ಮೆಹ್ಲಿ ಮಿಸ್ತ್ರಿ 
ವಾಣಿಜ್ಯ

ಟಾಟಾ ಟ್ರಸ್ಟ್‌ನಲ್ಲಿ ನಾಟಕೀಯ ಬೆಳವಣಿಗೆ: ಮೆಹ್ಲಿ ಮಿಸ್ತ್ರಿಗೆ ಗೇಟ್‌ಪಾಸ್‌!

ಮೂವರು ಹಿರಿಯ ಟ್ರಸ್ಟಿಗಳಾದ, ಅಧ್ಯಕ್ಷ ನೋಯೆಲ್ ಟಾಟಾ ಮತ್ತು ಇಬ್ಬರು ಉಪಾಧ್ಯಕ್ಷರಾದ ವೇಣು ಶ್ರೀನಿವಾಸನ್ ಹಾಗೂ ವಿಜಯ್ ಸಿಂಗ್ ಅವರು, ಪ್ರತಿಸ್ಪರ್ಧಿ ಬಣದ ನಾಯಕ ಮೆಹ್ಲಿ ಮಿಸ್ತ್ರಿ ಅವರ ಮರು ನೇಮಕಾತಿಯ ವಿರುದ್ಧ ಮತ ಚಲಾಯಿಸಿದ್ದಾರೆ.

ಮುಂಬೈ: ಟಾಟಾ ಸಮೂಹದ ಪ್ರಮುಖ ಚಾರಿಟಬಲ್ ಸಂಸ್ಥೆಯಾದ ಟಾಟಾ ಟ್ರಸ್ಟ್‌ನಲ್ಲಿ ನಾಟಕೀಯ ಬೆಳವಣಿಗೆಯೊಂದು ನಡೆದಿದ್ದು, ರತನ್ ಟಾಟಾ ಅವರ ಆಪ್ತರೆಂದೇ ಪರಿಗಣಿಸಲ್ಪಟ್ಟಿದ್ದ ಮೆಹ್ಲಿ ಮಿಸ್ತ್ರಿ ಅವರನ್ನು ಟ್ರಸ್ಟ್‌ನಿಂದ ಹೊರಹಾಕಲು ಬಹುಮತದ ನಿರ್ಧಾರ ಕೈಗೊಳ್ಳಲಾಗಿದೆ.

ಟಾಟಾ ಟ್ರಸ್ಟ್‌ನ ಟ್ರಸ್ಟಿಗಳಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಮತ್ತು ಭಿನ್ನಾಭಿಪ್ರಾಯಗಳ ನಡುವೆ ಮೂವರು ಹಿರಿಯ ಟ್ರಸ್ಟಿಗಳಾದ, ಅಧ್ಯಕ್ಷ ನೋಯೆಲ್ ಟಾಟಾ ಮತ್ತು ಇಬ್ಬರು ಉಪಾಧ್ಯಕ್ಷರಾದ ವೇಣು ಶ್ರೀನಿವಾಸನ್ ಹಾಗೂ ವಿಜಯ್ ಸಿಂಗ್ ಅವರು, ಪ್ರತಿಸ್ಪರ್ಧಿ ಬಣದ ನಾಯಕ ಮೆಹ್ಲಿ ಮಿಸ್ತ್ರಿ ಅವರ ಮರು ನೇಮಕಾತಿಯ ವಿರುದ್ಧ ಮತ ಚಲಾಯಿಸಿದ್ದಾರೆ ಎಂದು ವರದಿಯಾಗಿದೆ. ಮಿಸ್ತ್ರಿ ಅವರ ಅಧಿಕಾರವಧಿ ಇಂದು ಕೊನೆಗೊಳ್ಳುತ್ತದೆ.

ಈ ಬೆಳವಣಿಗೆಯು ಟಾಟಾ ಸಮೂಹದ ಉನ್ನತ ಮಟ್ಟದಲ್ಲಿ ಮತ್ತೊಂದು ದೊಡ್ಡ ಬದಲಾವಣೆಗೆ ಕಾರಣವಾಗಿದೆ.

ಮೂಲವೊಂದರ ಪ್ರಕಾರ, ಇತರ ಇಬ್ಬರು ಟ್ರಸ್ಟಿಗಳಾದ ಡೇರಿಯಸ್ ಖಂಬಟಾ ಮತ್ತು ಪ್ರಮಿತ್ ಜಾವೇರಿ ಅವರು ಮಿಸ್ತ್ರಿ ಅವರು ಸರ್ ದೊರಾಬ್ಜಿ ಟಾಟಾ ಟ್ರಸ್ಟ್‌ನ ಟ್ರಸ್ಟಿಯಾಗಿ ಮುಂದುವರಿಯುವುದನ್ನು ಬೆಂಬಲಿಸಿದರು. ಆದರೆ ಮೂವರು ಪ್ರಮುಖ ಟ್ರಸ್ಟಿಗಳು ಮುಂದುವರಿಯುವುದರ ವಿರುದ್ಧ ಮತ ಚಲಾಯಿಸಿದ್ದರಿಂದ ಮಿಸ್ತ್ರಿ ಅವರ ನಿರ್ಗಮನ ಅನಿವಾರ್ಯವಾಗಿದೆ.

ಜೆಹಾಂಗೀರ್ ಎಚ್‌ಸಿ ಜೆಹಾಂಗೀರ್ ಹೇಗೆ ಮತ ಚಲಾಯಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಮತ್ತು ದಿವಂಗತ ಟಾಟಾ ಅವರ ಏಕಾಂಗಿ ಕಿರಿಯ ಸಹೋದರ ಜಿಮ್ಮಿ ಟಾಟಾ ಅವರು ಮತದಾನದಲ್ಲಿ ಭಾಗವಹಿಸಿದ್ದರೇ ಎಂಬುದು ಸ್ಪಷ್ಟವಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಕಾಕತಾಳೀಯವೆಂಬಂತೆ, 2016ರ ಅಕ್ಟೋಬರ್ ತಿಂಗಳಲ್ಲೇ ಮೆಹ್ಲಿ ಮಿಸ್ತ್ರಿ ಅವರ ಸೋದರ ಸಂಬಂಧಿ ಸೈರಸ್ ಮಿಸ್ತ್ರಿ ಅವರನ್ನು ಟಾಟಾ ಸನ್ಸ್ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು. ಈಗ ಅದೇ ತಿಂಗಳಲ್ಲಿ ಮೆಹ್ಲಿ ಮಿಸ್ತ್ರಿ ಕೂಡ ಪದಚ್ಯುತಿಯ ಅಂಚಿನಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಕಿನಾಡಗೆ ಅಪ್ಪಳಿಸಿದ Cyclone Montha: 3-4 ಗಂಟೆಗಳ ಕಾಲ ಭಾರಿ ಮಳೆ; ಗಂಟೆಗೆ 110 ಕಿ.ಮೀ ವೇಗ!

ಕದನ ವಿರಾಮ ಉಲ್ಲಂಘನೆ: ಗಾಜಾಪಟ್ಟಿ ಮೇಲೆ ಪ್ರಬಲ ದಾಳಿಗೆ ಆದೇಶಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು!

ಇಂಡಿಯಾ ಬ್ಲಾಕ್ ಪ್ರಣಾಳಿಕೆ 'ಬಿಹಾರ್ ಕಾ ತೇಜಸ್ವಿ ಪ್ರಾಣ್' ಬಿಡುಗಡೆ; ಪ್ರತಿ ಕುಟುಂಬಕ್ಕೂ ಸರ್ಕಾರಿ ನೌಕರಿ ಭರವಸೆ!

'ಕರ್ಮ ರಿಟರ್ನ್ಸ್': 'The Kerala Files' ವಿರೋಧಿಸಿದ್ದ CPM ನಾಯಕನಿಗೂ ತಟ್ಟಿದ love Jihad ಬಿಸಿ, ಪುತ್ರಿಯ video ವೈರಲ್!

ಕೇಂದ್ರ ಚುನಾವಣಾ ಆಯುಕ್ತರು ರಾಜಕೀಯ ಪುಢಾರಿ: ನಾಲಿಗೆ ಹರಿಬಿಟ್ಟ ಯತೀಂದ್ರ ಸಿದ್ದರಾಮಯ್ಯ

SCROLL FOR NEXT