ಸಂಗ್ರಹ ಚಿತ್ರ 
ವಾಣಿಜ್ಯ

ಗ್ರಾಹಕರಿಗೆ ಸಿಹಿಸುದ್ದಿ! 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆಗೆ ಲಗ್ಗೆ

ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು  ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧ

ನವದೆಹಲಿ: ಗ್ರಾಹಕರಿಗೆ ಕಣ್ಣೀರು ತರಿಸಿದ್ದ ಈರುಳ್ಳಿ ಬೆಲೆ ತುಸು ಇಳಿಕೆಯಾಗುವ ಕಾಲ ಸನ್ನಿಹಿತವಾಗಿದೆ. 790 ಟನ್ ವಿದೇಶೀ ಈರುಳ್ಳಿ ಭಾರತ ಮಾರುಕಟ್ಟೆ ಪ್ರವೇಶಿಸಿದೆ. ಇದರಲ್ಲಿ ಕೆಲ ಭಾಗಗಳನ್ನು ದೆಹಲಿ ಹಾಗೂ ಆಂಧ್ರಪ್ರದೇಶಕ್ಕೆ ಕಳಿಸಲಾಗುತ್ತಿದ್ದು ಹೀಗೆ ರವಾನೆಯಾಗುವ ಈರುಳ್ಳಿಯ ಪ್ರಾರಂಭಿಕ ಬೆಲೆ ರು. 57-60 / ಕೆಜಿ ಆಗಿರಲಿದೆ ಎಂದು  ಗ್ರಾಹಕ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

 ಡಿಸೆಂಬರ್ ಅಂತ್ಯದ ವೇಳೆಗೆಅಂದಾಜು 12,000 ಟನ್ ಈರುಳ್ಳಿ ಅವಕವಾಗುವ ನಿರೀಕ್ಲ್ಷೆ ಇದೆ. ಸರ್ಕಾರದ ಪರವಾಗಿ ಪ್ರಮುಖ ಅಡಿಗೆ ಸಾಮಗ್ರಿಯಾಗಿರುವ ಈರುಳ್ಳಿ  ಆಮದು ಮಾಡಿಕೊಳ್ಳುತ್ತಿರುವ ಸರ್ಕಾರಿ ಎಂಎಂಟಿಸಿ ಈವರೆಗೆ 49,500 ಟನ್ ಈರುಳ್ಳಿಯನ್ನು ಗುತ್ತಿಗೆ ಪಡೆದಿದೆ.

ಚಿಲ್ಲರೆ ಈರುಳ್ಳಿ ಬೆಲೆಗಳು ಪ್ರಮುಖ ನಗರಗಳಲ್ಲಿ ಪ್ರತಿ ಕೆ.ಜಿ.ಗೆ ಸರಾಸರಿ 100 ರೂ. ಇದ್ದು ದೇಶದ ಕೆಲವು ಭಾಗಗಳಲ್ಲಿ ದರ ಪ್ರತಿ ಕೆ.ಜಿ.ಗೆ 160 ರೂ ತಲುಪಿದೆ. . "ತಲಾ 290 ಟನ್ ಮತ್ತು 500 ಟನ್ ಒಳಗೊಂಡ ಎರಡು ದಾಸ್ತಾನುಗಳುಈಗಾಗಲೇ ಮುಂಬೈ ತಲುಪಿದೆ. ನಾವು ಈರುಳ್ಳಿಯನ್ನು ಕೆಜಿ 57-60 / ಕೆಜಿ ದರದಲ್ಲಿ ರಾಜ್ಯ ಸರ್ಕಾರಗಳಿಗೆ ನೀಡುತ್ತಿದ್ದೇವೆ" ಎಂದು ಅಧಿಕಾರಿಗಳು ಹೇಳಿದ್ದಾರೆ. ಆಂಧ್ರಪ್ರದೇಶ ಮತ್ತು ದೆಹಲಿ ಸರ್ಕಾರಗಳು ಈಗಾಗಲೇ ತಮ್ಮ ಬೇಡಿಕೆಗಳನ್ನು ಮಂಡಿಸಿವೆ ಮತ್ತು ಆಮದು ಮಾಡಿದ ಈರುಳ್ಳಿಯನ್ನು ಖರೀದಿಸಲು ಮುಂದಾಗಿದೆ. ಟರ್ಕಿ, ಈಜಿಪ್ಟ್ ಮತ್ತು ಅಫ್ಘಾನಿಸ್ತಾನದಿಂದ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ದೇಶೀಯ ಸರಬರಾಜುಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಹೆಚಿನ ಉಪಕ್ರಮ ತೆಗೆದುಕೊಳ್ಲಲಾಗುತ್ತಿದೆ ಎಂದು ಅವರು ಹೇಳಿದರು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ತ್ರಿಪುರದಲ್ಲಿ ಎರಡು ಸಮುದಾಯಗಳ ನಡುವೆ ಘರ್ಷಣೆ: ಉನಕೋಟಿಯಲ್ಲಿ ಮಸೀದಿ-ಮುಸ್ಲಿಂ ಅಂಗಡಿಗಳಿಗೆ ಬೆಂಕಿ

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

SCROLL FOR NEXT