ಬಿಪಿಸಿಎಲ್ 
ವಾಣಿಜ್ಯ

ಭಾರತ್ ಪೆಟ್ರೋಲಿಯಂ ಮಾರಾಟಕ್ಕೆ ಬಿಡ್‌ಗಳನ್ನು ಆಹ್ವಾನಿಸಿದ ಕೇಂದ್ರ ಸರ್ಕಾರ!

ಭಾರತದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿ  ಭಾರತ್  ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್ ) ನಲ್ಲಿನ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಇಂದು ಬಿಡ್ ಗಳನ್ನು ಆಹ್ವಾನಿಸಿದೆ

ನವದೆಹಲಿ: ಭಾರತದ ಎರಡನೇ ಅತಿದೊಡ್ಡ ತೈಲ ಶುದ್ಧೀಕರಣ ಮತ್ತು ಮಾರಾಟ ಕಂಪನಿ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್ ) ನಲ್ಲಿನ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು ಕೇಂದ್ರ ಸರ್ಕಾರ ಇಂದು ಬಿಡ್ ಗಳನ್ನು ಆಹ್ವಾನಿಸಿದೆ.

ಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣಾ ಇಲಾಖೆ (ಡಿಐಪಿಎಎಂ) ಬಿಪಿಸಿಎಲ್‌ನ  ಮಾರಾಟಕ್ಕೆ  ಮೇ 2 ರೊಳಗೆ ಬಿಡ್ ಗಳನ್ನು ಆಹ್ವಾನಿಸಿದೆ.

ಬಿಪಿಸಿಎಲ್ ನ 114. 91 ಕೋಟಿ ಇಕ್ವಿಟಿ ಷೇರು ನಲ್ಲಿ ಸರ್ಕಾರ ಹೊಂದಿರುವ ಶೇ. 52. 98 ರಷ್ಟು ಸಂಪೂರ್ಣ ಷೇರನ್ನು ಮಾರಾಟ ಮಾಡಲು  ಕೇಂದ್ರ ಸರ್ಕಾರ ಪ್ರಸ್ತಾಪಿಸಿದೆ. 

ಬಿಪಿಸಿಎಲ್ ಖಾಸಗೀಕರಣ ಪ್ರಕ್ರಿಯೆಯಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಪಾಲ್ಗೊಳ್ಳುವಂತಿಲ್ಲ. 10 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟು ನಿವ್ವಳ ಮೌಲ್ಯ ಹೊಂದಿರುವ ಯಾವುದೇ ಖಾಸಗಿ ಕಂಪನಿಗಳು ಬಿಡ್  ಸಲ್ಲಿಸಲು ಅರ್ಹವಾಗಿರುತ್ತವೆ. ನಾಲ್ಕು ಸಂಸ್ಥೆಗಳಿಗಿಂತ ಹೆಚ್ಚಿನ ಒಕ್ಕೂಟವನ್ನು ಸಹ ಬಿಡ್ ನಲ್ಲಿ ಪಾಲ್ಗೊಳ್ಳಲು ಅವಕಾಶ  ಇರುವುದಿಲ್ಲ ಎಂದು ಹೇಳಿದೆ. 

ಬಿಪಿಸಿಎಲ್ ಖರೀದಿದಾರರಿಗೆ ಭಾರತದ ತೈಲ ಸಂಸ್ಕರಣಾ ಸಾಮರ್ಥ್ಯದ ಶೇಕಡಾ 14 ಮತ್ತು ವಿಶ್ವದ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಲ್ಲಿ ನಾಲ್ಕನೇ ಒಂದು ಭಾಗದಷ್ಟು ಪಾಲನ್ನು ನೀಡಲಾಗುತ್ತದೆ. 87, 388 ಕೋಟಿ ಮಾರುಕಟ್ಟೆ ಬಂಡವಾಳ ಹೊಂದಿರುವ ಬಿಪಿಸಿಎಲ್ ನಲ್ಲಿ ಪ್ರಸ್ತುತ ಸರ್ಕಾರ ಹೊಂದಿರುವ ಷೇರಿನ ಮೌಲ್ಯ 46 ಸಾವಿರ ಕೋಟಿಯಷ್ಟಾಗಿದೆ. 

ಮುಂಬೈ, ಕೊಚ್ಚಿ, ಬಿನ್ನಾ ( ಮಧ್ಯಪ್ರದೇಶ ) ಹಾಗೂ ಅಸ್ಸಾಂನ ನುಮಲಿಘಡದಲ್ಲಿ ಬಿಪಿಸಿಎಲ್  ಕಾರ್ಯನಿರ್ವಹಿಸುತ್ತಿದ್ದು, ವಾರ್ಷಿಕವಾಗಿ 38.3 ಮಿಲಿಯನ್ ಟನ್ ನಷ್ಟು ಸಂಸ್ಕರಣಾ ಸಾಮರ್ಥ್ಯವನ್ನು ಹೊಂದಿವೆ. ಭಾರತದ ಒಟ್ಟಾರೇ ಸಂಸ್ಕರಣಾ ಸಾಮರ್ಥ್ಯ 249.4 ಮಿಲಿಯನ್ ಟನ್ ನಷ್ಟಾಗಿದ್ದು, ಇದರಲ್ಲಿ ಶೇ. 15 ರಷ್ಟು ಬಿಪಿಸಿಎಲ್ ನದ್ದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT