ಸಾಂದರ್ಭಿಕ ಚಿತ್ರಗಳು 
ವಾಣಿಜ್ಯ

ಅಂಚೆ ಕಚೇರಿ ಉಳಿತಾಯ ಯೋಜನೆಗಳ ಬಡ್ಡಿ ದರ ಹೆಚ್ಚಳ: ಸುಕನ್ಯಾ ಸಮೃದ್ಧಿ, ಪಿಪಿಎಫ್ ದರಗಳಲ್ಲಿ ಯಥಾಸ್ಥಿತಿ

ಹಿರಿಯ ನಾಗರಿಕರು, ಸಾಮಾನ್ಯ ಹೂಡಿಕೆದಾರರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ) ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿದರಗಳನ್ನು ಕೇಂದ್ರಸರ್ಕಾರ ಹೆಚ್ಚಿಸಿದೆ.

ನವದೆಹಲಿ: ಹಿರಿಯ ನಾಗರಿಕರು, ಸಾಮಾನ್ಯ ಹೂಡಿಕೆದಾರರಿಗೆ ಸಿಹಿ ಸುದ್ದಿ ಹೊರಬಿದ್ದಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್ ಎಸ್ ಸಿ) ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕಿಸಾನ್ ವಿಕಾಸ್ ಪತ್ರ ಮೇಲಿನ ಬಡ್ಡಿದರಗಳನ್ನು ಕೇಂದ್ರಸರ್ಕಾರ ಹೆಚ್ಚಿಸಿದೆ.

ಹಣಕಾಸು ಸಚಿವಾಲಯದ ಅಧಿಸೂಚನೆ ಪ್ರಕಾರ,  ಆದಾಯವು ತೆರಿಗೆಗೆ ಅರ್ಹವಾಗಿರುವ ಶೇ 5ರವರೆಗಿನ ಠೇವಣಿಗಳು ಹಾಗೂ  ಎನ್‌ಎಸ್‌ಸಿ, ಹಿರಿಯ ನಾಗರಿಕರ ಉಳಿತಾಯ ಯೋಜನೆ ಮತ್ತು ಕೆವಿಪಿ ದರಗಳನ್ನು ಶೇಕಡಾ 1.1 ರಷ್ಟು ಹೆಚ್ಚಿಸಲಾಗಿದೆ. ಬದಲಾದ ಬಡ್ಡಿ ದರಗಳು ಜನವರಿ 1, 2023 ಮತ್ತು ಮಾರ್ಚ್ 31, 2023 ರ ನಡುವೆ ಅನ್ವಯಿಸುತ್ತವೆ. ಆದಾಗ್ಯೂ, ಪಿಪಿಎಫ್ ಮತ್ತು ಸುಕನ್ಯಾ ಸಮೃದ್ಧಿ ಯೋಜನೆಗಳ ಬಡ್ಡಿದರಗಳನ್ನು ಕ್ರಮವಾಗಿ ಶೇ.  7.1   ಮತ್ತು 7.6 ರಷ್ಟಿದೆ. 

ಇದು  ಆಯ್ದು ಯೋಜನೆಗಳಿಗೆ ಬಡ್ಡಿ ದರಗಳನ್ನು ಹೆಚ್ಚಿಸಿದ ಎರಡನೇ ತ್ರೈಮಾಸಿಕವಾಗಿದೆ.  ಅಕ್ಟೋಬರ್ ಮುನ್ನ ಸತತ ಒಂಬತ್ತು ತ್ರೈಮಾಸಿಕಗಳಲ್ಲಿ ಈ ಯೋಜನೆಗಳ ಬಡ್ಡಿದರಗಳಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಸಾಮಾನ್ಯವಾಗಿ, ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳನ್ನು ಪ್ರತಿ ತ್ರೈಮಾಸಿಕದಲ್ಲಿ ಪರಿಷ್ಕರಿಸಲಾಗುತ್ತದೆ.

ಇತ್ತೀಚಿಗೆ ಮಾಡಲಾದ ಪರಿಷ್ಕರಣೆ ಪ್ರಕಾರ ಅಂಚೆ ಕಛೇರಿಗಳಲ್ಲಿನ ಒಂದು ವರ್ಷ ಅವಧಿಯ ಠೇವಣಿ ಮೇಲೆ ಶೇ.  6.6, ಎರಡು ವರ್ಷಗಳ ಠೇವಣಿಗೆ ಶೇ.  6.8, ಮೂರು ವರ್ಷಗಳ ಠೇವಣಿಗೆ ಶೇ. 6.9 ಬಡ್ಡಿಯಿತ್ತು.  ಆದರೆ ಐದು ವರ್ಷಗಳ ಠೇವಣಿ ಬಡ್ಡಿಯು ಶೇಕಡಾ 7 ರಷ್ಟಿತ್ತು. 

ಹಿರಿಯ ನಾಗರಿಕರ ಉಳಿತಾಯ ಯೋಜನೆಯು ಜನವರಿ-ಮಾರ್ಚ್ ಅವಧಿಯಲ್ಲಿ ಶೇಕಡಾ 8 ರಷ್ಟು 40 ಬೇಸಿಸ್ ಪಾಯಿಂಟ್‌ಗಳನ್ನು ಗಳಿಸುತ್ತದೆ ಎಂದು ಅದು ಹೇಳಿದೆ. ಕಿಸಾನ್ ವಿಕಾಸ್ ಪತ್ರಗಳ ಮೇಲಿನ ಬಡ್ಡಿದವನ್ನು ಶೇ. 7. 2 ರಷ್ಟು ಹೆಚ್ಚಿಸಿದೆ. ಎನ್ ಎಸ್ ಸಿ ಬಡ್ಡಿ ದರವನ್ನು 20 ಮೂಲ ಅಂಕಗಳಿಂದ ಶೇಕಡಾ 7 ಕ್ಕೆ ಏರಿಸಲಾಗಿದೆ. ಉಳಿತಾಯ ಠೇವಣಿಗಳ ಮೇಲಿನ  ವಾರ್ಷಿಕ ಶೇ. 4 ರಷ್ಟು  ಬಡ್ಡಿ ದರ   ಮುಂದುವರೆದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

SCROLL FOR NEXT