ಪ್ರಸಕ್ತ ಸಾಲಿನಲ್ಲಿ  ಶೇ.11ರ ಬೆಳವಣಿಗೆ ಕಾಣಲಿದೆ ದೇಶದ ಜಿಡಿಪಿ: ಎಡಿಬಿ 
ವಾಣಿಜ್ಯ

ಪ್ರಸಕ್ತ ಸಾಲಿನಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಶೇ.11; ಕೋವಿಡ್ ಏರಿಕೆಯಿಂದ ಆರ್ಥಿಕ ಸುಧಾರಣೆಗೆ ಅಪಾಯ: ಎಡಿಬಿ

ಬಲಿಷ್ಠ ಲಸಿಕೆ ಅಭಿಯಾನದ ನಡುವೆ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11 ರ ಬೆಳವಣಿಗೆ ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮುನ್ನೋಟದಲ್ಲಿ ಪ್ರಕಟಿಸಿದೆ. 

ನವದೆಹಲಿ: ಬಲಿಷ್ಠ ಲಸಿಕೆ ಅಭಿಯಾನದ ನಡುವೆ ಭಾರತದ ಆರ್ಥಿಕತೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.11 ರ ಬೆಳವಣಿಗೆ ಕಾಣಲಿದೆ ಎಂದು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ಎಡಿಬಿ) ಮುನ್ನೋಟದಲ್ಲಿ ಪ್ರಕಟಿಸಿದೆ. 

ಇದೇ ವೇಳೆ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದರ ಬಗ್ಗೆಯೂ ಎಚ್ಚರಿಸಿರುವ ಎಡಿಬಿ, ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚಾದಲ್ಲಿ ಆರ್ಥಿಕ ಚೇತರಿಕೆಗೆ ಅದು ಅಪಾಯಕಾರಿಯಾಗಿರಲಿದೆ ಎಂದೂ ಹೇಳಿದೆ. 

ಏ.28 ರಂದು ಏಷ್ಯನ್ ಡೆವಲಪ್ಮೆಂಟ್  ಬ್ಯಾಂಕ್ ನ ಏಷ್ಯನ್ ಡೆವಲಪ್ಮೆಂಟ್ ಔಟ್ ಲುಕ್ (ಎಡಿಒ)-2021 ಬಿಡುಗಡೆಯಾಗಿದೆ. 

2022 ರ ಆರ್ಥಿಕ ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರದ ಮುನ್ನೋಟವನ್ನೂ ಪ್ರಕಟಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ಜಿಡಿಪಿ ಶೇ.7 ರ ಬೆಳವಣಿಗೆ ಕಾಣಲಿದೆ, ದಕ್ಷಿಣ ಏಷ್ಯಾದ ಜಿಡಿಪಿ ಶೇ.9.5 ಕ್ಕೆ ಮತ್ತೆ ಪುಟಿಯಲಿದೆ. 2020 ರಲ್ಲಿ ಇದು  ಶೇ.6 ರಷ್ಟು ಇತ್ತು ಎಂದು ಹೇಳಿದೆ. 

ಕೋವಿಡ್-19 ಲಸಿಕೆಗಳ ಅಭಿವೃದ್ಧಿ ಹಾಗೂ ಜಾಗತಿಕ ಮಟ್ಟದಲ್ಲಿ ಆರೋಗ್ಯ ಚೇತರಿಕೆಯ ಪರಿಣಾಮವಾಗಿ ಅಭಿವೃದ್ಧಿಶೀಲ ಏಷ್ಯಾದಲ್ಲಿ ಆರ್ಥಿಕ ಬೆಳವಣಿಗೆ ಶೇ.7.3 ರಷ್ಟಕ್ಕೆ ಪುಟಿದೇಳಲಿದೆ ಎಂದೂ ಎಡಿಬಿ ಹೇಳಿದೆ. ಇನ್ನು ಚೀನಾ ಬಗ್ಗೆಯೂ ವರದಿಯಲ್ಲಿ ಬೆಳಕು ಚೆಲ್ಲಲಾಗಿದ್ದು, ಬಲಿಷ್ಠ  ರಫ್ತು ಹಾಗೂ ಮನೆಗಳಲ್ಲಿನ ಖರ್ಚು ಪ್ರಮಾಣದಲ್ಲಿ ಗಣನೀಯವಾದ ಚೇತರಿಕೆಯಿಂದ ಚೀನಾದ ಆರ್ಥಿಕತೆ ಈ ವರ್ಷ ಸುಧಾರಣೆಯಾಗಲಿದೆ. 

2021 ರಲ್ಲಿ ಚೀನಾದ ಜಿಡಿಪಿ ಶೇ.8.1ರ ಬೆಳವಣಿಗೆ ಕಾಣಲಿದ್ದು, 2022 ರಲ್ಲಿ ಶೇ. 5.5 ರಷ್ಟು ಬೆಳವಣಿಗೆ ದಾಖಲಿಸಲಿದೆ, 2021ರಲ್ಲಿ  ಪೂರ್ವ ಏಷ್ಯಾದ ಜಿಡಿಪಿ ಶೇ.7.4 ರ ಬೆಳವಣಿಗೆ ದಾಖಲಿಸಲಿದ್ದು, 2022 ರ ವೇಳೆಗೆ ಶೇ.5.1 ರಷ್ಟಿರಲಿದೆ ಎಂದು ವರದಿ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel