ಐಎಂಎಫ್ 
ವಾಣಿಜ್ಯ

ಕೋವಿಡ್-19 ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ, ಗಮನಾರ್ಹ: ಐಎಂಎಫ್

ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ವಾಷಿಂಗ್ ಟನ್: ಕೋವಿಡ್-19 ಪರಿಸ್ಥಿಯಿಂದ ಉಂಟಾಗಿದ್ದ ಬಿಕ್ಕಟ್ಟಿನೆಡೆಗೆ ಭಾರತದ ಪ್ರತಿಕ್ರಿಯೆ ತ್ವರಿತ ಹಾಗೂ ಗಮನಾರ್ಹವಾಗಿತ್ತು ಎಂದು ಐಎಂಎಫ್ ಮೆಚ್ಚುಗೆ ವ್ಯಕ್ತಪಡಿಸಿದೆ.

ಭಾರತ ಸರ್ಕಾರ ಕೋವಿಡ್-19 ಸಾಂಕ್ರಾಮಿಕದ ನಡುವೆಯೂ ಕಾರ್ಮಿಕ ಸುಧಾರಣೆಗಳನ್ನು ಹಾಗೂ ಖಾಸಗೀಕರಣವನ್ನು ಜಾರಿಗೆ ತಂದಿದೆ ಎಂಬುದನ್ನು ಐಎಂಎಫ್ ಉಲ್ಲೇಖಿಸಿದೆ.

ಸದಸ್ಯರೊಂದಿಗೆ ಸಮಾಲೋಚನೆಗಳನ್ನು ನಡೆಸಿದ ಬಳಿಕ ಐಎಂಎಫ್ ಈ ವರದಿಯನ್ನು ಪ್ರಕಟಿಸಿದ್ದು, ಎಚ್ಚರಿಕೆಯನ್ನೂ ನೀಡಿದೆ. "ಸಾಂಕ್ರಾಮಿಕ ಸಂಬಂಧಿತ ಅಸ್ಥಿರತೆಗಳಿಂದ ಆರ್ಥಿಕ ಮುನ್ನೋಟದ ಮೇಲೆ ಕಾರ್ಮೋಡ ಮುಂದುವರೆದಿದ್ದು ಏರಿಳಿತದ ರಿಸ್ಕ್ ಇದ್ದೇ ಇದೆ ಎಂದು ಹೇಳಿದೆ.

ಹೂಡಿಕೆ ಹಾಗೂ ಇನ್ನಿತರ ಅಭಿವೃದ್ಧಿ ಚಾಲನೆಗೆ ಸಂಬಂಧಿಸಿದ ವಿಷಯಗಳ ಮೇಲೆ ಕೋವಿಡ್-19 ನ ನಕಾರಾತ್ಮಕ ಪರಿಣಾಮಗಳು ಆರ್ಥಿಕ ಚೇತರಿಕೆಯನ್ನು ಇನ್ನೂ ಮುಂದೂಡುತ್ತದೆ ಎಂದು ಐಎಂಎಫ್ ಅಭಿಪ್ರಾಯಪಟ್ಟಿದೆ.

ಭಾರತ ಸರ್ಕಾರದ ಕೋವಿಡ್-19 ನಿರ್ವಹಣೆಯ ಬಗ್ಗೆ ಮಾತನಾಡಿರುವ ಐಎಂಎಫ್, ಸರ್ಕಾರದ ತ್ವರಿತ-ಗಮನಾರ್ಹ ಪ್ರತಿಕ್ರಿಯೆಗಳು ಆರ್ಥಿಕ ಬೆಂಬಲ, ದುರ್ಬಲ ವರ್ಗಗಳಿಗೆ ಹೆಚ್ಚಿನ ಬೆಂಬಲ ನೀಡಿರುವುದು,  ವಿತ್ತೀಯ ನೀತಿ ಸರಳೀಕರಣ, ಲಿಕ್ವಿಡಿಟಿ ಪ್ರಾವಿಷನ್ ಹಾಗೂ ಹೊಂದಿಕೊಳ್ಳಬಹುದಾದಂತಹ ಆರ್ಥಿಕ ಕ್ಷೇತ್ರ ಹಾಗೂ ನಿಯಂತ್ರಕ ನೀತಿಗಳನ್ನು ಐಎಂಎಫ್ ಶ್ಲಾಘಿಸಿದೆ.

ಭಾರತದ ಆರ್ಥಿಕ ಬೆಳವಣಿಗೆ 2021-22 ನೇ ಆರ್ಥಿಕ ವರ್ಷದಲ್ಲಿ ಶೇ.9.5 ರಷ್ಟಿರಲಿದೆ. ಹಾಗೂ 2022-23 ರಲ್ಲಿ ಶೇ.8.5 ರಷ್ಟಿರಲಿದೆ ಎಂದು ಅಂದಾಜಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT