ಅರವಿಂದ್ ಸುಬ್ರಮಣಿಯನ್ 
ವಾಣಿಜ್ಯ

ಐಸಿಯು ನತ್ತ ಭಾರತದ ಆರ್ಥಿಕತೆ: ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್

ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಮ್ ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವಿನ್ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು (ಟಿಬಿಎಸ್-ಒಂದೆಡೆ ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲ ಹೆಚ್ಚಳದ ಪರಿಣಾಮ ಬ್ಯಾಂಕ್ ಗಳ ಆದಾಯ, ಸಾಲದ ಪಟ್ಟಿ ಮತ್ತು ಇನ್ನೊಂದೆಡೆ ಸಾಲ ಪಡೆದವರ ಆದಾಯ – ಸಾಲದ ಪಟ್ಟಿಯಲ್ಲಿ ಒತ್ತಡ) ಎದುರಿಸುತ್ತಿದ್ದು ಇದು ದೇಶದ ಆರ್ಥಿಕತೆಗೆ ಮತ್ತಷ್ಟು ಅಪಾಯ ತರಲಿದೆ ಎಂದು ಅವರು ವಿವರಿಸಿದ್ದಾರೆ.

ಇದು ಸಾಮಾನ್ಯ ಮಂದಗತಿಯಲ್ಲ. ಇದು ಭಾರತದ ಮಹಾ ನಿಧಾನಗತಿಯಾಗಿದೆ, ಅಲ್ಲಿ ಆರ್ಥಿಕತೆಯು ತೀವ್ರ ನಿಗಾ ಘಟಕದತ್ತ ಸಾಗುತ್ತಿದೆ ಎಂದು ತೋರುತ್ತದೆ ಎಂದು ಹೇಳಿದರು. 

ಟಿಬಿಎಸ್ ಬಿಕ್ಕಟ್ಟು 2004-2011ರ ಆರ್ಥಿಕ ಉತ್ಕರ್ಷದ ಸಮಯದಲ್ಲಿ ಕಂಪನಿಗಳು ಬ್ಯಾಂಕುಗಳಿಂದ ಸಾಲ ಪಡೆದಾಗ ಸೂಚಿಸುತ್ತದೆ. ಆದರೆ ಆರ್ಥಿಕತೆಯು ಕುಸಿತದ ನಂತರ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಬ್ಯಾಂಕುಗಳೊಂದಿಗಿನ ಶೇಕಡಾವಾರು ನಿಷ್ಕ್ರಿಯ ಆಸ್ತಿಗಳು(ಎನ್‌ಪಿಎ) ಹೆಚ್ಚಿವೆ ಎಂದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT