ಇಡ್ಲಿ 
ವಾಣಿಜ್ಯ

12 ತಿಂಗಳಲ್ಲಿ ಸ್ವಿಗ್ಗಿಯಲ್ಲಿ 3.3 ಕೋಟಿ ಪ್ಲೇಟ್ ಇಡ್ಲಿ ಆರ್ಡರ್ 

ವಿಶ್ವ ಇಡ್ಲಿ ದಿನಾಚರಣೆಯ ಅಂಗವಾಗಿ ಇಡ್ಲಿ ಆರ್ಡರ್ ಗಳ ಬಗ್ಗೆ ಸ್ವಿಗ್ಗಿ ಆಸಕ್ತಿದಾಯಕ ಅಂಶವೊಂದನ್ನು ಬಹಿರಂಗಪಡಿಸಿದೆ.

ನವದೆಹಲಿ: ವಿಶ್ವ ಇಡ್ಲಿ ದಿನಾಚರಣೆಯ ಅಂಗವಾಗಿ ಇಡ್ಲಿ ಆರ್ಡರ್ ಗಳ ಬಗ್ಗೆ ಸ್ವಿಗ್ಗಿ ಆಸಕ್ತಿದಾಯಕ ಅಂಶವೊಂದನ್ನು ಬಹಿರಂಗಪಡಿಸಿದೆ. ಕಳೆದ 12 ತಿಂಗಳಲ್ಲಿ 3.3 ಕೋಟಿ ಪ್ಲೇಟ್ ಗಳಷ್ಟು ಇಡ್ಲಿಯನ್ನು ತನ್ನ ವೇದಿಕೆ ಮೂಲಕ ಜನರಿಗೆ ತಲುಪಿಸಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. 

ಹೈದರಾಬಾದ್ ನ ವ್ಯಕ್ತಿಯೋರ್ವ 12 ತಿಂಗಳ ಅವಧಿಯಲ್ಲಿ ಇಡ್ಲಿಗಳಿಗಾಗಿ 6 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾನೆಂಬುದು ಮತ್ತೊಂದು ಅಚ್ಚರಿಯ ಅಂಶವಾಗಿದೆ. 

ಸ್ವಿಗ್ಗಿ ನೀಡಿರುವ ಅಂಕಿ-ಅಂಶಗಳು ಮಾ.30, 2022 ರಿಂದ ಮಾ.25, 2023 ರ ಅವಧಿಯದ್ದಾಗಿದ್ದು ಇಡ್ಲಿಗಳ ಬಗ್ಗೆ ಅಚ್ಚರಿಯ ಹಾಗೂ ಆಸಕ್ತಿದಾಯಕ ಅಂಶಗಳನ್ನು ಹೊಂದಿದೆ. 

ಬೆಂಗಳೂರು, ಹೈದರಾಬಾದ್, ಚೆನ್ನೈ ನಗರಗಳು ಅತಿ ಹೆಚ್ಚು ಇಡ್ಲಿಗಳು ಆರ್ಡರ್ ಮಾಡಿರುವ ನಗರಗಳಾಗಿವೆ ಎಂದು ಸಂಸ್ಥೆ ಹೇಳಿದೆ. ಈ ನಗರಗಳ ನಂತರದ ಸ್ಥಾನಗಳಲ್ಲಿ ಮುಂಬೈ, ಕೊಯಂಬತ್ತೂರು, ಪುಣೆ, ವಿಶಾಖಪಟ್ಟಣ, ದೆಹಲಿ, ಕೋಲ್ಕತ್ತಾ ಹಾಗೂ ಕೊಚ್ಚಿ ನಗರಗಳಿವೆ.

ಇನ್ನು ಇಡ್ಲಿ ಆರ್ಡರ್ ಮಾಡಿರುವ ಅತ್ಯಂತ ಪ್ರಾಶಸ್ತ್ಯ ಸಮಯವೆಂದರೆ ಅದು ಬೆಳಿಗ್ಗೆ 8 ರಿಂದ 10 ವರೆಗೆ ಎಂದು ಸ್ವಿಗ್ಗಿ ಹೇಳಿದ್ದು, ಚೆನ್ನೈ, ಹೈದರಾಬಾದ್, ಬೆಂಗಳೂರು, ಕೊಯಂಬತ್ತೂರು, ಮುಂಬೈ ಗಳಲ್ಲಿ ಮಧ್ಯಾಹ್ನದ ವೇಳೆಯಲ್ಲೂ ಇಡ್ಲಿ ಆರ್ಡರ್ ಮಾಡಿರುವ ಅನೇಕ ಉದಾಹರಣೆಗಳಿವೆ.

ಎಲ್ಲಾ ನಗರಗಳಲ್ಲಿ ಸಾದಾ ಇಡ್ಲಿ ಅತ್ಯಂತ ಜನಪ್ರಿಯವಾಗಿದ್ದು. 2 ಪೀಸ್ ಇರುವ ಒಂದು ಪ್ಲೇಟ್ ಇಡ್ಲಿ ಹೆಚ್ಚು ಆರ್ಡರ್ ಮಾಡಲಾಗಿದೆ ಎಂದು ಸ್ವಿಗ್ಗಿ ಹೇಳಿದೆ. ಉಳಿದೆಲ್ಲಾ ನಗರಗಳಿಗೆ ಹೋಲಿಕೆ ಮಾಡಿದರೆ ಬೆಂಗಳೂರಿನಲ್ಲಿ ರವಾ ಇಡ್ಲಿ ಹೆಚ್ಚು ಜನಪ್ರಿಯವಾಗಿದ್ದು, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದ ನಗರಗಳಲ್ಲಿ ತುಪ್ಪ/ನೇಯಿ ಕರಮ್ ಪೋಡಿ ಇಡ್ಲಿ ಜನಪ್ರಿಯವಾಗಿದೆ.

ಇಡ್ಲಿಗಳಿಗಾಗಿ ಆರ್ಡರ್ ಗಳಿಗೆ ನೆಚ್ಚಿನ ರೆಸ್ಟೋರೆಂಟ್ ಗಳ ಟಾಪ್ 5 ರ ಪಟ್ಟಿಯಲ್ಲಿ ಬೆಂಗಳೂರು,  ಚೆನ್ನೈಗಳಲ್ಲಿ ಅಡ್ಯಾರ್ ಆನಂದ್ ಭವನ್, ಗಳಾಗಿದ್ದರೆ, ಹೈದರಾಬಾದ್ ನಲ್ಲಿ ವರಲಕ್ಷ್ಮಿ ಟಿಫನ್ಸ್, ಉಡುಪೀಸ್ ಉಪಹಾರ್ ಹಾಗೂ ಚೆನ್ನೈ ನಲ್ಲಿ ಸಂಗೀತಾ ವೆಜ್ ರೆಸ್ಟೋರೆಂಟ್ ಗಳಿವೆ ಎಂದು ಸ್ವಿಗ್ಗಿ ಹೇಳಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ವಿಶ್ವಕಪ್ ವಿಜೇತ ಕರ್ನಾಟಕದ ಅಂಧ ಕ್ರಿಕೆಟ್ ಆಟಗಾರ್ತಿಯರಿಗೆ ತಲಾ 10 ಲಕ್ಷ ರೂ ನಗದು, ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ಘೋಷಣೆ

ನಾಯಕತ್ವ ಬದಲಾವಣೆ ಬಗ್ಗೆ ಸಾರ್ವಜನಿಕವಾಗಿ ಚರ್ಚಿಸಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಖರ್ಗೆ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಮತ್ತೊಂದು ಹೆಣ್ಣಿನೊಂದಿಗೆ ಮೋಹ, ನಂಬಿಕೆ ದ್ರೋಹ; ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಅಯೋಧ್ಯ ಧ್ವಜಾರೋಹಣ ನೆರವೇರಿಸಿದ್ದು ಹೇಗೆ?: ಸ್ವಿಚ್ ಅಥವಾ ಹಗ್ಗ ಬಳಸದ ಪ್ರಧಾನಿ; ಈ ಅದ್ಭುತ Video ನೋಡಿ..

SCROLL FOR NEXT