ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ 
ವಾಣಿಜ್ಯ

Repo Rate unchanged: ಸತತ ಏಳನೇ ಬಾರಿಗೆ ರೆಪೋ ದರ ಬದಲಾವಣೆ ಇಲ್ಲ: RBI ಗವರ್ನರ್ ಶಕ್ತಿಕಾಂತ್ ದಾಸ್!

ನಿರೀಕ್ಷೆಯಂತೆಯೇ ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.

ನವದೆಹಲಿ: ನಿರೀಕ್ಷೆಯಂತೆಯೇ ಸತತ ಏಳನೇ ಬಾರಿಗೆ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೇ ಇರಲು ಭಾರತೀಯ ರಿಸರ್ವ್ ಬ್ಯಾಂಕ್ ಶುಕ್ರವಾರ ನಿರ್ಧರಿಸಿದೆ.

ಏಪ್ರಿಲ್ 3ರಿಂದ ನಡೆದ ಆರ್​ಬಿಐನ ಹಣಕಾಸು ನೀತಿ ಸಮಿತಿ ಅಥವಾ ಎಂಪಿಸಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಇಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಂಪಿಸಿ ಸಭೆಯ ನಿರ್ಧಾರಗಳನ್ನು ಪ್ರಕಟಿಸಿದ್ದು, ಸತತ ಏಳನೇ ಬಾರಿ ರೆಪೋ ದರ ಬದಲಾವಣೆ ಆಗಿಲ್ಲ. ಹಾಗೆಯೇ, ಹಣದ ಹರಿವು ಸಂಕುಚಿತಗೊಳಿಸುವ ಕ್ರಮವನ್ನೂ (Withdrawal of Accommodation) ಆರ್​ಬಿಐ ಮುಂದುವರಿಸುತ್ತಿರುವುದನ್ನು ತಿಳಿಸಿದ್ದಾರೆ.

ಎಂಪಿಸಿ ಸಭೆಯಲ್ಲಿ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನೂ ಸೇರಿ ಭಾಗವಹಿಸಿದ್ದ 6 ಮಂದಿ ಪೈಕಿ ಐವರು ರೆಪೋ ದರ ಯಥಾಸ್ಥಿತಿ ಮುಂದುವರಿಸಲು ಒಲವು ತೋರಿದರೆನ್ನಲಾಗಿದೆ. 5:1 ಮತಗಳು ಈ ನಿರ್ಧಾರದ ಪರವಾಗಿ ಬಂದಿದೆ. ಇದರೊಂದಿಗೆ ಕಳೆದ ಒಂದು ವರ್ಷದಿಂದ ಇರುವ ಶೇ. 6.5ರ ಬಡ್ಡಿದರವೇ ಮುಂದುವರಿಯಲಿದೆ.

ನಿರೀಕ್ಷಿತ ನಿರ್ಧಾರ

ವಿವಿಧ ಆರ್ಥಿಕ ತಜ್ಞರು ಮತ್ತು ರೇಟಿಂಗ್ ಏಜೆನ್ಸಿಗಳು ಆರ್​ಬಿಐ ಈ ಬಾರಿಯೂ ರೆಪೋ ದರದಲ್ಲಿ ಬದಲಾವಣೆ ಮಾಡದಿರಬಹುದು ಎಂದು ನಿರೀಕ್ಷಿಸಿದ್ದವು.

ಆರ್ಥಿಕ ಪರಿಸ್ಥಿತಿ ಕುರಿತು ಚರ್ಚೆ

ರೆಪೊ ದರ, ರಿವರ್ಸ್ ರೆಪೊ ದರ ಮತ್ತು ಇತರ ನೀತಿ ದರಗಳ ಕುರಿತು MPCಯ ನಿರ್ಧಾರವನ್ನು ಪ್ರಕಟಿಸುವುದರ ಹೊರತಾಗಿ, ಸಮಿತಿ ಸಭೆ ಪ್ರಸ್ತುತ ದೇಶೀಯ ಮತ್ತು ಜಾಗತಿಕ ಆರ್ಥಿಕ ಪರಿಸ್ಥಿತಿಯನ್ನು ಚರ್ಚಿಸಿವೆ. ಭಾರತದ ಆರ್ಥಿಕತೆಯು 2023ರ ನಾಲ್ಕನೇ ತ್ರೈಮಾಸಿಕದಲ್ಲಿ ಶೇಕಡಾ 8.4ರಷ್ಟು ಬೆಳೆದಿದೆ. ಇದು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಂತ ವೇಗದ ಚಲನೆ. ಫೆಬ್ರವರಿಯಲ್ಲಿ ಚಿಲ್ಲರೆ ಬೆಲೆಗಳು ಹೆಚ್ಚಿದ ಆಹಾರ ಬೆಲೆಗಳಿಂದಾಗಿ ನಿರೀಕ್ಷಿತ ವೇಗಕ್ಕಿಂತ 5.09 ಶೇಕಡಾಕ್ಕೆ ಏರಿತು. RBIನ ನಿಗದಿತ 4ಕ್ಕಿಂತ ಶೇಕಡಾ ಗುರಿ ಹೆಚ್ಚಿದೆ.

ಫೆಬ್ರವರಿಯಲ್ಲಿ, 2024-25ರಲ್ಲಿ ಹಣದುಬ್ಬರವು ಸರಾಸರಿ 4.5%ಕ್ಕೆ ಇಳಿದಿವೆ. ಆರು ಹಣಕಾಸು ನೀತಿ ಸಮಿತಿ ಸದಸ್ಯರಲ್ಲಿ ಒಬ್ಬರು ದರ ಕಡಿತಕ್ಕೆ ಮತ ಹಾಕಿದರು. ಆದರೆ ದರ ಬದಲಾಗಲಿಲ್ಲ. ಭಾರತದಲ್ಲಿ ಹಣದುಬ್ಬರವು ಕೇಂದ್ರೀಯ ಬ್ಯಾಂಕಿನ ಗುರಿಗಿಂತ ಹೆಚ್ಚಾಗಿದೆ. ಪ್ರಮುಖ ಹಣದುಬ್ಬರವು 4%ಗಿಂತ ಕಡಿಮೆಯಾಗಿದೆ. ಇದು ಕೇಂದ್ರ ಬ್ಯಾಂಕ್ ಮುಂದೆ ನೀತಿಯನ್ನು ಸಡಿಲಗೊಳಿಸುವ ಅವಕಾಶ ನೀಡಲಿದೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

Indian Stock Market: ಸತತ ಕುಸಿತ, ಬರೊಬ್ಬರಿ ಶೇ.1ರಷ್ಟು ಕುಸಿದ Sensex, Nifty 50, ರೂಪಾಯಿ ಮೌಲ್ಯ ಇಳಿಕೆ!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT