ವಾಣಿಜ್ಯ

ಭಾರತ ಸರ್ಕಾರದ ವಿರುದ್ಧ 20,000 ಕೋಟಿ ರೂ. ತೆರಿಗೆ ದಾವೆ ಗೆದ್ದ ವೊಡಾಫೋನ್

ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ಹಿಂದಿನ ಸರ್ಕಾರಗಳು ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ  ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಪ್ರಕರಣವನ್ನು ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಪೀಠ ತಿರಸ್ಕರಿಸಿದೆ. 

ನವದೆಹಲಿ: ನ್ಯಾಯಯುತ ಮತ್ತು ನ್ಯಾಯಸಮ್ಮತವಾದ ಸೇವೆಯ ಖಾತರಿಯ ಉಲ್ಲಂಘನೆಯಾಗಿದೆ ಎಂದು ಹಿಂದಿನ ಸರ್ಕಾರಗಳು ವೊಡಾಫೋನ್ ಗ್ರೂಪ್ ಪಿಎಲ್‌ಸಿ ವಿರುದ್ಧ  ಹೂಡಿದ್ದ 22,100 ಕೋಟಿ ರೂ ಮಧ್ಯಸ್ಥಿಕೆ ತೆರಿಗೆ ಪ್ರಕರಣವನ್ನು ಹೇಗ್ ನಲ್ಲಿರುವ ಅಂತರಾಷ್ಟ್ರೀಯ ನ್ಯಾಯಾಲಯದ ಶಾಶ್ವತ ಪೀಠ ತಿರಸ್ಕರಿಸಿದೆ. 

ಇದಲ್ಲದೆ ಕಾನೂನು ಪ್ರಾತಿನಿಧ್ಯ, ನೆರವು ಮತ್ತು ಕಂಪನಿಯು ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಪಾವತಿಸಿದ ಶುಲ್ಕಕ್ಕಾಗಿ ವೊಡಾಫೋನ್ ಗ್ರೂಪ್‌ಗೆ 4.3 ಮಿಲಿಯನ್ ಪೌಂಡ್‌ಗಳನ್ನು ಮರುಪಾವತಿ ಮಾಡುವಂತೆ ನ್ಯಾಯಾಲಯ ಭಾರತ ಸರ್ಕಾರವನ್ನು ಕೋರಿದೆ.

ಈ ಪ್ರಕ್ರಿಯೆಗೆ ಮಧ್ಯಸ್ಥಿಕೆದಾರರನ್ನು ಒಪ್ಪಿಕೊಳ್ಳಲು ಎರಡೂ ಪಕ್ಷಗಳು ವಿಫಲವಾದ ಕಾರಣ ಕಂಪನಿಯು 2016 ರಲ್ಲಿ ಮಧ್ಯಸ್ಥಿಕೆಗಾಗಿ ಅಂತರಾಷ್ಟ್ರೀಯ ನ್ಯಾಯಾಲಯವನ್ನು ಸಂಪರ್ಕಿಸಿತ್ತು. ಭಾರತವು 2009 ರಲ್ಲಿ ವೊಡಾಫೋನ್ ಗ್ರೂಪ್ ನಲ್ಲಿ  11 ಬಿಲಿಯನ್ ಡಾಲರ್ ಒಪ್ಪಂದದಲ್ಲಿ 7,990 ಕೋಟಿ ರೂ.ಗಳ  ಕ್ಯಾಪಿಟಲ್ ಗೈನ್ ತೆರಿಗೆಗಾಗಿ ಬೇಡಿಕೆ ಇಟ್ಟಿತ್ತು. ಕಂಪನಿಗೆ ವಿಧಿಸಲಾದ ಬಡ್ಡಿ ಮತ್ತು ದಂಡವನ್ನು ಸೇರಿಸಿದ ನಂತರ ವೊಡಾಫೋನ್ ಗ್ರೂಪ್ ವಿರುದ್ಧದ ಒಟ್ಟು ಬೇಡಿಕೆ 22,100 ಕೋಟಿ ರೂ. ಗಾಗಿ ದಾವೆ ಹೂಡಲಾಗುತ್ತು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT