ಡೊನಾಲ್ಡ್ ಟ್ರಂಪ್  
ವಾಣಿಜ್ಯ

'ಭಾರತದೊಂದಿಗಿನ ಮಹತ್ವದ ಒಪ್ಪಂದ' ಕುರಿತು Donald Trump ಸುಳಿವು: ಷೇರು ಮಾರುಕಟ್ಟೆ ಏರಿಕೆ

ಇತರ ವಲಯಗಳು ಸಹ ಲಾಭವನ್ನು ಕಂಡವು, ನಿಫ್ಟಿ ಆಟೋ ಶೇ. 0.37 ರಷ್ಟು, ನಿಫ್ಟಿ ಐಟಿ ಶೇ. 0.36 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇ. 0.28 ರಷ್ಟು ಏರಿಕೆ ಕಂಡವು.

ದೇಶೀಯ ಷೇರು ಸೂಚ್ಯಂಕಗಳು ವಾರಾಂತ್ಯ ಶುಕ್ರವಾರ ಕೂಡ ಏರಿಕೆ ಕಂಡುಬಂದಿದೆ. ಜುಲೈ 9 ರ ಸುಂಕದ ಗಡುವನ್ನು ವಿಸ್ತರಿಸುವ ಸುಳಿವುಗಳಂತಹ ಸಕಾರಾತ್ಮಕ ಜಾಗತಿಕ ಸೂಚನೆಗಳು ಇದಕ್ಕೆ ಕಾರಣವಾಗಿದೆ.

ಸುಂಕದ ಗಡುವನ್ನು ಮತ್ತೆ ಮುಂದೂಡಬಹುದು ಎಂದು ಶ್ವೇತಭವನ ಆಡಳಿತ ಸುಳಿವು ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಜೊತ ದೊಡ್ಡ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತಿದ್ದಂತೆ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿದೆ.

ಇಂದು ಬೆಳಗಿನ ವಹಿವಾಟು ಆರಂಭವಾಗುತ್ತಿದ್ದಂತೆ ನಿಫ್ಟಿ 50 ಸೂಚ್ಯಂಕವು 27.65 ಪಾಯಿಂಟ್‌ಗಳು ಅಥವಾ ಶೇಕಡಾ 0.11 ರಷ್ಟು ಏರಿಕೆಯಾಗಿ 25,576.65 ಕ್ಕೆ ಪ್ರಾರಂಭವಾಯಿತು. ಬಿಎಸ್‌ಇ ಸೆನ್ಸೆಕ್ಸ್ ಕೂಡ 18.58 ಪಾಯಿಂಟ್‌ಗಳು ಅಥವಾ ಶೇಕಡಾ 0.02 ರಷ್ಟು ಏರಿಕೆಯಾಗಿ 83,774.45 ಕ್ಕೆ ಪ್ರಾರಂಭವಾಯಿತು.

ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಭಾರತೀಯ ಮಾರುಕಟ್ಟೆಗಳಿಗೆ ನಾಲ್ಕನೇ ಸಕಾರಾತ್ಮಕ ದಿನ ಬರುತ್ತಿದೆ, ಜಾಗತಿಕ ಸೂಚನೆಗಳು ಬೆಂಬಲವಾಗಿ ಪರಿಣಮಿಸಿವೆ. ಜುಲೈ 9 ರ ಸುಂಕದ ಗಡುವನ್ನು ಶ್ವೇತಭವನ ವಕ್ತಾರರು ಅಧ್ಯಕ್ಷ ಟ್ರಂಪ್ ಅದನ್ನು ಮುಂದೂಡಬಹುದು ಎಂದು ಹೇಳುವುದರೊಂದಿಗೆ, ಚೀನಾದಿಂದ ಇನ್ನೂ ಯಾವುದೇ ದೃಢೀಕರಣವಿಲ್ಲದಿದ್ದರೂ, ಅಮೆರಿಕ ತನ್ನ ಚೀನಾ ಸುಂಕ ಒಪ್ಪಂದದ ಕ್ರೋಡೀಕರಣವನ್ನು ಘೋಷಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇ. 0.42 ರಷ್ಟು ಏರಿಕೆಯಾದರೆ, ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇ. 0.41 ರಷ್ಟು ಏರಿಕೆ ಕಂಡವು. ವಲಯವಾರು, ನಿಫ್ಟಿ ಮೆಟಲ್ ಶೇ. 1 ಕ್ಕಿಂತ ಹೆಚ್ಚಿನ ರ್ಯಾಲಿಯೊಂದಿಗೆ ಮುನ್ನಡೆ ಸಾಧಿಸಿತು. ಆರಂಭಿಕ ಅವಧಿಯಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ. 1.16 ರಷ್ಟು ಏರಿಕೆ ಕಂಡಿತು.

ಇತರ ವಲಯಗಳು ಸಹ ಲಾಭವನ್ನು ಕಂಡವು, ನಿಫ್ಟಿ ಆಟೋ ಶೇ. 0.37 ರಷ್ಟು, ನಿಫ್ಟಿ ಐಟಿ ಶೇ. 0.36 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇ. 0.28 ರಷ್ಟು ಏರಿಕೆ ಕಂಡವು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಇನ್ನೂ ಆರು ತಿಂಗಳುಗಳನ್ನು ತೆಗೆದುಕೊಳ್ಳಬಹುದು,

ಯುಎಸ್ ಮಾರುಕಟ್ಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಯುಎಸ್ ಡಾಲರ್ ದುರ್ಬಲಗೊಳ್ಳುತ್ತಿವೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸಹ ಭಾರತೀಯ ಮಾರುಕಟ್ಟೆಗಳಿಗೆ ಮರಳುವ ನಿರೀಕ್ಷೆಯಿದೆ, ಇದು ದ್ರವ್ಯತೆ ಹೊಸ ಹರಿವಿಗೆ ಕಾರಣವಾಗಬಹುದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

CM ಆಗುವ ಕಾಲ ಹತ್ತಿರ ಬಂದಿದೆ ಎಂದು ನಾನು ಹೇಳಿಲ್ಲ: ಸುದ್ದಿ ತಿರುಚಿ ಪ್ರಸಾರ ಮಾಡಿದರೆ ಮಾನನಷ್ಟ ಮೊಕದ್ದಮೆ ಅನಿವಾರ್ಯ; ಡಿ ಕೆ ಶಿವಕುಮಾರ್

2nd test, Day 2: 2ನೇ ದಿನದಾಟದ ಆರಂಭದಲ್ಲೇ ಭಾರತಕ್ಕೆ ಆಘಾತ, ಭೋಜನ ವಿರಾಮದ ವೇಳೆಗೆ 427/4

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

SCROLL FOR NEXT