ಡೊನಾಲ್ಡ್ ಟ್ರಂಪ್  
ವಾಣಿಜ್ಯ

'ಭಾರತದೊಂದಿಗಿನ ಮಹತ್ವದ ಒಪ್ಪಂದ' ಕುರಿತು Donald Trump ಸುಳಿವು: ಷೇರು ಮಾರುಕಟ್ಟೆ ಏರಿಕೆ

ಇತರ ವಲಯಗಳು ಸಹ ಲಾಭವನ್ನು ಕಂಡವು, ನಿಫ್ಟಿ ಆಟೋ ಶೇ. 0.37 ರಷ್ಟು, ನಿಫ್ಟಿ ಐಟಿ ಶೇ. 0.36 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇ. 0.28 ರಷ್ಟು ಏರಿಕೆ ಕಂಡವು.

ದೇಶೀಯ ಷೇರು ಸೂಚ್ಯಂಕಗಳು ವಾರಾಂತ್ಯ ಶುಕ್ರವಾರ ಕೂಡ ಏರಿಕೆ ಕಂಡುಬಂದಿದೆ. ಜುಲೈ 9 ರ ಸುಂಕದ ಗಡುವನ್ನು ವಿಸ್ತರಿಸುವ ಸುಳಿವುಗಳಂತಹ ಸಕಾರಾತ್ಮಕ ಜಾಗತಿಕ ಸೂಚನೆಗಳು ಇದಕ್ಕೆ ಕಾರಣವಾಗಿದೆ.

ಸುಂಕದ ಗಡುವನ್ನು ಮತ್ತೆ ಮುಂದೂಡಬಹುದು ಎಂದು ಶ್ವೇತಭವನ ಆಡಳಿತ ಸುಳಿವು ನೀಡಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಜೊತ ದೊಡ್ಡ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಹೇಳುತ್ತಿದ್ದಂತೆ ಷೇರು ಮಾರುಕಟ್ಟೆ ಹೂಡಿಕೆದಾರರಲ್ಲಿ ಆಶಾಭಾವನೆ ಮೂಡಿದೆ.

ಇಂದು ಬೆಳಗಿನ ವಹಿವಾಟು ಆರಂಭವಾಗುತ್ತಿದ್ದಂತೆ ನಿಫ್ಟಿ 50 ಸೂಚ್ಯಂಕವು 27.65 ಪಾಯಿಂಟ್‌ಗಳು ಅಥವಾ ಶೇಕಡಾ 0.11 ರಷ್ಟು ಏರಿಕೆಯಾಗಿ 25,576.65 ಕ್ಕೆ ಪ್ರಾರಂಭವಾಯಿತು. ಬಿಎಸ್‌ಇ ಸೆನ್ಸೆಕ್ಸ್ ಕೂಡ 18.58 ಪಾಯಿಂಟ್‌ಗಳು ಅಥವಾ ಶೇಕಡಾ 0.02 ರಷ್ಟು ಏರಿಕೆಯಾಗಿ 83,774.45 ಕ್ಕೆ ಪ್ರಾರಂಭವಾಯಿತು.

ಬ್ಯಾಂಕಿಂಗ್ ಮತ್ತು ಮಾರುಕಟ್ಟೆ ತಜ್ಞ ಅಜಯ್ ಬಗ್ಗಾ ಎಎನ್ ಐ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ಭಾರತೀಯ ಮಾರುಕಟ್ಟೆಗಳಿಗೆ ನಾಲ್ಕನೇ ಸಕಾರಾತ್ಮಕ ದಿನ ಬರುತ್ತಿದೆ, ಜಾಗತಿಕ ಸೂಚನೆಗಳು ಬೆಂಬಲವಾಗಿ ಪರಿಣಮಿಸಿವೆ. ಜುಲೈ 9 ರ ಸುಂಕದ ಗಡುವನ್ನು ಶ್ವೇತಭವನ ವಕ್ತಾರರು ಅಧ್ಯಕ್ಷ ಟ್ರಂಪ್ ಅದನ್ನು ಮುಂದೂಡಬಹುದು ಎಂದು ಹೇಳುವುದರೊಂದಿಗೆ, ಚೀನಾದಿಂದ ಇನ್ನೂ ಯಾವುದೇ ದೃಢೀಕರಣವಿಲ್ಲದಿದ್ದರೂ, ಅಮೆರಿಕ ತನ್ನ ಚೀನಾ ಸುಂಕ ಒಪ್ಪಂದದ ಕ್ರೋಡೀಕರಣವನ್ನು ಘೋಷಿಸಿದೆ.

ನಿಫ್ಟಿ ಮಿಡ್‌ಕ್ಯಾಪ್ 100 ಶೇ. 0.42 ರಷ್ಟು ಏರಿಕೆಯಾದರೆ, ನಿಫ್ಟಿ ಸ್ಮಾಲ್‌ಕ್ಯಾಪ್ 100 ಶೇ. 0.41 ರಷ್ಟು ಏರಿಕೆ ಕಂಡವು. ವಲಯವಾರು, ನಿಫ್ಟಿ ಮೆಟಲ್ ಶೇ. 1 ಕ್ಕಿಂತ ಹೆಚ್ಚಿನ ರ್ಯಾಲಿಯೊಂದಿಗೆ ಮುನ್ನಡೆ ಸಾಧಿಸಿತು. ಆರಂಭಿಕ ಅವಧಿಯಲ್ಲಿ ನಿಫ್ಟಿ ಪಿಎಸ್‌ಯು ಬ್ಯಾಂಕ್ ಶೇ. 1.16 ರಷ್ಟು ಏರಿಕೆ ಕಂಡಿತು.

ಇತರ ವಲಯಗಳು ಸಹ ಲಾಭವನ್ನು ಕಂಡವು, ನಿಫ್ಟಿ ಆಟೋ ಶೇ. 0.37 ರಷ್ಟು, ನಿಫ್ಟಿ ಐಟಿ ಶೇ. 0.36 ರಷ್ಟು ಮತ್ತು ನಿಫ್ಟಿ ಫಾರ್ಮಾ ಶೇ. 0.28 ರಷ್ಟು ಏರಿಕೆ ಕಂಡವು. ದ್ವಿಪಕ್ಷೀಯ ವ್ಯಾಪಾರ ಒಪ್ಪಂದ (ಬಿಟಿಎ) ಇನ್ನೂ ಆರು ತಿಂಗಳುಗಳನ್ನು ತೆಗೆದುಕೊಳ್ಳಬಹುದು,

ಯುಎಸ್ ಮಾರುಕಟ್ಟೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪುತ್ತಿವೆ. ಯುಎಸ್ ಡಾಲರ್ ದುರ್ಬಲಗೊಳ್ಳುತ್ತಿವೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಸಹ ಭಾರತೀಯ ಮಾರುಕಟ್ಟೆಗಳಿಗೆ ಮರಳುವ ನಿರೀಕ್ಷೆಯಿದೆ, ಇದು ದ್ರವ್ಯತೆ ಹೊಸ ಹರಿವಿಗೆ ಕಾರಣವಾಗಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್