ವಿಜಯ್ ಮಲ್ಯ 
ವಾಣಿಜ್ಯ

ನನ್ನ ಬಳಿ ಹಣವಿಲ್ಲ, ಭಾರತದ ವಕೀಲರ ಶುಲ್ಕ ಪಾವತಿಸಲು ನೆರವಾಗಿ: ಯುಕೆ ಕೋರ್ಟಿಗೆ ವಿಜಯ್ ಮಲ್ಯ ಮನವಿ

ಭಾರತದಲ್ಲಿನ ತನ್ನ ವಕೀಲರಿಗೆ ಪಾವತಿಸಲು ಲಂಡನ್‌ನ ನ್ಯಾಯಾಲಯದ ನಿಧಿಯಿಂದ 758,000 ಯೂರೋ (ರೂ.7.8 ಕೋಟಿ) ನೀಡುವಂತೆ ವಿಜಯ್ ಮಲ್ಯ ಯುಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ, 

ಲಂಡನ್: ಭಾರತದಲ್ಲಿನ ತನ್ನ ವಕೀಲರಿಗೆ ಪಾವತಿಸಲು ಲಂಡನ್‌ನ ನ್ಯಾಯಾಲಯದ ನಿಧಿಯಿಂದ 758,000 ಯೂರೋ (ರೂ. 7.8 ಕೋಟಿ) ನೀಡುವಂತೆ ವಿಜಯ್ ಮಲ್ಯ ಯುಕೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ, ಅವರ ಆಸ್ತಿಗಳು ಇದಾಗಲೇ ಮುಟ್ಟುಗೋಲಾಗಿರುವುದರಿಂದ ಹಣವನ್ನು ಸ್ವತಃ  ಪಾವತಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಮಲ್ಯ ವಿರುದ್ಧ ದಿವಾಳಿತನದ ಕ್ರಮಗಳು ನಡೆಯುತ್ತಿವೆ.

ಈ ವರ್ಷದ ಫೆಬ್ರವರಿಯಲ್ಲಿ ಡೆಪ್ಯೂಟಿ ಐಸಿಸಿ ನ್ಯಾಯಾಧೀಶ ಬರ್ನೆಟ್ ನೀಡಿದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದ ಮಲ್ಯ ಇದರಲ್ಲಿ ಬಾರ್ನೆಟ್ ತನ್ನ ದಿವಾಳಿತನದ ಅರ್ಜಿಯನ್ನು ಮತ್ತು ಅವರ, 22,500 ಯೂರೋ (23 ಲಕ್ಷ ರೂ.) ಮಾಸಿಕ ಜೀವನವನ್ನು ಸಮರ್ಥಿಸಿಕೊಳ್ಳಲು ಹಿಂದಿನ ಮತ್ತು ಭವಿಷ್ಯದ ಕಾನೂನು ಶುಲ್ಕವನ್ನು ಕೇಳಿದ್ದಾರೆ. ನ್ಯಾಯಾಲಯದ ನಿಧಿಯಿಂದ ಬರಬೇಕಾದ ವೆಚ್ಚಗಳಿಗೆ ಮಲ್ಯ ಬೇಡಿಕೆ ಇಟ್ಟಿದ್ದಾರೆ. ಭಾರತದಲ್ಲಿನ ಅವರ ವಕೀಲರಿಗೆ ಪಾವತಿ ಮಾಡಲು ನ್ಯಾಯಾಲಯದ ನಿಧಿಯಿಂದ ಮಲ್ಯಗೆ  ಒಟ್ಟು 1.2 ಮಿಲಿಯನ್ (12 ಕೋಟಿ ರೂ. ಕೊಡುವಂತೆ  ಬರ್ನೆಟ್ ಹೇಳಿದ್ದರು.

ಮಲ್ಯ ಅವರು ಭಾರತದಲ್ಲಿ ಕಾನೂನು ಸಂಸ್ಥೆಗಳಿಗೆ 569  ಮಿಲಿಯನ್ ಯೂರೋ (5.7 ಕೋಟಿ ರೂ.) ಬಾಕಿ ಉಳಿಸಿದ್ದಾರೆ. ಭಾರತದಲ್ಲಿ ಭವಿಷ್ಯದ ಕಾನೂನು ವೆಚ್ಚಗಳಿಗಾಗಿ ಅವರಿಗೆ 203,000 ಯೂರೋ (2 ಕೋಟಿ ರೂ.) ಅಗತ್ಯವಿದೆ ಎಂದು ಯುಕೆ ನ್ಯಾಯಾಲಯಕ್ಕೆ ತಿಳಿಸಲಾಯಿತು. ವಿಜಯ್ ಮಲ್ಯ ಭಾರತದಲ್ಲಿ ವಕೀಲರ ಶುಲ್ಕವನ್ನು ಪಾವತಿಸಲು ಯುಕೆ ನ್ಯಾಯಾಲಯಕ್ಕೆ ಬೇಡಿಕೆ ಇಟ್ಟಿದ್ದಾರೆ.

ವಿಜಯ್ ಮಲ್ಯ ಯುಕೆ ಯಲ್ಲಿ ದಿವಾಳಿತನ ಅರ್ಜಿ ತಿದ್ದುಪಡಿಯಲ್ಲಿ ಹಿನ್ನೆಡೆ ಅನುಭವಿಸಿದ್ದಾರೆ. ಮಲ್ಯ ಅವರ ವಕೀಲ ಫಿಲಿಪ್ ಮಾರ್ಷಲ್ ಕ್ಯೂಸಿ ನ್ಯಾಯಾಲಯಕ್ಕೆ ತಿಳಿಸಿದ್ದು, ತನ್ನ ಕಕ್ಷಿದಾರರು ಈ ಪ್ರಕರಣಗಳಿಗೆ ಸ್ವತಃ ಹಾಜರಾಗಲು ಸಾಧ್ಯವಿಲ್ಲ, ಏಕೆಂದರೆ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ". ಭಾರತದ ಸುಪ್ರೀಂ ಕೋರ್ಟ್ ಮುಂದೆ ಇರುವ ಮಲ್ಯ ಅವರ ರಾಜಿ ಇತ್ಯರ್ಥ ಪ್ರಸ್ತಾಪ, ತೀರ್ಪಿನ ಸಾಲದ ಮೇಲೆ ವಿಧಿಸಲಾಗುವ 11.5% ಬಡ್ಡಿಗೆ ಅವರ ಸವಾಲು, ಮತ್ತು ಅವರು ಎದುರಿಸುತ್ತಿರುವ ಆರ್ಥಿಕ ಅಪರಾಧಿ ವಿಚಾರಣೆಗಳು ಮೂರು ಸೆಟ್‌ಗಳ ವಿಚಾರಣೆಗಳಿವೆ ಎಂದು ಅವರು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel