ಶ್ರೀಶಾಂತ್ 
ಬಾಲಿವುಡ್

'ಕ್ಯಾಬರೆ'ಯಲ್ಲಿ ಕ್ರಿಕೆಟಿಗ ಶ್ರೀಶಾಂತ್‌

ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ನಿಷೇಧಕ್ಕೊಳಗಾದ ಕ್ರಿಕೆಟಿಗ ಶ್ರೀಶಾಂತ್ ಈಗ ಏನು ಮಾಡುತ್ತಿದ್ದಾರೆ?

ಐಪಿಎಲ್‌ನಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿ ನಿಷೇಧಕ್ಕೊಳಗಾದ ಕ್ರಿಕೆಟಿಗ ಶ್ರೀಶಾಂತ್ ಈಗ ಏನು ಮಾಡುತ್ತಿದ್ದಾರೆ?
ಉತ್ತರ: ಅವರು 'ಕ್ಯಾಬರೆ'ಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾರೆ!
ಹೌದಾ? ಎಂದು ಹುಬ್ಬೇರಿಸಬೇಡಿ.  ಕ್ಯಾಬರೆ ಅನ್ನೋದು ಹೊಸ ಚಿತ್ರವೊಂದರ ಹೆಸರು ಅಷ್ಟೇ. ಬೌಲರ್ ಮಾತ್ರವಲ್ಲ  ಉತ್ತಮ ಡ್ಯಾನ್ಸರ್ ಕೂಡಾ ಆಗಿರುವ ಶ್ರೀಶಾಂತ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಂದ ಹಾಗೆ ಶ್ರೀಶಾಂತ್‌ನ್ನು ಬಾಲಿವುಡ್‌ಗೆ ಪರಿಚಯಿಸುತ್ತಿರುವವರು ಬೇರೆ ಯಾರೂ ಅಲ್ಲ. ಖ್ಯಾತ ನಿರ್ದೇಶಕ, ನಿರ್ಮಾಪಕ ಮಹೇಶ್ ಭಟ್ ಪುತ್ರಿ ಪೂಜಾ ಭಟ್!

ಪೂಜಾ ಭಟ್ ನಿರ್ಮಿಸುತ್ತಿರುವ 'ಕ್ಯಾಬರೆ' ಹೆಸರಿನ ಚಿತ್ರದಲ್ಲಿ ಶ್ರೀಶಾಂತ್ ಡ್ಯಾನ್ಸರ್ ಸಲಹೆಗಾರನಾಗಿ ಬಣ್ಣ ಹಚ್ಚಲಿದ್ದಾರೆ.

ಪ್ರಸ್ತುತ ಸಿನಿಮಾದಲ್ಲಿ ರಿಚಾ ಚಡ್ಡಾ ಡ್ಯಾನ್ಸರ್ ಆಗಿ ಅಭಿನಯಿಸುತ್ತಿದ್ದು, ಆಕೆಗೊಬ್ಬ ಮಲಯಾಳಿ ಸಲಹೆಗಾರನಿರುತ್ತಾನಂತೆ. ಆ ಮಲಯಾಳಿ ಸಲಹೆಗಾರನಾಗಿ ಶ್ರೀಶಾಂತ್ ನಟಿಸಲಿದ್ದಾರೆ ಎಂದು ಪೂಜಾ ಭಟ್ ಹೇಳಿದ್ದಾರೆ.

ಈ ತಿಂಗಳು ನಾನು ಶ್ರೀಶಾಂತ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿದ್ದೆ. ಮಲಯಾಳಿ ಡ್ಯಾನ್ಸ್ ಸಲಹೆಗಾರನೊಬ್ಬನ ಪಾತ್ರಕ್ಕಾಗಿ ನಾವು ಸ್ವಲ್ಪ ವಯಸ್ಸಾಗಿರುವ ವ್ಯಕ್ತಿಯ ಹುಡುಕಾಟದಲ್ಲಿದ್ದೆವು. ಆದರೆ ನಾನು ಶ್ರೀಶಾಂತ್‌ನ್ನು ಭೇಟಿ ಮಾಡಿದ ತಕ್ಷಣ, ಈತ ನಮ್ಮ  ಪಾತ್ರಕ್ಕೆ ತಕ್ಕ ವ್ಯಕ್ತಿ ಎಂದು ನನಗೆ ಅನಿಸಿತು. ಈ ಪಾತ್ರವು ಅವನ ವ್ಯಕ್ತಿತ್ವಕ್ಕೆ ಹತ್ತಿರವಾಗುವಂತದ್ದು. ಆತನ ಮಲಯಾಳಂ ಉಚ್ಛಾರಣಾ ಶೈಲಿಯನ್ನು ನಾವು ಹಾಗೇ ಬಳಸಿಕೊಳ್ಳಲಿದ್ದೇವೆ. ಆತ ಒಳ್ಳೆಯ ಪರ್ಫಾಮರ್, ಈ ಚಿತ್ರದಲ್ಲಿ ಅವನು ಉತ್ತಮ ನಟನೆಯನ್ನು ತೋರಿಸಲಿದ್ದಾನೆ ಎಂಬ ವಿಶ್ವಾಸ ನನಗಿದೆ ಎಂದು ಪೂಜಾ ಹೇಳಿದ್ದಾರೆ.

31ರ ಹರೆಯದ ಶ್ರೀಶಾಂತ್ ಈ ಹಿಂದೆ ಡ್ಯಾನ್ಸ್ ರಿಯಾಲಿಟಿ ಶೋವೊಂದರಲ್ಲೂ ಭಾಗವಹಿಸಿದ್ದರು.

ಏನೇ ಆಗಲಿ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿರುವ ಕೇರಳದ ಪೇಸ್ ಬೌಲರ್ ಇದೀಗ ಬಾಲಿವುಡ್‌ಗೆ ಕಾಲಿಡುವ ಮೂಲಕ ಯಾವ ರೀತಿ  ಮೋಡಿ ಮಾಡುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಗಲ್ಫ್ ದೇಶಗಳ ಯಾವುದೇ ಬಂದರು ಸುರಕ್ಷಿತವಲ್ಲ; ಅಮೆರಿಕದ ಕ್ರಮ "ಕಡಲ್ಗಳ್ಳತನ"ಕ್ಕೆ ಸಮ: ಇರಾನ್ ಖಡಕ್ ವಾರ್ನಿಂಗ್

LPG Crisis: ಹೃದಯ ಶ್ರೀಮಂತಿಕೆ ಮೆರೆದ ಧ್ರುವ ಸರ್ಜಾ; ಆಟೋ ಚಾಲಕರಿಗೆ 25 ಲಕ್ಷ ರೂ. ನೆರವು - ಸರ್ಕಾರಕ್ಕೆ ಆಕ್ಷನ್‌ ಪ್ರಿನ್ಸ್‌ ಹೇಳಿದ್ದೇನು?

Video: ಅಭಿಮಾನಿ ಎಸೆದ ಹೂವಿನ ಚೆಂಡನ್ನು ಬಾಂಬ್ ಎಂದು ಭಾವಿಸಿ ಹೆದರಿ ಓಡಿದ Thalapathy Vijay?

ಮಹಿಳಾ ಮೀಸಲಾತಿ ಕುರಿತ ಚರ್ಚೆ: ಏ.15 ಕ್ಕೆ ಎಲ್ಲಾ ವಿರೋಧ ಪಕ್ಷಗಳ ಸಭೆ- ಮಲ್ಲಿಕಾರ್ಜುನ ಖರ್ಗೆ

West Asia War: ಇರಾನ್‌ಗೆ ಮಿಲಿಟರಿ ಬೆಂಬಲ ನೀಡಿದರೆ ಶೇ 50ರಷ್ಟು ಸುಂಕ; ಚೀನಾಗೆ ಡೊನಾಲ್ಡ್ ಟ್ರಂಪ್ ಬೆದರಿಕೆ

SCROLL FOR NEXT