ಉದಯ್ ಕೋಟಕ್ 
ವಾಣಿಜ್ಯ

'ಗೂಗಲ್ ಪೇ, ಫೋನ್ ಪೇಗಳು ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿವೆ, ಈಗಲಾದರೂ ಎಚ್ಚೆತ್ತುಕೊಳ್ಳಿ': ಉದಯ್ ಕೋಟಕ್

ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.

ನವದೆಹಲಿ: ಯುಪಿಐ ಆಧಾರಿತ ಪಾವತಿ ಸೇವಾ ಸಂಸ್ಥೆಗಳಾದ ಗೂಗಲ್ ಪೇ ಮತ್ತು ಫೋನ್ ಪೇ ಗಳು ಸಾರ್ವಜನಿಕ ಬ್ಯಾಂಕ್ ಗಳ ವ್ಯವಹಾರವನ್ನು ನುಂಗಿ ಹಾಕುತ್ತಿದ್ದು, ಈಗಲಾದರೂ ಬ್ಯಾಂಕ್ ಗಳು ಎಚ್ಚೆತ್ತುಕೊಳ್ಳಬೇಕು ಎಂದು ಕೋಟಕ್ ಮಹಿಂದ್ರ ಬ್ಯಾಂಕ್ ನ ಸಿಇಒ ಉದಯ್ ಕೊಟಕ್ ಹೇಳಿದ್ದಾರೆ.

ಶುಕ್ರವಾರ ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿ ಮತ್ತು ಬ್ಲೂಮ್‌ಬರ್ಗ್ ಆಯೋಜಿಸಿದ ಇನ್ಫಿನಿಟಿ ಫೋರಮ್‌ನಲ್ಲಿ ಮಾತನಾಡಿದ ಅವರು, 'ಭಾರತೀಯ ಬ್ಯಾಂಕ್‌ಗಳು ಆನ್‌ಲೈನ್ ಪಾವತಿ ವ್ಯವಹಾರವನ್ನು ನಿರ್ಲಕ್ಷಿಸುವುದನ್ನು ಹೀಗೆಯೇ ಮುಂದುವರಿಸಿದರೆ, ತಮ್ಮ ಸಾಂಪ್ರದಾಯಿಕ ವ್ಯವಹಾರದ ಬಹುಪಾಲನ್ನು ಡಿಜಿಟಲ್ ವಾಲೆಟ್ ಪ್ಲಾಟ್‌ಫಾರ್ಮ್‌ಗಳಾದ ಗೂಗಲ್ ಪೇ ಮತ್ತು ಫೋನ್‌ಪೇ ಮೂಲಕ ಕಳೆದುಕೊಳ್ಳಬಹುದು. ಭಾರತೀಯ ಬ್ಯಾಂಕರ್‌ಗಳು ಪಾವತಿ ವ್ಯವಹಾರದ ಬಗ್ಗೆ ದೂರದೃಷ್ಟಿ ಹೊಂದಿದ್ದಾರೆ. ಇದು ಏಕೀಕೃತ ಪಾವತಿ ಇಂಟರ್ಫೇಸ್ (ಯುಪಿಐ) ಪಾವತಿಗಳನ್ನು ಎರಡು ಪ್ರಮುಖ ಡಿಜಿಟಲ್ ವ್ಯಾಲೆಟ್‌ಗಳಿಂದ ಏಕಸ್ವಾಮ್ಯಕ್ಕೆ ಕಾರಣವಾಗುತ್ತದೆ. ಇದು ಶೇ.85ರಷ್ಟು ಮಾರುಕಟ್ಟೆ ಪಾಲನ್ನು ನಿಯಂತ್ರಿಸುತ್ತದೆ ಎಂದು ಎಚ್ಚರಿಸಿದ್ದಾರೆ.

ಅಂತೆಯೇ ಬ್ಯಾಂಕ್ ಗಳು ಕನಿಷ್ಠ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದಲ್ಲಿ ಸಾಂಪ್ರದಾಯಿಕ ಹಣಕಾಸು ಮಾರುಕಟ್ಟೆಗಳ ದೊಡ್ಡ ಭಾಗ ಅದರಿಂದ ಹೊರಬರುವುದನ್ನು ನೀವು ನೋಡುತ್ತೀರಿ. ಈ ಪೈಪೋಟಿಯನ್ನು ಹತ್ತಿಕ್ಕಲು ಬ್ಯಾಂಕರ್‌ಗಳು ಮಾರಾಟ ಕೇಂದ್ರಿತ ವಿಧಾನದ ಬದಲು ಗ್ರಾಹಕ ಕೇಂದ್ರಿತ ವಿಧಾನವನ್ನು ಅಳವಡಿಸಿಕೊಳ್ಳಬೇಕು. ಇದಕ್ಕಾಗಿ, ಸಾಲದಾತರು ಹೆಚ್ಚಿನ ಪ್ರತಿಭೆಗಳನ್ನು ನೇಮಿಸಿಕೊಳ್ಳಬೇಕು. ತಮ್ಮ ತಂತ್ರಜ್ಞಾನಗಳನ್ನು ಗಣನೀಯವಾಗಿ ಹೆಚ್ಚಿಸಿಕೊಳ್ಳಬೇಕು. ಅದೇ ಸಮಯದಲ್ಲಿ, ಈ ಫಿನ್‌ಟೆಕ್ ಕಂಪನಿಗಳ ಡೇಟಾ ಬಳಕೆಯ ಬಗ್ಗೆ ನಿಯಂತ್ರಕರು ಎಚ್ಚರದಿಂದಿರಬೇಕು ಎಂದು ಕೋಟಕ್ ಹೇಳಿದರು.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ವೆನೆಜುವೆಲಾ ಪರಿಸ್ಥಿತಿ ನಿಮಗೂ ಬರಬಹುದು.. ತಡ ಮಾಡದೇ ನಮ್ ಜೊತೆ ಒಪ್ಪಂದ ಮಾಡ್ಕೊಳ್ಳಿ': ಕ್ಯೂಬಾಗೂ Donald Trump ಎಚ್ಚರಿಕೆ!

ಒಂದು ವಾರದ ಚಿಕಿತ್ಸೆ ಬಳಿಕ ಆಸ್ಪತ್ರೆಯಿಂದ ಸೋನಿಯಾ ಗಾಂಧಿ ಡಿಸ್ಚಾರ್ಜ್!

Tubelight in his head: ಹಿಮಂತಾ ಬಿಸ್ವಾ ಶರ್ಮಾ ವಿರುದ್ಧ AIMIM ಮುಖ್ಯಸ್ಥ ಓವೈಸಿ ಕಿಡಿ! ಏನಿದು ವಿವಾದ?

'ಒಬ್ಬ ಅಲ್ಲ.. ಭಾರತದ ಮೇಲೆ ದಾಳಿಗೆ ಸಾವಿರಾರು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧ': ಪಾಕ್ ಮೂಲದ ಉಗ್ರ Masood Azhar ಆಡಿಯೋ ವೈರಲ್!

1st ODI: ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಬ್ಯಾಟಿಂಗ್, ಸಚಿನ್ ತೆಂಡೂಲ್ಕರ್, ಸಂಗಕ್ಕಾರ ದಾಖಲೆ ಮುರಿದ Virat Kohli

SCROLL FOR NEXT