ಮಾಂಜಿ ಸಿನಿಮಾ ತಂಡದ ಪತ್ರಿಕಾಗೋಷ್ಠಿ 
ಬಾಲಿವುಡ್

ಬೆಂಗಳೂರಿನಲ್ಲಿ ಮಾಂಜಿ ಸಿನಿಮಾ ಪ್ರಚಾರ

15 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಪಟ್ಟ ಶ್ರಮಕ್ಕೀಗ ಉತ್ತಮ ಫಲ ದೊರೆಯುತ್ತಿದೆ. ಮಾಂಜಿ ಒಂದು ಉತ್ತಮ ಚಿತ್ರ...

ಬೆಂಗಳೂರು: ಬಿಹಾರದ ದಾಶ್‌ರಥ್ ಮಾಂಜಿ ಅವರ ಕಥೆಯನ್ನು ಕೇಳಿದಾಗ ಅದನ್ನು ಸಿನಿಮಾ ಮಾಡಬೇಕೆಂದು ಅನಿಸಿತು. ಅದೇ ಮಾಂಜಿ ದ ಮೌಂಟೇನ್ ಮ್ಯಾನ್, ನೈಜ ಕಥೆಯನ್ನಾಧಾರಿತ ಸಿನಿಮಾ ಇದು. ಪ್ರಸ್ತುತ ಚಿತ್ರ ಎಲ್ಲರಿಗೂ ಪ್ರೇರಣೆ ನೀಡಲಿದೆ ಎಂದರು ನಿರ್ದೇಶಕ ಕೇತನ್ ಮೆಹ್ತಾ.

ಅಗಸ್ಟ್ 21ಕ್ಕೆ ತೆರೆಕಾಣಲಿರುವ ಮಾಂಜಿ ದ ಮೌಂಟೇನ್ ಮ್ಯಾನ್ ಎಂಬ ಹಿಂದೀ ಚಲನಚಿತ್ರದ ಪ್ರಚಾರಕ್ಕಾಗಿ ಅವರು ಬೆಂಗಳೂರಿಗೆ ಇಂದು ಆಗಮಿಸಿ ಪತ್ರಿಕಾಗೋಷ್ಠಿ ನಡೆಸಿದರು.

ಅವರೊಂದಿಗೆ ಪ್ರಸ್ತುತ ಸಿನಿಮಾದ ನಾಯಕ ನಟ ನವಾಜುದ್ದೀನ್ ಸಿದ್ದಿಖೀ ಮತ್ತು ನಾಯಕಿ ರಾಧಿಕಾ ಆಪ್ಟೆ ಕೂಡಾ ಉಪಸ್ಥಿತರಿದ್ದರು.

ಮಾಂಜಿ ಸಿನಿಮಾದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೇನೆ ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

15 ವರ್ಷಗಳಿಂದ ಸಿನಿಮಾ ಇಂಡಸ್ಟ್ರಿಯಲ್ಲಿ ನಾನು ಪಟ್ಟ ಶ್ರಮಕ್ಕೀಗ ಉತ್ತಮ ಫಲ ದೊರೆಯುತ್ತಿದೆ. ಮಾಂಜಿ ಒಂದು ಉತ್ತಮ ಚಿತ್ರ. ಅದು ಎಲ್ಲರ ಮೇಲೂ ಪ್ರಭಾವ ಬೀಳಲಿದೆ ಎಂದು ನವಾಜುದ್ದೀನ್ ಸಿದ್ದಿಖೀ ಹೇಳಿದರು.

ಚಿತ್ರದ ಅನುಭವಗಳ ಬಗ್ಗೆ ಹೇಳಿ ಎಂದು ಕೇಳಿದಾಗ, ಅಷ್ಟೊಂದು ದೊಡ್ಡ ಬೆಟ್ಟವನ್ನು ಅಗೆಯಬೇಕಲ್ಲಾ..ಅದಕ್ಕೆ ಆಗಾಗ ನಮ್ಮ ಹೀರೋಯಿನ್ ನ್ನು ಕರೆತಂದು ನಿಲ್ಲಿಸಿ, ಆದರೆ ಮಾತ್ರ ಬೆಟ್ಟ ಅಗೆಯುತ್ತೇನೆ ಎಂದು ನಿರ್ದೇಶಕರಿಗೆ ಹೇಳಿದ್ದೆ ಎಂದು ನವಾಜುದ್ದೀನ್ ನಗೆ ಚಟಾಕಿ ಹಾರಿಸಿದರು.

ತನ್ನ ಪತ್ನಿಗಾಗಿ ದೊಡ್ಡ ಬೆಟ್ಟವನ್ನು 22 ವರ್ಷಗಳ ಕಾಲ ಅಗೆದು ದಾರಿ ನಿರ್ಮಿಸಿದ ದಾಶ್‌ರಥ್ ಮಾಂಜಿ ಎಂಬ ರಿಯಲ್ ಹೀರೋನ ಕಥೆಯಾಗಿದೆ ಬಹು ನಿರೀಕ್ಷಿತ ಚಿತ್ರ ಮಾಂಡಿ ದ ಮೌಂಟೇನ್ ಮ್ಯಾನ್.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Trump ಭಾಗಿಯಾಗಲಿರುವ ಗಾಜಾ ಶಾಂತಿ ಶೃಂಗಸಭೆಗೆ ಪ್ರಧಾನಿಗೆ ಈಜಿಪ್ಟ್‌ನ ಸಿಸಿ ಆಹ್ವಾನ: US ಅಧ್ಯಕ್ಷರೊಂದಿಗೆ ವೇದಿಕೆ ಹಂಚಿಕೊಳ್ತಾರಾ ಮೋದಿ?

Bihar election 2025: NDA ಸೀಟು ಹಂಚಿಕೆ ಅಂತಿಮ; ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ಇದೆಂಥಾ ಕ್ರೌರ್ಯ: ಮದ್ಯ ಮಾರಾಟ ನಿಷೇಧ ಉಲ್ಲಂಘಿಸಿದ್ದ ಬ್ರಾಹ್ಮಣನ ಟೀಕಿಸಿ ಪೋಸ್ಟ್; OBC ವ್ಯಕ್ತಿಗೆ ಅದೇ ಬ್ರಾಹ್ಮಣನ ಪಾದ ತೊಳೆದು ನೀರು ಕುಡಿಯುವ ಶಿಕ್ಷೆ!

ಗುಜರಾತ್‌ನಲ್ಲಿ ಎಎಪಿ ರೈತರ ರ್ಯಾಲಿಯಲ್ಲಿ ಹಿಂಸಾಚಾರ; ಕಲ್ಲು ತೂರಿದ ರೈತರು, 3 ಪೊಲೀಸರಿಗೆ ಗಾಯ

SCROLL FOR NEXT