ಆರ್ ಬಿಐ 
ವಾಣಿಜ್ಯ

ಕೇಂದ್ರ ಸರ್ಕಾರಕ್ಕೆ ದಾಖಲೆಯ 2.87 ಲಕ್ಷ ಕೋಟಿ ರೂ ಡಿವಿಡೆಂಡ್ ಕೊಟ್ಟ RBI

ಜಾಗತಿಕ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಅವಕಾಶ ಮತ್ತು ಹಣಕಾಸು ಸಡಿಲಿಕೆ ಒದಗಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ..

ಮುಂಬೈ: ಭಾರತೀಯ ರಿಸರ್ವ್ ಬ್ಯಾಂಕ್ (RBI)ಕೇಂದ್ರ ಸರ್ಕಾರಕ್ಕೆ ಶುಕ್ರವಾರ 2025-26 ಹಣಕಾಸು ವರ್ಷದ ಲಾಭಾಂಶ ನೀಡಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ದಾಖಲೆಯ ₹2.87 ಲಕ್ಷ ಕೋಟಿ ರೂಗಳ ಡಿವಿಡೆಂಡ್ ಘೋಷಣೆ ಮಾಡಿದೆ.

ಜಾಗತಿಕ ಭೌಗೋಳಿಕ-ರಾಜಕೀಯ ಸವಾಲುಗಳ ನಡುವೆಯೂ ಕೇಂದ್ರ ಸರ್ಕಾರಕ್ಕೆ ಹೆಚ್ಚುವರಿ ಆರ್ಥಿಕ ಅವಕಾಶ ಮತ್ತು ಹಣಕಾಸು ಸಡಿಲಿಕೆ ಒದಗಿಸುವ ಉದ್ದೇಶದಿಂದ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

2024-25 ಹಣಕಾಸು ವರ್ಷದ ಲಾಭಾಂಶ ಅಥವಾ ಅಧಿಕ ಮೊತ್ತ ವರ್ಗಾವಣೆ ₹2.69 ಲಕ್ಷ ಕೋಟಿ ಆಗಿದ್ದು, ಇದು 2023-24ರ ಪಾವತಿಗಿಂತ ಶೇಕಡಾ 27.4ರಷ್ಟು ಹೆಚ್ಚು ಆಗಿದೆ.

ಇದಕ್ಕೂ ಮೊದಲು RBI, 2023-24 ಹಣಕಾಸು ವರ್ಷಕ್ಕೆ ಸರ್ಕಾರಕ್ಕೆ ₹2.1 ಲಕ್ಷ ಕೋಟಿ ಡಿವಿಡೆಂಡ್ ವರ್ಗಾಯಿಸಿತ್ತು. ಅಂತೆಯೇ 2022-23ರಲ್ಲಿ ಈ ಮೊತ್ತ ₹87,416 ಕೋಟಿ ಆಗಿತ್ತು.

ಈ ಡಿವಿಡೆಂಡ್ ಪಾವತಿ ಕುರಿತ ನಿರ್ಧಾರವನ್ನು RBI ಗವರ್ನರ್ ಸಂಜಯ್ ಮಲ್ಹೋತ್ರಾ (Sanjay Malhotra) ಅವರ ಅಧ್ಯಕ್ಷತೆಯಲ್ಲಿ ನಡೆದ RBI ಕೇಂದ್ರ ನಿರ್ದೇಶಕ ಮಂಡಳಿಯ 623ನೇ ಸಭೆಯಲ್ಲಿ ಕೈಗೊಳ್ಳಲಾಯಿತು.

RBI ಬಿಡುಗಡೆ ಮಾಡಿದ ಪ್ರಕಟಣೆಯ ಪ್ರಕಾರ, “ಅಪಾಯ ಮೀಸಲು ಮತ್ತು ಕಾನೂನುಬದ್ಧ ನಿಧಿಗಳಿಗೆ ವರ್ಗಾವಣೆಗೆ ಮುನ್ನದ ನಿವ್ವಳ ಆದಾಯವು 2025-26 ಹಣಕಾಸು ವರ್ಷದಲ್ಲಿ ₹3,95,972.10 ಕೋಟಿಗೆ ಏರಿಕೆಯಾಗಿದೆ. ಇದು 2024-25ರಲ್ಲಿ ದಾಖಲಾಗಿದ್ದ ₹3,13,455.77 ಕೋಟಿಯೊಂದಿಗೆ ಹೋಲಿಸಿದರೆ ಗಮನಾರ್ಹ ಏರಿಕೆಯಾಗಿದೆ' ಎಂದು ಹೇಳಿದೆ.

ಇದೇ ವೇಳೆ, ಕೇಂದ್ರ ಬ್ಯಾಂಕಿನ ಬ್ಯಾಲೆನ್ಸ್ ಶೀಟ್‌ ಕೂಡ ಮಹತ್ತರವಾಗಿ ವಿಸ್ತರಗೊಂಡಿದ್ದು, 2026ರ ಮಾರ್ಚ್ 31ರ ವೇಳೆಗೆ ಅದು 20.61 ಶೇಕಡಾ ಏರಿಕೆಯೊಂದಿಗೆ ₹91,97,121.08 ಕೋಟಿಗೆ ತಲುಪಿದೆ ಎಂದು ಆರ್ ಬಿಐ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್