ನಿರ್ಮಲಾ ಸೀತಾರಾಮನ್ 
ವಾಣಿಜ್ಯ

ಜಿಎಸ್‍ಟಿ ಕೊರತೆ ನೀಗಿಸಲು ಮತ್ತೆ 6 ಸಾವಿರ ಕೋಟಿ ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ

ಸರಕು ಮತ್ತು ಸೇವಾ ತೆರಿಗೆ ಪರಿಹಾರದ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಸೊಮವಾರ 6 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ.

ನವದೆಹಲಿ: ಸರಕು ಮತ್ತು ಸೇವಾ ತೆರಿಗೆ ಪರಿಹಾರದ ಕೊರತೆ ನಿವಾರಿಸಲು ಕೇಂದ್ರ ಸರ್ಕಾರ ಸೊಮವಾರ 6 ಸಾವಿರ ಕೋಟಿ ರೂ. ಬಿಡುಗಡೆಗೊಳಿಸಿದೆ.

ಇದು1.10 ಲಕ್ಷ ಕೋಟಿ ರೂ. ಹಣದ ಕೊರತೆ ನಿವಾರಿಸಲು ಹಣಕಾಸು ಸಚಿವಾಲಯ ವಿಶೇಷ ಸಾಲ ಗವಾಕ್ಷಿಯಡಿ ರಾಜ್ಯಗಳಿಗೆ ನೀಡುತ್ತಿರುವ ಎಂಟನೇ ವಾರದ ಕಂತಾಗಿದೆ.

6,000 ಕೋಟಿ ರೂ.ಗಳಲ್ಲಿ 5,516.60 ಕೋಟಿ ರೂ.ಗಳನ್ನು 23 ರಾಜ್ಯಗಳಿಗೆ ಬಿಡುಗಡೆ ಮಾಡಲಾಗಿದೆ ಮತ್ತು ಜಿಎಸ್ಟಿ ಕೌನ್ಸಿಲ್ ಸದಸ್ಯರಾಗಿರುವ ದೆಹಲಿ, ಜಮ್ಮು ಮತ್ತು ಕಾಶ್ಮೀರ ಮತ್ತು ಪುದುಚೇರಿ ಎಂಬ ಮೂರು ಕೇಂದ್ರಾಡಳಿತ ಪ್ರದೇಶಗಳಿಗೆ 483.40 ಕೋಟಿ ರೂ. ವಿತರಿಸಲಾಗಿದೆ.

ಉಳಿದ ಐದು ರಾಜ್ಯಗಳಾದ ಅರುಣಾಚಲ ಪ್ರದೇಶ, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್ ಮತ್ತು ಸಿಕ್ಕಿಂಗಳ ಜಿಎಸ್ಟಿ  ಅನುಷ್ಠಾನದಲ್ಲಿ ಆದಾಯದ ಅಂತರವಿಲ್ಲ.

ಅಕ್ಟೋಬರ್ 2020ರಲ್ಲಿ ವಿಶೇಷ ಸಾಲ ಪಡೆಯುವ ಗವಾಕ್ಷಿ ಸ್ಥಾಪಿಸಲಾಗಿತ್ತು.  ರಾಜ್ಯಗಳಿಗೆ ಈ ಸಾಲಗಳನ್ನು  ನೀಡಲಾಗುತ್ತದೆ ಮತ್ತು ಈ ವಾರ ಎರವಲು ಪಡೆದ ಮೊತ್ತವು ಶೇ. 4.1902 ರಷ್ಟು ಬಡ್ಡಿದರದಲ್ಲಿರುತ್ತದೆ. ಇಲ್ಲಿಯವರೆಗೆ ಕೇಂದ್ರವು ಸರಾಸರಿ ಶೇ.4.6986 ಬಡ್ಡಿದರದಲ್ಲಿ ಮೂಲಕ 48,000 ಕೋಟಿ ರೂ. ನೀಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT