ಸಂಗ್ರಹ ಚಿತ್ರ 
ವಾಣಿಜ್ಯ

ಖಾತೆದಾರರಿಗೆ ಶಾಕ್! ಉಳಿತಾಯ ಖಾತೆಗಳ ಬಡ್ಡಿದರವನ್ನು ಶೇ.3ಕ್ಕಿಳಿಸಿದ ಎಸ್‌ಬಿಐ 

 ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್‌ಬಿಐ  ತನ್ನೆಲ್ಲಾ ಉಳಿತಾಯ ಬ್ಯಾಂಕ್ (ಎಸ್‌ಬಿ) ಖಾತೆಗಳ ಬಡ್ಡಿದರವನ್ನು ಶೇಕಡಾ 3ಕ್ಕೆ ಕಡಿತಮಾಡಿದೆ. ಇದು ಬ್ಯಾಂಕಿನ  ಇದು 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಅಲ್ಲದೆ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ನಗದು ಕಾಯ್ದುಕೊಳ್ಳುವ  ಅವಶ್ಯಕತೆಯನ್ನೂ ಬ್ಯಾಂಕ್ ಮನ್ನಾ ಮಾಡಿದೆ. 'ಗ್ರಾಹಕರ ಹಿತ' ವನ್ನು ಗಮ

ನವದೆಹಲಿ: ದೇಶದ ಅತಿದೊಡ್ಡ ಬ್ಯಾಂಕುಗಳಲ್ಲಿ ಒಂದಾದ ಎಸ್‌ಬಿಐ  ತನ್ನೆಲ್ಲಾ ಉಳಿತಾಯ ಬ್ಯಾಂಕ್ (ಎಸ್‌ಬಿ) ಖಾತೆಗಳ ಬಡ್ಡಿದರವನ್ನು ಶೇಕಡಾ 3ಕ್ಕೆ ಕಡಿತಮಾಡಿದೆ. ಇದು ಬ್ಯಾಂಕಿನ  ಇದು 44.51 ಕೋಟಿ ಖಾತೆದಾರರ ಮೇಲೆ ಪರಿಣಾಮ ಬೀರುತ್ತದೆ. ಇಷ್ಟು ಅಲ್ಲದೆ ಎಸ್‌ಬಿ ಖಾತೆಗಳಲ್ಲಿ ಕನಿಷ್ಠ ನಗದು ಕಾಯ್ದುಕೊಳ್ಳುವ  ಅವಶ್ಯಕತೆಯನ್ನೂ ಬ್ಯಾಂಕ್ ಮನ್ನಾ ಮಾಡಿದೆ. 'ಗ್ರಾಹಕರ ಹಿತ' ವನ್ನು ಗಮನದಲ್ಲಿಟ್ಟುಕೊಂಡು ಬ್ಯಾಂಕ್ ಎಸ್‌ಎಂಎಸ್ ಶುಲ್ಕವನ್ನು ಸಹ ಮನ್ನಾ ಮಾಡಿದೆ, ಇದು ಎಲ್ಲಾ ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ನೀಡುತ್ತದೆ.

"ಎಸ್‌ಬಿ ಖಾತೆಯ ಮೇಲಿನ ಬಡ್ಡಿದರವನ್ನು ಎಲ್ಲಾ ಖಾತೆದಾರರಿಗೆ ಅನ್ವಯಿಸುವಂತೆ ವರ್ಷಕ್ಕೆ  3%ಕ್ಕೆ ಇಳಿಸಲಾಗಿದೆ. " ಎಂದು ಅದು ಹೇಳಿದೆ. ಪ್ರಸ್ತುತ, ಎಸ್‌ಬಿ ಖಾತೆಗಳಲ್ಲಿನ ಬಡ್ಡಿದರವು ಎಸ್‌ಬಿ ಖಾತೆಗಳಲ್ಲಿ 1 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಶೇ 3.25, ಮತ್ತು 1 ಲಕ್ಷ ರೂ.ಗಿಂತ ಹೆಚ್ಚಿನ ಠೇವಣಿಗಳಿಗೆ ಶೇ. 3ರಷ್ಟಿದೆ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ  (ಎಸ್‌ಬಿಐ) ಎಲ್ಲಾ ಎಸ್‌ಬಿ ಖಾತೆಗಳಿಗೆ ಸರಾಸರಿ ಮಾಸಿಕ ಬ್ಯಾಲೆನ್ಸ್ (ಎಎಮ್‌ಬಿ) ನಿರ್ವಹಣೆಯನ್ನು ಮನ್ನಾ ಮಾಡಲು ನಿರ್ಧರಿಸಿದೆ."ಎಲ್ಲಾ 44.51 ಕೋಟಿ ಎಸ್‌ಬಿಐ ಉಳಿತಾಯ ಬ್ಯಾಂಕ್ ಖಾತೆಗಳಲ್ಲಿ ಎಎಮ್‌ಬಿಯನ್ನು ನಿರ್ವಹಿಸುವ ಶುಲ್ಕವನ್ನು ಈಗ ಮನ್ನಾ ಮಾಡಲಾಗಿದೆ" ಎಂದು ಅದು ಹೇಳಿದೆ.

ಪ್ರಸ್ತುತ, ಎಸ್‌ಬಿಐ ಗ್ರಾಹಕರು ಮೆಟ್ರೊ, ಅರೆ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕ್ರಮವಾಗಿ 3,000 ರೂ, 2,000 ಮತ್ತು 1,000 ರೂಗಳ ಎಎಮ್‌ಬಿಯನ್ನು ನಿರ್ವಹಿಸಬೇಕಾಗಿದೆ. ಎಎಮ್‌ಬಿಯನ್ನು ನಿರ್ವಹಿಸದಿದ್ದಕ್ಕಾಗಿ 5 ರಿಂದ 15 ರೂ.ಗಳ ದಂಡ ಮತ್ತು ತೆರಿಗೆಯನ್ನು ಬ್ಯಾಂಕ್ ವಿಧಿಸುತ್ತಿತ್ತು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT