ಭಾರತೀಯ ಷೇರುಮಾರುಕಟ್ಟೆ 
ವಾಣಿಜ್ಯ

ದಾಖಲೆ ಬರೆದ Sensex; 2 ವಾರಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆ, ಯಾರಿಗೆ ಲಾಭ-ಯಾರಿಗೆ ನಷ್ಟ?

ಶುಕ್ರವಾರ ಭಾರತೀಯ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯದ ವೇಳೆಗೆ 1,330 ಅಂಕಗಳ ಏರಿಕೆ ಕಂಡಿದ್ದು, ಆ ಮೂಲಕ ತನ್ನ ಗಳಿಕೆಯನ್ನು ಸೆನ್ಸೆಕ್ಸ್ 80,416.57ಕ್ಕೆ ಏರಿಸಿಕೊಂಡಿದ್ದು, ಇದು ಸೆನ್ಸೆಕ್ಸ್ ನ 2 ವಾರಗಳ ಹಿಂದಿನ ಗರಿಷ್ಠ ಮಟ್ಟ ಎಂದು ಹೇಳಲಾಗಿದೆ.

ಮುಂಬೈ: ಹಿಂಡನ್ ಬರ್ಗ್ ವರದಿ ಬೆನ್ನಲ್ಲೇ ಭಾರತೀಯ ಷೇರುಮಾರುಕಟ್ಟೆ ತಲ್ಲಣವಾಗುತ್ತದೆ ಎಂಬ ಊಹಾಪೋಹಗಳು ಇದೀಗ ತಲೆಕೆಳಗಾಗಿದ್ದು, ಸೆನ್ಸೆಕ್ಸ್ ಶುಕ್ರವಾರ ದಾಖಲೆಯ ಅಂಶ ಏರಿಕೆ ಕಾಣುವ ಮೂಲಕ 2 ವಾರಗಳ ಹಿಂದಿನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ.

ಹೌದು.. ಶುಕ್ರವಾರ ಭಾರತೀಯ ಷೇರು ಸೂಚ್ಯಂಕ ದಿನದ ವಹಿವಾಟಿನ ಅಂತ್ಯದ ವೇಳೆಗೆ 1,330 ಅಂಕಗಳ ಏರಿಕೆ ಕಂಡಿದ್ದು, ಆ ಮೂಲಕ ತನ್ನ ಗಳಿಕೆಯನ್ನು ಸೆನ್ಸೆಕ್ಸ್ 80,416.57ಕ್ಕೆ ಏರಿಸಿಕೊಂಡಿದ್ದು, ಇದು ಸೆನ್ಸೆಕ್ಸ್ ನ 2 ವಾರಗಳ ಹಿಂದಿನ ಗರಿಷ್ಠ ಮಟ್ಟ ಎಂದು ಹೇಳಲಾಗಿದೆ.

ಅಂತೆಯೇ ನಿಫ್ಟಿ ಕೂಡ ಬರೊಬ್ಬರಿ 397 ಅಂಕಗಳ ಏರಿಕೆ ಕಾಣುವ ಮೂಲಕ ತನ್ನ ಗಳಿಕೆಯನ್ನು 24,500 ಅಂಶಗಳಿಗೆ ಏರಿಕೆ ಮಾಡಿಕೊಂಡಿದೆ.

ಅಮೆರಿಕದಲ್ಲಿ ಹಬ್ಬಿದ್ದ ಆರ್ಥಿಕ ಹಿಂಜರಿತದ ಆತಂಕ ಕ್ರಮೇಣ ತಗ್ಗಿದ್ದು ಇದು ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕ ವಹಿವಾಟಿಗೆ ಕಾರಣ ಎನ್ನಲಾಗಿದೆ. ಅಂತೆಯೇ ಭಾರತದಲ್ಲಿ ಐಟಿ ವಲಯದ ಷೇರುಗಳ ಖರೀದಿ ಭರಾಟೆ ಜೋರಾಗಿರುವುದು ಕೂಡ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ತಜ್ಞರು ಅಭಿಪ್ರಾಪಟ್ಟಿದ್ದಾರೆ.

7 ಲಕ್ಷ ಕೋಟಿ ಲಾಭ

ಬಿಎಸ್ಇ ಮಿಡ್‌ಕ್ಯಾಪ್‌ ಮತ್ತು ಸ್ಮಾಲ್‌ಕ್ಯಾಪ್‌ ಸೂಚ್ಯಂಕಗಳು ಶೇ 2ರಷ್ಟು ಏರಿಕೆಯಾಗಿದ್ದರಿಂದ, ಮಾರುಕಟ್ಟೆಯಲ್ಲಿನ ಲಾಭಾಂಶವು ಹೆಚ್ಚಾಗಿದೆ. ಬಿಎಸ್ಇಯಲ್ಲಿ ಪಟ್ಟಿ ಮಾಡಲಾದ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು 444.3 ಲಕ್ಷ ಕೋಟಿ ರೂಪಾಯಿಗಳಿಂದ ಸುಮಾರು 451.5 ಲಕ್ಷ ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಹೀಗಾಗಿ ಹೂಡಿಕೆದಾರರು ಒಂದೇ ಸೆಷನ್‌ನಲ್ಲಿ 7 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಸುವಂತೆ ಮಾಡಿದೆ.

ಯಾರಿಗೆ ಲಾಭ-ಯಾರಿಗೆ ನಷ್ಟ?

ಟೆಕ್ ಮಹೀಂದ್ರಾ, ಕೋಲ್‌ಗೆಟ್ ಪಾಮೋಲಿವ್ (ಇಂಡಿಯಾ), ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶೂರೆನ್ಸ್ ಕಂಪನಿ, ಇನ್ಫೋ ಎಡ್ಜ್ (ಇಂಡಿಯಾ) ಮತ್ತು ಟ್ರೆಂಟ್ ಸೇರಿದಂತೆ 200ಕ್ಕೂ ಹೆಚ್ಚು ಕಂಪನಿಗಳ ಷೇರುಗಳು ಬಿಎಸ್ಇಯಲ್ಲಿ ಇಂಟ್ರಾಡೇ ವಹಿವಾಟಿನಲ್ಲಿ 52 ವಾರಗಳ ಗರಿಷ್ಠ ಮಟ್ಟವನ್ನು ತಲುಪಿವೆ.‌ ಈ ಕಂಪನಿಗಳು ಅತ್ಯಧಿಕ ಲಾಭ ಗಳಿಸಿದ ಷೇರುಗಳಾಗಿವೆ.

ಅಂತೆಯೇ ಸನ್ ಫಾರ್ಮಾ ಸಂಸ್ಥೆಯ ಷೇರು ಮೌಲ್ಯದಲ್ಲಿ ಅಲ್ಪ ಪ್ರಮಾಣದ ಕುಸಿತವಾಗಿದ್ದು, ಸಂಸ್ಥೆಯ ಷೇರು ಮೌಲ್ಯ 0.03 ರಷ್ಟು ಕುಸಿತವಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ಅರುಣಾಚಲ ಪ್ರದೇಶ ಭಾರತದ "ಅವಿಭಾಜ್ಯ-ಅಳಿಸಲಾಗದ" ಭಾಗ: ಚೀನಾಗೆ ಭಾರತ ತಿರುಗೇಟು

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

ಅಯೋಧ್ಯೆ ಧರ್ಮಧ್ವಜದಲ್ಲಿರುವ ಕೋವಿದಾರ ಮರ: ರಾಜವೃಕ್ಷಕ್ಕೂ, ಶ್ರೀರಾಮಚಂದ್ರನಿಗೂ ಅದೆಂಥ ನಂಟು? ತ್ರೇತಾಯುಗದಲ್ಲಿದ್ದ ದೈವಿಕ ಮರದ ವಿಶೇಷತೆ ಏನು?

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

SCROLL FOR NEXT