಿತವಾಗಿ ಸಾಲ ಸೌಲಭ್ಯ ಪಡೆಯಲು ಇದು ನೆರವಾಗಲಿದೆ ಎಂದು ಹೇಳಿದೆ. ಎಂಐ ಸಂಸ್ಥೆ ತಿಳಿಸುವಂತೆ ಇದು ತನ್ನ ಬಳಕೆದಾರರಿಗೆ ಹಣಕಾಸು ಸಾಲ ಆರಂಭಿಸಲು ಸೂಕ್ತವಾದ ವೇದಿಕೆಯಾಗಲಿದ್ದು, ಕಂಪೆನಿಯು ಎಂಐ ಕ್ರೆಡಿಟ್ ನಲ್ಲಿ ಹಣಕಾಸು ಸಾಲ ನೀಡುವವರ ಬಗೆಗಿನ ಪಟ್ಟಿಯನ್ನು ತಯಾರಿಸಿದ್ದು, ಈ ವೇದಿಕೆಗೆ ಬಳಕೆದಾರರು ಲಾಗ್ ಇನ್ ಆಗಿ ತ್ವರಿತ ಸಾಲಕ್ಕೆ ಅರ್ಜಿ ಹಾಕಬಹುದು. ಇದಕ್ಕಾಗಿ ತನ್ನದೇ ಎಂಐ ಕ್ರೆಡಿಟ್ ಎಂಬ ಆ್ಯಪ್ ಅನ್ನೂ ಕೂಡ ಶಿಯೋಮಿ ಬಿಡುಗಡೆ ಮಾಡಿದೆ.

ಶಿಯೋಮಿ ಬಹಿರಂಗ ಪಡಿಸಿರುವ ಪ್ರಕಾರ ಎಂಐ ಕ್ರೆಡಿಟ್ ಅನ್ನುವುದು ತ್ವರಿತ ಸಾಲ ನೀಡುವ ವೇದಿಕೆಯಾಗಿರುವ ಕ್ರೆಡಿಟ್ ಬೀ ಪಾಲುದಾರಿಕೆಯಲ್ಲಿ ನಡೆಯಲಿದೆ. ಎಂಐ ಕ್ರೆಡಿಟ್ ಶಿಯೋಮಿಯ ಮೂರನೇ ಮತ್ತೊಂದು ಅಂತರ್ಜಾಲ ಸೇವೆಯಾಗಿದ್ದು, ಈಗಾಗಲೇ ಸಂಸ್ಥೆ ಸುಮಾರು 28 ಕೋಟಿ ರೂಗ ಅಧಿಕ ಸಾಲವನ್ನು ವಿತರಣೆ ಮಾಡಿದೆ ಎನ್ನಲಾಗಿದೆ. ಶಿಯೋಮಿ ಎಂಐ ಕ್ರೆಡಿಟ್ ಕೇವಲ MIUI ಬಳಕೆದಾರರಿಗೆ ಮಾತ್ರ ಲಭ್ಯವಿರುತ್ತೆ. ಕ್ರೆಡಿಟ್ ಬಿ ಯು 1000 ದಿಂದ 1,00,000 ದ ವರೆಗೆ ಸಾಲವನ್ನು ನೀಡಲಿದ್ದು, ಇದು ಯುವ ವೃತ್ತಿಪರರಿಗೆ ಸಾಕಷ್ಟು ಅನುಕೂಲ ನೀಡಲಿದೆ. 

ಶಿಯೋಮಿ ಹೇಳುವ ಪ್ರಕಾರ ಕೇವಲ 10 ನಿಮಿಷದಲ್ಲಿ ಸಾಲವನ್ನು ಆರಂಭಿಸಲು ಸಾಧ್ಯವಿದ್ದು, ಸರಳವಾದ ಕೆವೈಸಿ ಪರಿಶೀಲನೆಯನ್ನು ಮಾಡಿದರೆ ಸಾಕಾಗುತ್ತದೆ ಎನ್ನಲಾಗಿದೆ. ಕನಿಷ್ಛ 3 ರಿಂದ 12 ತಿಂಗಳವರೆಗಿನ ಅವಧಿಯ ಸಾಲ ಸೌಲ್ಯಭ ಎಂಐ ಕ್ರೆಡಿಟ್ ನಲ್ಲಿ ಲಭ್ಯವಿದ್ದು, ಪ್ರತೀ ತಿಂಗಳಿಗೆ ಶೇ.1.35ರಷ್ಟು ಬಡ್ಡಿ ಇರಲಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ. ಸಾಲ ಸೌಲಭ್ಯಕ್ಕಾಗಿ ಎಂಐ ಸಂಸ್ಥೆ ಆದಿತ್ಯಾ ಬಿರ್ಲಾ ಫೈನಾನ್ಸ್ ಲಿಮಿಟೆಡ್, ಮನಿ ವ್ಯೂ, ಆರ್ಲಿ ಸ್ಯಾಲರಿ, ಜೆಸ್ಟ್ ಮನಿ, ಕ್ರೆಡಿಟ್ ವಿದ್ಯಾ ಸೇರಿದಂತೆ ಹಲವು ಸಂಸ್ಥೆಗಳೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT