ಸಂಗ್ರಹ ಚಿತ್ರ 
ವಾಣಿಜ್ಯ

ಕೊರೋನಾ ಎಫೆಕ್ಟ್: ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋನಿಂದ 270 ಉದ್ಯೋಗಿಗಳ ವಜಾ

ಕೊರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್ ಗಳು ಮುಚ್ಚಿರುವ ಕಾರಣತೀವ್ರ ಹಿನ್ನೆಡೆ ಅನುಭವಿಸುತ್ತಿರುವ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ 270 ಉದ್ಯೋಗಿಗಳನ್ನು ವಜಾಗೊಳಿಸಿದೆ.

ನವದೆಹಲಿ: ಕೊರೋನಾ ಲಾಕ್ ಡೌನ್ ನಿಂದಾಗಿ ಸಿನಿಮಾ ಮಂದಿರಗಳು, ಮಲ್ಟಿಫ್ಲೆಕ್ಸ್ ಗಳು ಮುಚ್ಚಿರುವ ಕಾರಣತೀವ್ರ ಹಿನ್ನೆಡೆ ಅನುಭವಿಸುತ್ತಿರುವ ಆನ್‌ಲೈನ್ ಟಿಕೆಟ್ ಬುಕಿಂಗ್ ಪ್ಲಾಟ್‌ಫಾರ್ಮ್ ಬುಕ್‌ಮೈಶೋ 270 ಉದ್ಯೋಗಿಗಳನ್ನು ವಜಾಗೊಳಿಸಿದೆ. ಮುಂದಿನ ದಿನಗಳಲ್ಲಿ ಕೋವಿಡ್ ಲಾಕ್ ಡೌನ್ ನಿಂದ ಮತ್ತಷ್ಟು ಆದಾಯ ಕಡಿಮೆಯಾಗುವ ನಿರೀಕ್ಷೆಯೊಡನೆ ಸಂಸ್ಥೆ ಈ ತೀರ್ಮಾನ ತೆಗೆದುಕೊಂಡಿದೆ.

ಓಲಾ, ಉಬರ್,ಜೊಮಾಟೋ,  ಸ್ವಿಗ್ಗಿ ಸೇರಿದಂತೆ ಹಲವಾರು ಟೆಕ್-ಆಧಾರಿತ ಸಂಸ್ಥೆಗಳು  ಕಳೆದ ಕೆಲವು ವಾರಗಳಲ್ಲಿ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿವೆ, ಏಕೆಂದರೆ ಅವರು ಕಡಿಮೆ ಗಳಿಕೆ ಮತ್ತು ವ್ಯವಹಾರದ ಅನಿಶ್ಚಿತತೆ ಎದುರಿಸುತ್ತಿದ್ದಾರೆ.

"ಮುಂದಿನ ತಿಂಗಳುಗಳಲ್ಲಿ ಆದಾಯ ಇನ್ನಷ್ಟು ತಗ್ಗಲಿದೆಎಂದು ನಾವು ನಂಬುವ ಕಾರಣ  ಹೊಂದಾಣಿಕೆ ಮಾಡಲು ನಮ್ಮ ವೆಚ್ಚವನ್ನು ಕಡಿಮೆ ಮಾಡುವ ಕಾರ್ಯವನ್ನು ನಾವು ಮಾಡಲೇಬೇಕಿದೆ. ಭಾರತದ ಮತ್ತು ಜಾಗತಿಕವಾಗಿ ಬುಕ್‌ಮೈಶೋನಲ್ಲಿ 1,450 ಉದ್ಯೋಗಿಗಳ ಪೈಕಿ ವಿವಿಧ ಹಂತದಲ್ಲಿ ಕೆಲಸ ಮಾಡುವ ಸುಮಾರು 270 ಉದ್ಯೋಗಿಗಳನ್ನು ವಜಾಗೊಳಿಸುತ್ತಿದ್ದೇವೆ. "ಬುಕ್‌ಮೈಶೋ ಮುಖ್ಯ ಕಾರ್ಯನಿರ್ವಾಹಕ ಆಶಿಶ್ ಹೆಮ್ರಾಜನಿ ತಮ್ಮ ಸಂಸ್ಥೆಯ ಉದ್ಯೋಗಿಗಳಿಗೆ ಈ ಮೇಲ್ ಮೂಲಕ ಹೇಳಿದ್ದಾರೆ.

ಉದ್ಯೋಗ ನಷ್ಟವಾದವರಿಗೆ ಸಂಸ್ಥೆ  ಹಣಕಾಸಿನ ನೆರವು, ಮುಂದುವರಿದ ಆರೋಗ್ಯ ವಿಮೆ ಮತ್ತು ಹೊರಗುತ್ತಿಗೆ ಬೆಂಬಲವನ್ನು ನೀಡಲು ಉತ್ತಮ ಪ್ರಯತ್ನ ನಡೆಸುತ್ತದೆ. ನಾಯಕತ್ವ ಮಟ್ಟದಲ್ಲಿ ಶೇ 10 ರಿಂದ 50 ರವರೆಗೆ ವೇತನ ಕಡಿತವನ್ನು ಸ್ವಯಂಪ್ರೇರಣೆಯಿಂದ ಕೈಗೆತ್ತಿಕೊಂಡ ತಂಡಗಳು ತಮ್ಮ ಬೋನಸ್‌ಗಳನ್ನು ತ್ಯಜಿಸಿದ್ದಾರೆ. ಕಂಪನಿಯು ಇತರ ಎಲ್ಲ ಖರ್ಚುಗಳನ್ನು ಕಡಿತಗೊಳಿಸಿದೆ ಮತ್ತು ಮಾರಾಟಗಾರರು, ಪಾಲುದಾರರು ಮತ್ತು ಭೂಮಾಲೀಕರೊಂದಿಗೆ ಮರು ಮಾತುಕತೆ ನಡೆಸಿದೆ ಮತ್ತು ಇತರ ಎಲ್ಲ ವೆಚ್ಚ-ಉಳಿತಾಯ ಕ್ರಮಗಳನ್ನು ತೆಗೆದುಕೊಂಡ ನಂತರ "ಕೊನೆಯ ಉಪಾಯ" ವಾಗಿ ಉದ್ಯೋಗಿಗಳ ವಾಜಾಗೆ ಮುಂದಾಗಿದೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT