ಅರವಿಂದ್ ಸುಬ್ರಮಣಿಯನ್ 
ವಾಣಿಜ್ಯ

ಐಸಿಯು ನತ್ತ ಭಾರತದ ಆರ್ಥಿಕತೆ: ಮಾಜಿ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್

ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯಮ್ ಆತಂಕ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ಭಾರತದ ಆರ್ಥಿಕತೆ ತೀವ್ರ ನಿಗಾ ಘಟಕ(ಐಸಿಯು) ನತ್ತ ವಾಲಿದ್ದು ತೀವ್ರ ಕುಸಿತ ಸನ್ನಿಹಿತವಾಗಿದೆ ಎಂದು ಮಾಜಿ ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಆತಂಕ ವ್ಯಕ್ತಪಡಿಸಿದ್ದಾರೆ.

ಟ್ವಿನ್ ಬ್ಯಾಲೆನ್ಸ್ ಶೀಟ್ ಬಿಕ್ಕಟ್ಟು (ಟಿಬಿಎಸ್-ಒಂದೆಡೆ ಹೆಚ್ಚುತ್ತಿರುವ ಮರುಪಾವತಿಯಾಗದ ಸಾಲ ಹೆಚ್ಚಳದ ಪರಿಣಾಮ ಬ್ಯಾಂಕ್ ಗಳ ಆದಾಯ, ಸಾಲದ ಪಟ್ಟಿ ಮತ್ತು ಇನ್ನೊಂದೆಡೆ ಸಾಲ ಪಡೆದವರ ಆದಾಯ – ಸಾಲದ ಪಟ್ಟಿಯಲ್ಲಿ ಒತ್ತಡ) ಎದುರಿಸುತ್ತಿದ್ದು ಇದು ದೇಶದ ಆರ್ಥಿಕತೆಗೆ ಮತ್ತಷ್ಟು ಅಪಾಯ ತರಲಿದೆ ಎಂದು ಅವರು ವಿವರಿಸಿದ್ದಾರೆ.

ಇದು ಸಾಮಾನ್ಯ ಮಂದಗತಿಯಲ್ಲ. ಇದು ಭಾರತದ ಮಹಾ ನಿಧಾನಗತಿಯಾಗಿದೆ, ಅಲ್ಲಿ ಆರ್ಥಿಕತೆಯು ತೀವ್ರ ನಿಗಾ ಘಟಕದತ್ತ ಸಾಗುತ್ತಿದೆ ಎಂದು ತೋರುತ್ತದೆ ಎಂದು ಹೇಳಿದರು. 

ಟಿಬಿಎಸ್ ಬಿಕ್ಕಟ್ಟು 2004-2011ರ ಆರ್ಥಿಕ ಉತ್ಕರ್ಷದ ಸಮಯದಲ್ಲಿ ಕಂಪನಿಗಳು ಬ್ಯಾಂಕುಗಳಿಂದ ಸಾಲ ಪಡೆದಾಗ ಸೂಚಿಸುತ್ತದೆ. ಆದರೆ ಆರ್ಥಿಕತೆಯು ಕುಸಿತದ ನಂತರ ಮರುಪಾವತಿ ಮಾಡಲು ಸಾಧ್ಯವಾಗಲಿಲ್ಲ. ಇದರ ಪರಿಣಾಮವಾಗಿ ಬ್ಯಾಂಕುಗಳೊಂದಿಗಿನ ಶೇಕಡಾವಾರು ನಿಷ್ಕ್ರಿಯ ಆಸ್ತಿಗಳು(ಎನ್‌ಪಿಎ) ಹೆಚ್ಚಿವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT