ಚೀನಾ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಶೇ.68 ರಷ್ಟು ಮಂದಿ ಒಲವು! 
ವಾಣಿಜ್ಯ

ಚೀನಾ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಶೇ.68 ರಷ್ಟು ಮಂದಿ ಒಲವು!

ಲಡಾಖ್ ನ ಭಾರತದ ಗಡಿಯನ್ನು ಅತಿಕ್ರಮಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾ ದೇಶದ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಹರಳುಗಟ್ಟಲು ಪ್ರಾರಂಭವಾಗಿದೆ.

ನವದೆಹಲಿ: ಲಡಾಖ್ ನ ಭಾರತದ ಗಡಿಯನ್ನು ಅತಿಕ್ರಮಿಸಿ ಭಾರತೀಯ ಯೋಧರನ್ನು ಹತ್ಯೆ ಮಾಡಿದ ಚೀನಾ ದೇಶದ ವಿರುದ್ಧ ಭಾರತದಲ್ಲಿ ಅಭಿಪ್ರಾಯ ಹರಳುಗಟ್ಟಲು ಪ್ರಾರಂಭವಾಗಿದೆ.

ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಚೀನಾದ ಮೊಬೈಲ್, ಟಿವಿ, ಎಲೆಕ್ಟ್ರಾನಿಕ್ ಸರಕುಗಳನ್ನು ತ್ಯಜಿಸಲು ಅಥವಾ ಖರೀದಿಸುವುದನ್ನು ಬಿಡಲು ದೇಶದ ಶೇ.68.2 ರಷ್ಟು ಜನರು ಒಲವು ತೋರಿದ್ದಾರೆ ಎನ್ನುತ್ತಿದೆ ಐಎಎನ್ಎಸ್ ಸಿ ವೋಟರ್ ಸ್ನ್ಯಾಪ್ ಸಮೀಕ್ಷೆ. ಈ ಸಮೀಕ್ಷೆಯ ಪ್ರಕಾರ ಶೇ.68.2 ರಷ್ಟು ಮಂದಿ, ಚೀನಿ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದರೆ, ಶೇ.31.8 ರಷ್ಟು ಮಂದಿ ಇದರಿಂದೆಲ್ಲಾ ಏನೂ ಆಗುವುದಿಲ್ಲ. ಎಲೆಕ್ಟ್ರಾನಿಕ್ ಉದ್ಯಮ ಎಂದಿನಂತೆಯೇ ಮುಂದುವರೆಯಲಿದ್ದು, ಜನ ಎಂದಿನಂತೆಯೇ ಚೀನಾದ ಉತ್ಪನ್ನಗಳನ್ನು ಖರೀದಿಸಲಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಯಸ್ಸಿನ ಆಧಾರದಲ್ಲಿ ನಡೆಸಿದ ಈ ಸಮೀಕ್ಷೆಯಲ್ಲಿ ಎಲ್ಲಾ ವಯೋಮಾನದ ಜನರು- ಮಧ್ಯಮ ವಯಸ್ಸಿನ (45-60) ಶೇ.75 ರಷ್ಟು ಮಂದಿ, 25-45 ವಯಸ್ಸಿನ ಶೇ.66 ರಷ್ಟು ಮಂದಿ, 60 ಹಾಗೂ ಮೇಲ್ಪಟ್ಟ ವಯಸ್ಸಿನ ಶೇ. 79 ರಷ್ಟು ಮಂದಿ, 25 ಹಾಗೂ ಅದಕ್ಕಿಂತ ಕಡಿಮೆ ವಯಸ್ಸಿನ ಶೇ.60.9 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸುವುದಾಗಿ ಹೇಳಿದ್ದಾರೆ.

ಎಲ್ಲಾ ಶೈಕ್ಷಣಿಕ ವರ್ಗದಲ್ಲಿಯೂ ಚೀನಾ ವಿರೋಧಿ ಭಾವನೆ ಸ್ಪಷ್ಟವಾಗಿದೆ. ಕಡಿಮೆ ವಿದ್ಯಾರ್ಹತೆ ಹೊಂದಿರುವ ಶೇ.70 ರಷ್ಟು ಮಂದಿ, ಮಧ್ಯಮ ವಿದ್ಯಾರ್ಹತೆ ಹೊಂದಿರುವ ಶೇ.65 ರಷ್ಟು ಮಂದಿ, ಹೆಚ್ಚು ಶಿಕ್ಷಣ, ವಿದ್ಯಾರ್ಹತೆ ಹೊಂದಿರುವ ಶೇ.64.6 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ಬಹಿಷ್ಕರಿಸಲು ಒಲವು ತೋರಿದ್ದಾರೆ. ಇನ್ನು ಆದಾಯದ ವಿಭಾಗದಲ್ಲಿಯೂ ಚೀನಾ ವಿರೋಧಿ ಭಾವನೆ ದೃಢವಾಗಿದ್ದು, ಕಡಿಮೆ, ಮಧ್ಯಮ, ಹೆಚ್ಚು ಆದಾಯ ಹೊಂದಿರುವ ಶೇ.68 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ವಿರೋಧಿಸುತ್ತಿದ್ದಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ್ದವರನ್ನೂ ಸಹ ಸಮೀಕ್ಷೆಯಲ್ಲಿ ಪ್ರಶ್ನಿಸಲಾಗಿದ್ದು, ವಿಪಕ್ಷಗಳಿಗೆ ಮತಚಲಾವಣೆ ಮಾಡಿದ್ದ ಶೇ.58.2 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನ ಬಹಿಷ್ಕರಿಸುವ ಪರವಾಗಿದ್ದರೆ, ಎನ್ ಡಿಎಗೆ ಮತ ಹಾಕಿದ್ದ ಶೇ.78 ರಷ್ಟು ಮಂದಿ ಚೀನಾ ಉತ್ಪನ್ನಗಳನ್ನು ವಿರೋಧಿಸಬೇಕೆಂಬ ಅಭಿಪ್ರಾಯ ಹೊಂದಿದ್ದಾರೆ. ಇನ್ನು ಶೇ.74 ರಷ್ಟು ಪುರುಷರು ಚೀನಾ ಉತ್ಪನ್ನಗಳು ಬೇಡ ಎನ್ನುತ್ತಿದ್ದರೆ, ಶೇ.61.7 ರಷ್ಟು ಮಹಿಳೆಯರು ಈ ನಿಲುವು ಹೊಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT