ಸಾಂದರ್ಭಿಕ ಚಿತ್ರ 
ವಾಣಿಜ್ಯ

ಇಂಧನ ದಕ್ಷತೆ ಸೂಚ್ಯಂಕದಲ್ಲಿ ಕರ್ನಾಟಕಕ್ಕೆ ಅಗ್ರಸ್ಥಾನ; ಯುಪಿ, ಮಹಾರಾಷ್ಟ್ರದಲ್ಲಿ ಗಮನಾರ್ಹ ಸುಧಾರಣೆ

ರಾಜ್ಯಗಳ ಇಂಧನ ದಕ್ಷತೆ ಸೂಚ್ಯಂಕ 2023 ರಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಉನ್ನತ ಕಾರ್ಯಕ್ಷಮತೆಯ ರಾಜ್ಯವೆಂದು ಪಟ್ಟಿಮಾಡಲ್ಪಟ್ಟಿದೆ.

ನವದೆಹಲಿ: ರಾಜ್ಯಗಳ ಇಂಧನ ದಕ್ಷತೆ ಸೂಚ್ಯಂಕ 2023 ರಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರ ಸ್ಥಾನದಲ್ಲಿದ್ದು, ಉನ್ನತ ಕಾರ್ಯಕ್ಷಮತೆಯ ರಾಜ್ಯವೆಂದು ಪಟ್ಟಿಮಾಡಲ್ಪಟ್ಟಿದೆ. ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ಸಹ ತಮ್ಮ ಕಾರ್ಯಕ್ಷಮತೆಯಲ್ಲಿ ಗಮನಾರ್ಹ ಸುಧಾರಣೆ ಕಂಡಿವೆ ಎಂದು ಸೂಚ್ಯಂಕ ಹೇಳಿದೆ.

ಬ್ಯೂರೋ ಆಫ್ ಎನರ್ಜಿ ಎಫಿಷಿಯನ್ಸಿ(ಬಿಇಇ) ಆರಂಭಿಸಿದ ಸ್ಟೇಟ್ ಎನರ್ಜಿ ಎಫಿಷಿಯನ್ಸಿ ಇಂಡೆಕ್ಸ್(ಎಸ್‌ಇಇಐ), ಅಲೈಯನ್ಸ್ ಫಾರ್ ಎ ಎನರ್ಜಿ ಎಫಿಷಿಯಂಟ್ ಎಕಾನಮಿ(ಎಇಇಇ) ಸಹಯೋಗದೊಂದಿಗೆ ರಾಜ್ಯಗಳಲ್ಲಿ ಇಂಧನ ದಕ್ಷತೆ ಅನುಷ್ಠಾನದ ವಾರ್ಷಿಕ ಪ್ರಗತಿಯನ್ನು ಮೌಲ್ಯಮಾಪನ ಮಾಡುತ್ತದೆ. ಇತ್ತೀಚಿನ ಸೂಚ್ಯಂಕ ಶುಕ್ರವಾರ ಬಿಡುಗಡೆಯಾಗಿದೆ.

ಒಟ್ಟು 100 ಅಂಕಗಳಲ್ಲಿ 86.5 ಅಂಕಗಳೊಂದಿಗೆ ಕರ್ನಾಟಕ SEEI 2023 ರಲ್ಲಿ ಮೊದಲ ಸ್ಥಾನ ಪಡೆದಿದೆ. ಏಕೈಕ ಸಕ್ರಿಯ 'ಇಂಧನ ಸಂರಕ್ಷಣೆ ಮತ್ತು ಇಂಧನ ದಕ್ಷತೆ ನೀತಿ'ಯೊಂದಿಗೆ ರಾಜ್ಯವು ಕಟ್ಟಡಗಳು, ಕೈಗಾರಿಕೆಗಳು, ಕೃಷಿ ಕ್ಷೇತ್ರ, ಸಾರಿಗೆ, ಪುರಸಭೆ ಸೇವೆಗಳಲ್ಲಿ ಗಮನಾರ್ಹ ಕ್ರಮಗಳನ್ನು ಜಾರಿಗೆ ತಂದಿದೆ.

100 ರಲ್ಲಿ 83.25 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿರುವ ಆಂಧ್ರಪ್ರದೇಶ, ನೀತಿ ನಿರೂಪಣೆ, ಹಣಕಾಸು ಪ್ರೋತ್ಸಾಹ, ಸಾಮರ್ಥ್ಯ-ವರ್ಧನೆ ಮತ್ತು ವಿವಿಧ ವಲಯಗಳಲ್ಲಿ ಸಹಯೋಗದ ಉಪಕ್ರಮಗಳನ್ನು ಒಳಗೊಂಡಂತೆ ಇಂಧನ ದಕ್ಷತೆಗೆ ಬಹುಮುಖಿ ವಿಧಾನವನ್ನು ಅಳವಡಿಸಿಕೊಂಡಿದೆ.

SEEI 2021-22 ಕ್ಕೆ ಹೋಲಿಸಿದರೆ ಈ ಬಾರಿ 15 ರಾಜ್ಯಗಳು ತಮ್ಮ ಸ್ಕೋರ್‌ಗಳನ್ನು ಸುಧಾರಿಸಿಕೊಂಡಿವೆ. ಗಮನಾರ್ಹವಾಗಿ, ನಾಲ್ಕು ರಾಜ್ಯಗಳು -- ಉತ್ತರ ಪ್ರದೇಶ, ಗೋವಾ, ಮಹಾರಾಷ್ಟ್ರ ಮತ್ತು ಹರಿಯಾಣ ಹೆಚ್ಚು ಪ್ರಗತಿಯನ್ನು ತೋರಿಸಿವೆ. SEEI 2021-22 ಕ್ಕೆ ಹೋಲಿಸಿದರೆ 10 ಅಂಕಗಳಿಗಿಂತ ಹೆಚ್ಚು ಸುಧಾರಿಸಿವೆ. ಈ ಮೌಲ್ಯಮಾಪನದಲ್ಲಿ ಹೆಚ್ಚು ಸುಧಾರಿತ ರಾಜ್ಯಗಳೆಂದರೆ ಮಹಾರಾಷ್ಟ್ರ ಮತ್ತು ಹರಿಯಾಣ, ಕ್ರಮವಾಗಿ 18.5 ಮತ್ತು 17 ಅಂಕಗಳ ಗಮನಾರ್ಹ ಸ್ಕೋರ್ ಹೆಚ್ಚಳಕ್ಕೆ ಸಾಕ್ಷಿಯಾಗಿವೆ. ಪರಿಣಾಮವಾಗಿ ಒಟ್ಟಾರೆ 72 ಅಂಕಗಳನ್ನು ಪಡೆದಿವೆ.

SEEI ರಾಜ್ಯ ಮಟ್ಟದ ಇಂಧನ ದಕ್ಷತೆಯ ನೀತಿಗಳು, ಕಾರ್ಯಕ್ರಮಗಳು ಮತ್ತು ಹೂಡಿಕೆಗಳಿಗೆ ಸಂಬಂಧಿಸಿದ ಅಂತರವನ್ನು ಗುರುತಿಸುತ್ತದೆ ಮತ್ತು ಪರಿಹರಿಸುತ್ತದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT