ಸಂಗ್ರಹ ಚಿತ್ರ 
ವಾಣಿಜ್ಯ

ಸಗಟು ಹಣದುಬ್ಬರ ದಾಖಲೆ ಮಟ್ಟ ಶೇ.12.94ಕ್ಕೆ ಏರಿಕೆ

ಸಗಟು ಮಾರಾಟ ದರ ಆಧರಿಸಿದ ಹಣದುಬ್ಬರ ಸೂಚ್ಯಂಕವು (ಡಬ್ಲ್ಯುಪಿಐ) ಮತ್ತೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ಶೇ.10.49ಕ್ಕೆ ತಲುಪಿದೆ. 

ನವದೆಹಲಿ: ಸಗಟು ಮಾರಾಟ ದರ ಆಧರಿಸಿದ ಹಣದುಬ್ಬರ ಸೂಚ್ಯಂಕವು (ಡಬ್ಲ್ಯುಪಿಐ) ಮತ್ತೆ ಸಾರ್ವಕಾಲಿಕ ದಾಖಲೆಯ ಮಟ್ಟಕ್ಕೆ ಏರಿಕೆಯಾಗಿದ್ದು, ಮೇ ತಿಂಗಳಿನಲ್ಲಿ ಶೇ.10.49ಕ್ಕೆ ತಲುಪಿದೆ. 

ಹಾಲಿ ಪರಿಸ್ಥಿತಿಗೆ ತಯಾರಾದ ಉತ್ಪನ್ನಗಳು ಹಾಗೂ ತೈಲ ಬೆಲೆಯಲ್ಲಿ ಆದ ಹೆಚ್ಚಳ ಹಣದುಬ್ಬರವೇ ಈ ಏರಿಕೆಗೆ ಕಾರಣ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ವರ್ಷದ ಏಪ್ರಿಲ್ ನಲ್ಲಿ ಸಗಟು ಹಣದುಬ್ಬರ ಪ್ರಮಾಣವು ಶೇ 10.49ರಷ್ಟಿತ್ತು. ಹಿಂದಿನ ವರ್ಷದ ಮೇ ತಿಂಗಳಿನಲ್ಲಿ ಇದು ಶೇ (–)3.37ರಷ್ಟಾಗಿತ್ತು.  ಸಗಟು ಹಣದುಬ್ಬರ ಪ್ರಮಾಣವು ಸತತ ಐದನೇ ತಿಂಗಳುಗಳಿಂದ ಹೆಚ್ಚಳ ಆಗುತ್ತಿದೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ, 'ಪೆಟ್ರೋಲ್, ಡೀಸೆಲ್ ಮತ್ತು ತಯಾರಾದ ಉತ್ಪನ್ನಗಳ ಬೆಲೆಯು ಹಿಂದಿನ ವರ್ಷದ ಏಪ್ರಿಲ್‌ನ ಮಟ್ಟಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಾಗಿದೆ. ಹೀಗಾಗಿ ಈ ವರ್ಷದ ಏಪ್ರಿಲ್‌ನಲ್ಲಿ ಹಣದುಬ್ಬರ ಹೆಚ್ಚಾಗಿದೆ ಎಂದು ಅಭಿಪ್ರಾಯಪಟ್ಟಿದೆ.

'ಪ್ರಾಥಮಿಕವಾಗಿ ಕಡಿಮೆ ಮೂಲ ಪರಿಣಾಮ ಮತ್ತು ಕಚ್ಚಾ ಪೆಟ್ರೋಲಿಯಂ, ಖನಿಜ ತೈಲಗಳ ಬೆಲೆಗಳ ಏರಿಕೆ, ಪೆಟ್ರೋಲ್, ಡೀಸೆಲ್, ನಾಫ್ತಾ, ಕುಲುಮೆ ಎಣ್ಣೆ ದರ ಏರಿಕೆಯಿಂದಾಗಿ ಮೇ 2021 ರಲ್ಲಿ ಹಣದುಬ್ಬರ ದರ ಹೆಚ್ಚಾಗಿದೆ. ಹಿಂದಿನ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ತಯಾರಿಸಿದ ಉತ್ಪನ್ನಗಳು ಪ್ರೊಟೀನ್‌ಯುಕ್ತ ಆಹಾರ ವಸ್ತುಗಳಾದ ಮೊಟ್ಟೆ, ಮಾಂಸ ಮತ್ತು ಮೀನಿನ ಬೆಲೆ ಜಾಸ್ತಿ ಆದ ಪರಿಣಾಮವಾಗಿ ಏಪ್ರಿಲ್‌ನಲ್ಲಿ ಆಹಾರ ವಸ್ತುಗಳ ಹಣದುಬ್ಬರವು ಶೇ 4.92ಕ್ಕೆ ತಲುಪಿತ್ತು ಎಂದು ಸಚಿವಾಲಯ ಹೇಳಿದೆ.

ಅಂತೆಯೇ, 'ಇಂಧನ ಮತ್ತು ವಿದ್ಯುತ್ ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡಾ 37.61 ಕ್ಕೆ ಏರಿಕೆಯಾಗಿದ್ದು, ಏಪ್ರಿಲ್‌ನಲ್ಲಿ ಇದು 20.94 ರಷ್ಟಿತ್ತು. ತಯಾರಿಸಿದ ಉತ್ಪನ್ನಗಳಲ್ಲಿ, ಹಣದುಬ್ಬರವು ಮೇ ತಿಂಗಳಲ್ಲಿ ಶೇಕಡಾ 10.83 ರಷ್ಟಿದ್ದು, ಹಿಂದಿನ ತಿಂಗಳಲ್ಲಿ ಈ ಪ್ರಮಾಣ ಶೇಕಡಾ 9.01 ರಷ್ಟಿತ್ತು.  ಅದಾಗ್ಯೂ, ಈರುಳ್ಳಿ ಬೆಲೆ ಏರಿಕೆಯಾಗುತ್ತಿದ್ದರೂ, ಆಹಾರ ಸಾಮಾಗ್ರಿ ವಲಯದಲ್ಲಿನ ಹಣದುಬ್ಬರವು ಮೇ ತಿಂಗಳಲ್ಲಿ ಶೇ 4.31 ಕ್ಕೆ ಇಳಿದಿದೆ. ಮೇ ತಿಂಗಳಲ್ಲಿ ಈರುಳ್ಳಿಯ ಹಣದುಬ್ಬರವು ಶೇಕಡಾ 23.24 ರಷ್ಟಿದ್ದರೆ, ಏಪ್ರಿಲ್‌ನಲ್ಲಿ (-) 19.72 ರಷ್ಟಿತ್ತು.

ಈ ತಿಂಗಳ ಆರಂಭದಲ್ಲಿ ಆರ್‌ಬಿಐ ತನ್ನ ವಿತ್ತೀಯ ನೀತಿಯಲ್ಲಿ ಬಡ್ಡಿದರಗಳನ್ನು ದಾಖಲೆಯ ಕನಿಷ್ಠ ಮಟ್ಟದಲ್ಲಿ ಬದಲಿಸಲಿಲ್ಲ ಮತ್ತು ಹಾಲಿ ಆರ್ಥಿಕ ಬೆಳವಣಿಗೆಯನ್ನು ಬೆಂಬಲಿಸಲು ವಸತಿ ನೀತಿ ನಿಲುವನ್ನು ಉಳಿಸಿಕೊಳ್ಳಲು ಆರ್ ಬಿಐ ಬದ್ಧವಾಗಿತ್ತು. ಮಾರ್ಚ್ 2022 ಕ್ಕೆ ಕೊನೆಗೊಂಡ ಈ ಹಣಕಾಸು ವರ್ಷದಲ್ಲಿ  ಆರ್‌ಬಿಐ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 5.1 ಕ್ಕೆ ಏರಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

'ನೀವು ಶಾಶ್ವತ ವಿಪತ್ತು ನಿಧಿ ಏಕೆ ರಚಿಸಿಲ್ಲ': ಸಿಎಂ ಸಿದ್ದರಾಮಯ್ಯಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರಶ್ನೆ

ಕೇಂದ್ರ ಸರ್ಕಾರ ರೈತರಿಗೆ ದ್ರೋಹ ಬಗೆದಿದೆ: ಡಿ ಕೆ ಶಿವಕುಮಾರ್

ದೇವನಹಳ್ಳಿಯ 1,777 ಎಕರೆ ಜಮೀನು 'ಶಾಶ್ವತ ವಿಶೇಷ ಕೃಷಿ ವಲಯ'; ಭೂಮಿ ಮಾರಾಟಕ್ಕೆ ಕಡಿವಾಣ ಇಲ್ಲ: ಸರ್ಕಾರ

ಹೆಲಿಕಾಪ್ಟರ್, ಸ್ಪೆಷಲ್ ಫ್ಲೈಟ್ ಖರೀದಿ ಮಾಡಲ್ಲ, ಬಾಡಿಗೆ ಪಡೆಯಲು ತೀರ್ಮಾನ: ಡಿಸಿಎಂ ಡಿ.ಕೆ. ಶಿವಕುಮಾರ್

SCROLL FOR NEXT