ನಟ ಸಲ್ಮಾನ್ ಖಾನ್ ಮತ್ತು ರೊಮೇನಿಯನ್ ಮಾಧ್ಯಮ ನಿರೂಪಕಿ ಲುಲಿಯಾ (ಸಂಗ್ರಹ ಚಿತ್ರ) 
ಬಾಲಿವುಡ್

ಕೋರ್ಟ್ ತೀರ್ಪು ಕೇಳಿ ಕುಸಿದು ಬಿದ್ದ ಸಲ್ಲು ಪ್ರೇಯಸಿ ಲುಲಿಯಾ..!

ನಟಿ ಕತ್ರಿನಾ ಕೈಫ್ ಜೊತೆಗಿನ ಸ್ನೇಹ ಸಂಬಂಧ ಮುರಿದು ಬಿದ್ದ ಬಳಿಕ ಬಾಲಿವುಡ್ ನ ಭಾಯ್ ಜಾನ್ ಸಲ್ಲು ಭಾಯ್ ರೊಮೇನಿಯನ್ ಚೆಲುವೆ ಲುಲಿಯಾ ವಂಟುರ್ ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ಹಳೆಯದೇನಲ್ಲ...

ನಟಿ ಕತ್ರಿನಾ ಕೈಫ್ ಜೊತೆಗಿನ ಸ್ನೇಹ ಸಂಬಂಧ ಮುರಿದು ಬಿದ್ದ ಬಳಿಕ ಬಾಲಿವುಡ್ ನ ಭಾಯ್ ಜಾನ್ ಸಲ್ಲು ಭಾಯ್ ರೊಮೇನಿಯನ್ ಚೆಲುವೆ ಮತ್ತು ಮಾಧ್ಯಮ ನಿರೂಪಕಿ ಲುಲಿಯಾ ವಂಟುರ್  ಜೊತೆ ಡೇಟಿಂಗ್ ನಡೆಸುತ್ತಿರುವ ವಿಚಾರ ಹಳೆಯದೇನಲ್ಲ.

ಪ್ರಸ್ತುತ ಈ ರೊಮೆನಿಯನ್ ಚೆಲುವೆ ಭಾರತದಲ್ಲಿಯೇ ಇದ್ದು, ಕೆಲ ಬಾಲಿವುಡ್ ಗಾಸಿಪ್ ಗಳ ಅನ್ವಯ ಈ ಜೋಡಿ ವರ್ಷದ ಹಿಂದೆಯೇ ವಿವಾಹ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದೆ ಎಂದು  ಹೇಳಲಾಗುತ್ತಿದೆ. ಆದರೆ ಈ ವಿಚಾರದ ಬಗೆಗಿನ ಯಾವುದೇ ರೀತಿಯ ಮಾಹಿತಿಯನ್ನು ಮತ್ತು ಅದಕ್ಕೆ ಸಂಬಂಧಿಸಿದ ಸ್ಪಷ್ಟನೆಯನ್ನು ಉಭಯ ಕುಟುಂಬದ ಯಾವೊಬ್ಬ ಸದಸ್ಯರೂ ಕೂಡ  ನೀಡಿಲ್ಲ. ಪ್ರಸ್ತುತ ಈ ಎಲ್ಲ ವಿಚಾರಗಳು ಹಳೆಯದ್ದಾಗಿದ್ದು, ಹೊಸ ವಿಚಾರವೆಂದರೆ, 2002ರ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಅಂತಿಮ ತೀರ್ಪು ಪ್ರಕಟಗೊಂಡ ವೇಳೆ ಸಲ್ಲು  ಪ್ರೇಯಸಿ ಲುಲಿಯಾ ಅವರ ಪ್ರತಿಕ್ರಿಯೆ ಏನಾಗಿತ್ತು ಎಂದು.

ಏಕೆಂದರೆ ಭಾರತದ ಸಂವಿಧಾನ ಮತ್ತು ಕಾನೂನು ಪ್ರಕ್ರಿಯೆಯ ಗಂಧಗಾಳಿಯೇ ತಿಳಿಯದ ಈ ರೊಮೇನಿಯನ್ ಚೆಲುವೆಗೆ ಪ್ರಕರಣದ ತೀರ್ಪು ಎಲ್ಲಿ ಸಲ್ಮಾನ್ ಖಾನ್ ವಿರುದ್ಧ ಬರುತ್ತದೆಯೋ  ಎಂದು ಚಿಂತಾಕ್ರಾಂತಳಾಗಿದ್ದಳಂತೆ. ಹೀಗಾಗಿಯೇ ತನ್ನ ತವರಿಗೂ ತೆರಳದೇ ಭಾರತದಲ್ಲಿಯೇ ಈಕೆ ಉಳಿದುಕೊಂಡಿದ್ದಳಂತೆ. ಅಲ್ಲದೆ ಪ್ರಕರಣದಿಂದ ಸಲ್ಮಾನ್ ದೋಷಮುಕ್ತರಾಗಲಿ ಎಂದು  ನಿನ್ನೆ ಬೆಳಗ್ಗಿನಿಂದಲೇ ದೇವರಲ್ಲಿ ಬೇಡುತ್ತಿದ್ದರಂತೆ. ಅದರಂತೆ ನಿನ್ನೆ ಮಧ್ಯಾಹ್ನ ತೀರ್ಪು ಹೊರಬಿದ್ದಿದ್ದು, ಭಾಯ್ ಜಾನ್ ಪ್ರಕರಣದಿಂದ ಖುಲಾಸೆಗೊಂಡಿದ್ದಾರೆ.



ತೀರ್ಪಿನ ಕುರಿತು ಮುಂಬೈನಲ್ಲಿರುವ ಗೆಳೆಯರೊಬ್ಬರ ಮನೆಯಲ್ಲಿ ಟಿವಿ ನೋಡುತ್ತಿದ್ದ ಲುಲಿಯಾ, ತೀರ್ಪು ಪ್ರಕಟಗೊಳ್ಳುತ್ತಿದ್ದಂತೆಯೇ ಸಂತೋಷ ತಡೆಯಲಾಗದೇ ಕುಸಿದು ಬಿದ್ದರಂತೆ, ಅಲ್ಲದೆ  ಸಲ್ಮಾನ್ ಖಾನ್ ರನ್ನು ನೆನೆದು ಬಿಕ್ಕಳಿಸಿ ಅತ್ತರಂತೆ.

ಒಟ್ಟಾರೆ ದಶಕಗಳಿಂದ ಸಲ್ಮಾನ್ ಖಾನ್ ಬೆನ್ನಿಗೆ ಬಿದ್ದಿದ್ದ ಪ್ರಕರಣವೊಂದು ಕಳಚಿಬಿದ್ದಿದ್ದು, ಬಂಧನ ಭೀತಿಯಿಂದ ತನ್ನ ಗೆಳೆಯ ಪಾರಾಗಿದ್ದಕ್ಕೆ ಲುಲಿಯಾ ತುಂಬಾ ಖುಷಿಯಾಗಿರುವಂತಿದೆ. ಈ  ಸಂತಸದ ಕ್ಷಣದಲ್ಲಿಯಾದರೂ ನಟ ಸಲ್ಮಾನ್ ಖಾನ್ ತಮ್ಮ ಮದುವೆ ವಿಚಾರವನ್ನು ಘೋಷಣೆ ಮಾಡುವ ಮೂಲಕ ಬಾಲಿವುಡ್ ನ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂಬ ಹಣೆಪಟ್ಟಿಯನ್ನು  ತೊಡೆದುಹಾಕುತ್ತಾರೆಯೇ ಕಾದು ನೋಡಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT