ವಾಣಿಜ್ಯ

ಗ್ರಾಹಕರೇ ಬಿಲ್ ಕೇಳಿ! ಜಿಎಸ್‌ಟಿ ಲಾಟರಿ ಬಹುಮಾನವನ್ನು 10 ಲಕ್ಷದಿಂದ 1 ಕೋಟಿ ರೂಗೆ ಹೆಚ್ಚಿಸಲು ಸರ್ಕಾರ ಚಿಂತನೆ

ಗ್ರಾಹಕರು ಖರೀದಿಸಿದ ವತುಗಳ ಬಿಲ್ ಗಳನ್ನು ಕೇಳೀ ಪಡೆದುಕೊಳ್ಳುವಂತೆ ಮಾಡುವ ಸಲುವಾಗಿ ಸಾರ್ವಜನಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ  ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಸರ್ಕಾರ ಯೋಜಿಸಿದೆ.

ನವದೆಹಲಿ: ಗ್ರಾಹಕರು ಖರೀದಿಸಿದ ವತುಗಳ ಬಿಲ್ ಗಳನ್ನು ಕೇಳೀ ಪಡೆದುಕೊಳ್ಳುವಂತೆ ಮಾಡುವ ಸಲುವಾಗಿ ಸಾರ್ವಜನಿಕರನ್ನು ಇನ್ನಷ್ಟು ಉತ್ತೇಜಿಸುವ ಉದ್ದೇಶದಿಂದ  ಜಿಎಸ್‌ಟಿ ಅಡಿಯಲ್ಲಿ ಲಾಟರಿ ಕೊಡುಗೆಗಳನ್ನು 10 ಲಕ್ಷದಿಂದ 1 ಕೋಟಿ ರೂ.ಗಳವರೆಗೆ ಏರಿಸಲು ಸರ್ಕಾರ ಯೋಜಿಸಿದೆ.

ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಆಡಳಿತದಡಿ ಪ್ರತಿ ಬಿಲ್ ಸಹ ಗ್ರಾಹಕರಿಗೆ ಲಾಟರಿ ಗೆಲ್ಲುವ ಅವಕಾಶವನ್ನು ಒದಗಿಸುತ್ತದೆ ಮತ್ತು ಇದು ತೆರಿಗೆ ಪಾವತಿಸಲು ಅವರಿಗೆ ಉತ್ತೇಜನಕಾರಿಯಾಗಿದೆ ಎಂದು ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ (ಸಿಬಿಐಸಿ) ಸದಸ್ಯ ಜಾನ್ ಜೋಸೆಫ್ ಹೇಳಿದರು. .ನಾವು ಹೊಸ ಲಾಟರಿ ವ್ಯವಸ್ಥೆ ಪರಿಚಯಿಸಲು ಯೋಜಿಸಿದ್ದೇವೆ.ಜಿಎಸ್‌ಟಿಅಡಿಯಲ್ಲಿ ಪ್ರತಿ ಬಿಲ್ ಸಹ  ಲಾಟರಿ ಟಿಕೆಟ್ ನಂತೆ ಇರಲಿದೆ. ಇದು ಡ್ರಾಗೆ ಹೋಗಲಿದ್ದು ಇದಕ್ಕೆ ಬಹುಮಾನವಾಗಿ  1 ಕೋಟಿಗೆಲ್ಲುವ ಅವಕಾಶ ಒದಗಿಸಲಾಗುವುದು.  ಇದು ಗ್ರಾಹಕರ ನಡವಳಿಕೆಯನ್ನು ಬದಲಿಸುವ ಪ್ರಯತ್ನವಾಗಿದೆ"

ಯೋಜನೆಯ ಪ್ರಕಾರ, ಖರೀದಿಸಿದ ಬಿಲ್ ಅನ್ನು ಪೋರ್ಟಲ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ ಮತ್ತು ಡ್ರಾ ಸ್ವಯಂಚಾಲಿತವಾಗಿ ನಡೆಯುವುದಲ್ಲದೆ ವಿಜೇತರಿಗೆ ಅದರ ಮಾಹಿತಿ ಲಭಿಸಲಿದೆ. ಲ್ಕು ಹಂತದ ಜಿಎಸ್‌ಟಿ ಅಡಿಯಲ್ಲಿ ಸರಕು ಮತ್ತು ಸೇವೆಗಳಿಗೆ ಶೇ 5, 12, 18 ಮತ್ತು 28 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಇದಲ್ಲದೆ, ಅತಿ ಹೆಚ್ಚು ತೆರಿಗೆ ದರದ ಮೇಲೆ ಐಷಾರಾಮಿ,ಸಿನ್ ಹಾಗೂ  ಡಿಮೆರಿಟ್ ಸರಕುಗಳ ಮೇಲೆ ಸೆಸ್ ವಿಧಿಸಲಾಗುತ್ತದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಮತ್ತು ರಾಜ್ಯ ಸಹವರ್ತಿಗಳನ್ನು ಒಳಗೊಂಡ ಜಿಎಸ್ಟಿ ಕೌನ್ಸಿಲ್ ಪ್ರಸ್ತಾವಿತ ಲಾಟರಿ ಯೋಜನೆ ಪರಿಶೀಲನೆ ನಡೆಸಲಿದೆ. 

ಲಾಟರಿಯಲ್ಲಿ ಸೇರಿಸಲಾಗುವ ಬಿಲ್ ಗಳಿಗೆ ಕನಿಷ್ಠ ಮಿತಿಯನ್ನು ಕೌನ್ಸಿಲ್ ನಿರ್ಧರಿಸುತ್ತದೆ.ಯೋಜನೆಯ ಪ್ರಕಾರ, ಲಾಟರಿಗಾಗಿ ಹಣವು ಗ್ರಾಹಕ ಕಲ್ಯಾಣ ನಿಧಿಯಿಂದ ಬರುತ್ತದೆ, ಅಲ್ಲಿ ಆಂಟಿ ಪ್ರಾಫಿಟ್ ಬಿಲ್ ಆದಾಯವನ್ನು ವರ್ಗಾಯಿಸಲಾಗುತ್ತದೆ.ಜಿಎಸ್‌ಟಿಆದಾಯದಲ್ಲಿ ಸೋರಿಕೆ ತಡೆಯಲು ರವು ಲಾಟರಿಗಳು ಮತ್ತು ಕ್ಯೂಆರ್ ಕೋಡ್ ಆಧಾರಿತ ವಹಿವಾಟುಗಳನ್ನು ಉತ್ತೇಜಿಸುವುದು ಸೇರಿದಂತೆ  ಝಲವು ಕ್ರಮಗಳಿಗೆ ಮುಂದಾಗಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಅಂಧ ಕರ್ನಾಟಕದ ಆಟಗಾರ್ತಿಯರಿಗೆ ತಲಾ 10 ಲಕ್ಷ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT