ಉಮಾ ಶಂಕರ್ 
ವಾಣಿಜ್ಯ

ಕರ್ಣಾಟಕ ಬ್ಯಾಂಕಿನ ಹೆಚ್ಚುವರಿ ನಿರ್ದೇಶಕಿಯಾಗಿ ಆರ್‌ಬಿಐ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಉಮಾ ಶಂಕರ್ ನೇಮಕ

ಆರ್‌ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ಅವರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡಲಾಗಿದ್ದು, ನವೆಂಬರ್ 1-2020 ರಿಂದ ಅವರು ಈ ಹುದ್ದೆಯನ್ನಲಂಕರಿಸಲಿದ್ದಾರೆ.

ಮಂಗಳೂರು: ಆರ್‌ಬಿಐನ ಮಾಜಿ ಅಧಿಕಾರಿ ಎಂ.ಎಸ್.ಉಮಾ ಶಂಕರ್ ಅವರನ್ನು ಕರ್ಣಾಟಕ ಬ್ಯಾಂಕ್ ಹೆಚ್ಚುವರಿ ನಿರ್ದೇಶಕರಾಗಿ (ನಾನ್ ಎಕ್ಸಿಕ್ಯೂಟಿವ್ ಇಂಡಿಪೆಂಡೆಂಟ್) ನೇಮಕ ಮಾಡಲಾಗಿದ್ದು, ನವೆಂಬರ್ 1-2020 ರಿಂದ ಅವರು ಈ ಹುದ್ದೆಯನ್ನಲಂಕರಿಸಲಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಜಿ ಕಾರ್ಯನಿರ್ವಾಹಕ ನಿರ್ದೇಶಕಿ ಎಂ.ಎಸ್. ಉಮಾ ಶಂಕರ್. ಅವರು ಆ ಆರ್‌ಬಿಐನಲ್ಲಿ 37 ವರ್ಷಗಳಿಂದ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಪ್ರಮುಖ  ಹುದ್ದೆ  ಆರ್ಥಿಕ ವಲಯದ ಮೇಲ್ವಿಚಾರಣೆಯ ಕ್ಷೇತ್ರದಲ್ಲಿತ್ತು.  ಆದರೆ ಕರೆನ್ಸಿ ನಿರ್ವಹಣೆ, ವಿದೇಶಿ ವಿನಿಮಯ ಮತ್ತು ಆಂತರಿಕ ಲೆಕ್ಕಪತ್ರ ನಿರ್ವಹಣೆ ಮತ್ತು ಆಡಳಿತದ ಜವಾಬ್ದಾರಿಯನ್ನು ಸಹ ಅವರು ನಿರ್ವಹಿಸಿದ್ದರು.

ಇಂಗ್ಲಿಷ್ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ ನಂತರ, ಅವರು ನೇರ ನೇಮಕಾತಿ ಅಧಿಕಾರಿಯಾಗಿ ಆರ್‌ಬಿಐಗೆ ಸೇರಿದರು. ಅವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಬ್ಯಾಂಕರ್ಸ್ (ಸಿಎಐಐಬಿ) ಯ ಸರ್ಟಿಫೈಡ್ ಅಸೋಸಿಯೇಟ್ ಆಗಿದ್ದಾರೆ ಮತ್ತು ನ್ಯೂಯಾರ್ಕ್ನ ಕೊಲಂಬಿಯಾ ಬ್ಯುಸಿನೆಸ್ ಶಾಲೆಯಲ್ಲಿ ಕಾರ್ಯನಿರ್ವಾಹಕ ಶಿಕ್ಷಣವನ್ನು ಪಡೆದಿದ್ದಾರೆ.

ಇದಲ್ಲದೆ ಕೆಲವು ಸಾರ್ವಜನಿಕ ವಲಯದ ಬ್ಯಾಂಕುಗಳ ಮಂಡಳಿಗಳಲ್ಲಿ ಆರ್‌ಬಿಐ ನಾಮಿನಿಯಾಗಿ ಸಹ  ಉಮಾ ಶಂಕರ್ ಸೇವೆ ಸಲ್ಲಿಸಿದ್ದಾರೆ

ಕರ್ಣಾಟಕ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿ ಇ ಒ ಎಂ ಎಸ್ ಮಹಾಬಲೇಶ್ವರ, ಮಾತನಾಡಿ :ಉಮಾ ಅವರೊಂದಿಗೆ ಹನ್ನೊಂದು ನಿರ್ದೇಶಕರಲ್ಲಿ ಎಂಟು ಮಂದಿ ಸ್ವತಂತ್ರ ನಿರ್ದೇಶಕರಾಗಿದ್ದಾರೆ ಮತ್ತು ಬ್ಯಾಂಕ್ ಮಂಡಳಿಯಲ್ಲಿ ಇಬ್ಬರು ಮಹಿಳೆಯರು ಇರಲಿದ್ದಾರೆ" ಎಂದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT