ಸಾಂದರ್ಭಿಕ ಚಿತ್ರ 
ವಾಣಿಜ್ಯ

ಗೂಗಲ್, ಫೇಸ್ ಬುಕ್ ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಮೇಲೆ ತೆರಿಗೆ: ಅಂತಾರಾಷ್ಟ್ರೀಯ ಚೌಕಟ್ಟಿಗೆ ಭಾರತ ಒಪ್ಪಿಗೆ

ಭಾರತವು ಅಂತರಾಷ್ಟ್ರೀಯ ತೆರಿಗೆ ಚೌಕಟ್ಟಿಗೆ ತನ್ನ ಬೆಂಬಲವನ್ನು ಸೂಚಿಸಿದೆ. ಗೂಗಲ್, ಫೇಸ್ ಬುಕ್, ಅಮೆಜಾನ್ ನಂತಹ ತಂತ್ರಜ್ಞಾನ ದೈತ್ಯ ಕಂಪೆನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಕನಿಷ್ಠ ಕಾರ್ಪೊರೇಟ್ ತೆರಿಗೆ ಶೇಕಡಾ 15ರಷ್ಟು ವಿಧಿಸುವಂತೆ ಭಾರತ ಬೇರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ನವದೆಹಲಿ: ಭಾರತವು ಅಂತರಾಷ್ಟ್ರೀಯ ತೆರಿಗೆ ಚೌಕಟ್ಟಿಗೆ ತನ್ನ ಬೆಂಬಲವನ್ನು ಸೂಚಿಸಿದೆ. ಗೂಗಲ್, ಫೇಸ್ ಬುಕ್, ಅಮೆಜಾನ್ ನಂತಹ ತಂತ್ರಜ್ಞಾನ ದೈತ್ಯ ಕಂಪೆನಿಗಳು ಸೇರಿದಂತೆ ಬಹುರಾಷ್ಟ್ರೀಯ ಕಂಪೆನಿಗಳ ಕನಿಷ್ಠ ಕಾರ್ಪೊರೇಟ್ ತೆರಿಗೆ ಶೇಕಡಾ 15ರಷ್ಟು ವಿಧಿಸುವಂತೆ ಭಾರತ ಬೇರೆ ರಾಷ್ಟ್ರಗಳಿಗೆ ಕರೆ ನೀಡಿದೆ.

ಭಾರತದಲ್ಲಿ ವ್ಯಾಪಾರ-ವಹಿವಾಟು ಮಾಡುತ್ತಿರುವ ಬಹುರಾಷ್ಟ್ರೀಯ ಕಂಪೆನಿಗಳಿಗೆ ಅವುಗಳ ಲಾಭದ ಮೊತ್ತದಲ್ಲಿ ಶೇಕಡಾ 20ರಷ್ಟು ತೆರಿಗೆ ಪಾವತಿಸುವಂತೆ ಸೂಚಿಸಬಹುದು ಎಂದು ಹಣಕಾಸು ಸಚಿವಾಲಯ ಮೂಲಗಳು ಹೇಳಿವೆ.

2017-18ರಲ್ಲಿ ಗೂಗಲ್, ಫೇಸ್ ಬುಕ್ ನಂತಹ ಕಂಪೆನಿಗಳು ಭಾರತದಲ್ಲಿ ಕಾರ್ವನಿರ್ವಹಿಸಿ ಒಟ್ಟು 9 ಸಾವಿರದ 800 ಕೋಟಿಯಷ್ಟು ಆದಾಯ ಗಳಿಸಿವೆ. ಅವುಗಳಲ್ಲಿ ಸರ್ಕಾರಕ್ಕೆ ಪಾವತಿಸಿದ ತೆರಿಗೆ ಮೊತ್ತ 240 ಕೋಟಿ ರೂಪಾಯಿ. ಈ ಸಂಸ್ಥೆಗಳ ಮೇಲೆ ವಿಧಿಸಲಾಗುವ ಶೇಕಡಾ 2ರಷ್ಟು ಸಮೀಕರಣ ತೆರಿಗೆಯನ್ನು ಭಾರತವು ಬಿಡಬೇಕಾಗಬಹುದು, ಇದು ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಮಾತುಕತೆಗೆ ಪ್ರಮುಖ ಅಡಚಣೆಯಾಗಿದೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಖಜಾನೆ ಕಾರ್ಯದರ್ಶಿ ಜಾನೆಟ್ ಯೆಲೆನ್ ಅವರು ಐರ್ಲೆಂಡ್, ಹಂಗೇರಿ ಮತ್ತು ಲಿಚ್ಟೆನ್‌ಸ್ಟೈನ್‌ನಂತಹ ದೇಶಗಳಿಗೆ ಪಲಾಯನ ಮಾಡುವ ಅಮೆರಿಕನ್ ಸಂಸ್ಥೆಗಳನ್ನು ಮತ್ತು ಕೆರಿಬಿಯನ್ ಪ್ರದೇಶದಲ್ಲಿರುವ ದೇಶಗಳಿಗೆ ಪಲಾಯನ ಮಾಡುವುದನ್ನು ತಡೆಯಲು ಪ್ರಯತ್ನಿಸಿದ ನಂತರ ತೆರಿಗೆ ಪ್ರಸ್ತಾಪಕ್ಕೆ ದೊಡ್ಡ ಉತ್ತೇಜನ ಸಿಕ್ಕಿತು. ಕಡಿಮೆ ಕಾರ್ಪೊರೇಟ್ ತೆರಿಗೆಗಳು, ಒಇಸಿಡಿಗೆ ಅನುಗುಣವಾಗಿ, ಲಾಭ ವರ್ಗಾವಣೆ ಪದ್ಧತಿಗಳು ದೇಶಗಳಿಗೆ ವಾರ್ಷಿಕವಾಗಿ 100ರಿಂದ 240 ಬಿಲಿಯನ್ ನಷ್ಟದ ಆದಾಯವನ್ನು ವೆಚ್ಚ ಮಾಡುತ್ತವೆ, ಇದು ಜಾಗತಿಕ ಕಾರ್ಪೊರೇಟ್ ತೆರಿಗೆ ಆದಾಯದ ಶೇಕಡಾ 4ರಿಂದ 10ಕ್ಕೆ ಸಮಾನವಾಗಿರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ತಿಹಾರ್ ಜೈಲು ಪರಿಶೀಲಿಸಿದ ಬ್ರಿಟನ್ ತಂಡ: ವಿಜಯ್ ಮಲ್ಯ, ನೀರವ್ ಮೋದಿ ಗಡಿಪಾರು ಸನ್ನಿಹಿತ..?

ಯುಕ್ರೇನ್-ರಷ್ಯಾ ಯುದ್ಧದ ಕುರಿತು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಜೊತೆ ಮೋದಿ ಮಹತ್ವದ ಮಾತುಕತೆ

ಗುಜರಾತ್: ರಾಹುಲ್ ಗಾಂಧಿ ಪರ ವಕಾಲತ್ತು ವಹಿಸಿದ್ದ ವಕೀಲ ಫಿರೋಜ್ ಪಠಾಣ್ ಮೃತದೇಹ ತಾಪಿ ನದಿಯ ದಡದಲ್ಲಿ ಪತ್ತೆ!

ಭಾರತಕ್ಕೆ ಉತ್ತಮ ವಿರೋಧಪಕ್ಷಕ್ಕಾಗಿ ಅಭಿಯಾನ ಅಗತ್ಯ: ಸೀತಾರಾಮನ್

ಧರ್ಮಸ್ಥಳ ಬುರುಡೆ ರಹಸ್ಯ ಬಹಿರಂಗ: ಮುಸುಕುಧಾರಿಗೆ 'ಬುರುಡೆ' ಕೊಟ್ಟಿದ್ದು ಸೌಜನ್ಯ ಮಾವ!

SCROLL FOR NEXT