ಸಾಂದರ್ಭಿಕ ಚಿತ್ರ 
ವಾಣಿಜ್ಯ

ಆರ್ಥಿಕ ಕುಸಿತ: ಭಾರತ ತನ್ನ ನ್ಯೂನತೆಗಳನ್ನು ಎದುರಿಸಬೇಕಾಗಿದೆ

ಭ್ಯವಿರುವ ಮಾಹಿತಿ ಪ್ರಕಾರ  ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ.  5% ರಷ್ಟಿದ್ದು, ಪೂರ್ಣ ಆರ್ಥಿಕ ವರ್ಷದ ಬೆಳವಣಿಗೆ  ಕೆಳಮಟ್ಟದಲ್ಲಿದೆ.

ನವ ದೆಹಲಿ: ಲಭ್ಯವಿರುವ ಮಾಹಿತಿ ಪ್ರಕಾರ  ಕೊನೆಯ ತ್ರೈಮಾಸಿಕದಲ್ಲಿ ದೇಶದ ಆರ್ಥಿಕತೆಯು ಶೇ.  5% ರಷ್ಟಿದ್ದು, ಪೂರ್ಣ ಆರ್ಥಿಕ ವರ್ಷದ ಬೆಳವಣಿಗೆ ತೀರಾ ಕೆಳಮಟ್ಟದಲ್ಲಿದೆ. ಇತ್ತೀಚೆಗೆ, ಅರ್ಥಶಾಸ್ತ್ರಜ್ಞರ ಗುಪ್ತಚರ ಘಟಕವು 2019-20ರಲ್ಲಿ 5.2% ನಷ್ಟು ಬೆಳವಣಿಗೆಯಾಗಲಿದೆ ಎಂದು ಸೂಚಿಸಿದೆ.

ದೇಶದಲ್ಲಿನ ವ್ಯಾಪಾರ ವಲಯ ಹಾಗೂ ನೀತಿಗಳಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತ ಸಾಮಾನ್ಯವಾಗಿದೆ. ಬಹಳ ವರ್ಷಗಳ ಹಿಂದೆ ಶೇ.7 ಅಥವಾ 8ರಷ್ಟು ಬೆಳವಣಿಗೆಯನ್ನು ಭಾರತ ತನ್ನ ಜನ್ಮ ಸಿದ್ಧ ಹಕ್ಕಿನ ರೀತಿಯಲ್ಲಿ ಪರಿಗಣಿಸುತಿತ್ತು. ಜಾಗತಿಕ ಬಿಕ್ಕಟ್ಟಿನ ನಡುವೆಯೂ ಜೆಡಿಪಿ ಮಟ್ಟ ಕೆಳಗೆ ಇರಲಿಲ್ಲ. ಅನೇಕ ಸಂದರ್ಭಗಳಲ್ಲಿ ಶೇ. 7ರ ಅಸುಪಾಸಿನಲ್ಲಿಯೇ ಇತ್ತು.

ಈಗ ಏನಾಗುತ್ತಿದೆ? ದೇಶ ಆರ್ಥಿಕತೆಯು ಬಿಕ್ಕಟ್ಟನ್ನು ಎದುರಿಸುತ್ತಿದೆ,  ಆವರ್ತಕ  ಮತ್ತು ರಚನಾತ್ಮಕ ಅಂಶಗಳ ಸಂಯೋಜನೆಯಿಂದಾಗಿ ಚೇತರಿಕೆ ಎಂಬುದು ಕಷ್ಟಕರವಾಗಿ ಪರಿಣಮಿಸಿದೆ. ನರೇಂದ್ರ ಮೋದಿ 2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾದಾಗಿನಿಂದಲೂ ಮನೆಯ ಬಳಕೆ ಕುಸಿದಿದ್ದು, ಅನೇಕ ವರ್ಷಗಳಿಂದ ಏನೂ ನಡೆದಿಲ್ಲ. ಗ್ರಾಮೀಣ ಜನರ ಕೈಯಲ್ಲಿ ಹಣ ಸಿಗಬೇಕು ಅಂತಾ ಪ್ರಾರ್ಥಿಸುತ್ತಲೇ ಸಲಹೆ ನೀಡುತ್ತಿದ್ದಾರೆ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಹೇಳಿದ್ದಾರೆ.

ನೋಟ್ ಅಮಾನ್ಯತೆ , ಜಿಎಸ್ ಟಿ ಹಾಗೂ ಕಳೆದ ವರ್ಷದ ಬ್ಯಾಂಕಿಂಗ್ ಸಾಲ ಕುಸಿತ ಆರ್ಥಿಕ ಬೆಳವಣಿಗೆ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಆದರೆ, ಅದಕ್ಕಿಂತಲೂ ಗಂಭೀರವಾದ ಸಮಸ್ಯೆಯೂ ಇದೆ. ಗ್ರಾಹಕರ ಬೇಡಿಕೆಯನ್ನು ಉತ್ತೇಜಿಸುವುದು ಎಂದಿಗೂ ಸುಸ್ಥಿರ ಬೆಳವಣಿಗೆಯ ಮಾದರಿ ಎಂದು ಪರಿಗಣಿಸಬಾರದು ಬದಲಿಗೆ ಹೆಚ್ಚಿನ ಮಟ್ಟದ ಖಾಸಗಿ ಹೂಡಿಕೆಗೆ ಉತ್ತೇಜನ ನೀಡುವತ್ತ ಭಾರತ ಗಮನ ಹರಿಸಬೇಕಿತ್ತು ಎಂಬಂತಹ ಅಭಿಪ್ರಾಯಗಳು ವ್ಯಕ್ತವಾಗಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆ ದೇಶಕ್ಕೂ ನಾನೇ 'ಹಂಗಾಮಿ' ಸರ್ವೋಚ್ಛ ನಾಯಕ': Donald Trump ಘೋಷಣೆ, ಬೆಚ್ಚಿಬಿದ್ದ ವೆನೆಜುವೆಲಾ!

PSLV-C62 ಮಿಷನ್ ವಿಫಲ: ಕೊನೆಯ ಹಂತದಲ್ಲಿ ಎದುರಾದ ಸಮಸ್ಯೆ, ISROಗೆ ಹಿನ್ನಡೆ

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

SCROLL FOR NEXT