ಗ್ರೇಸಿ ಗೋಸ್ವಾಮಿ 
ಬಾಲಿವುಡ್

ಪುಟ್ಟಗೌರಿ-ದೊಡ್ಡಮಾತು

ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್‍ಪಿಯಲ್ಲಿ ನಂಬರ್‍ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ...

ಕನ್ನಡದ ಹಿಟ್ ಧಾರಾವಾಹಿ ಪುಟ್ಟಗೌರಿ ಮದುವೆಯ ಮೂಲ ಹಿಂದಿಯ ಬಾಲಿಕಾ ವಧು ಎಂಬುದು ಗೊತ್ತಿರೋ ವಿಷಯವೇ. ಅಲ್ಲಿಯೂ ವರುಷಗಳಿಂದ ಪ್ರಸಾರವಾಗುತ್ತಿರುವ ಈ ಧಾರಾವಾಹಿ ಎಂದಿಗೂ ಟಿಆರ್‍ಪಿಯಲ್ಲಿ ನಂಬರ್‍ಒನ್ ಸ್ಥಾನದಲ್ಲಿ ಆಭಾದಿತವಾಗಿ ಮುನ್ನಡೆಯುತ್ತಿದೆ.

ಇದೀಗ ಈ ಧಾರಾವಾಹಿಗೆ ಮನ್ವಂತರದ ಸಮಯ. ಧಾರಾವಾಹಿಗೆ ಹೊಸರೂಪ ಸಿಗುತ್ತಿದೆ. ಬಾಲಿಕಾವಧು ಗ್ರೇಸಿ ಗೋಸ್ವಾಮಿ ಈಗ ಭಾರತದ ಕಿರುತೆರೆಯ ಮನೆಮಾತು. ಬಾಲ್ಯವಿವಾಹವೇ ಕೇಂದ್ರ ವಿಷಯವಾಗಿರುವ ಈ ಧಾರಾ ವಾಹಿಯ ನಾಯಕಿ ವಯಸ್ಸು ಚಿಕ್ಕದಿದ್ದರೂ ಸಾಮಾಜಿಕ ಅರಿವಿನಲ್ಲಿ ದೊಡ್ಡ ವರಿಗೆ ಸರಿಸಮ ನಿಲ್ಲುತ್ತಾಳೆ.

ಬಾಲ್ಯ ವಿವಾಹವನ್ನು ಕಟುವಾಗಿ ವಿರೋಧಿಸುವ ಗ್ರೇಸಿ, ತಾನು ಶಾಲೆಯಲ್ಲಿ ಟೀಚರ್ ಮೂಲಕ ಬಾಲ್ಯವಿವಾಹದ ದುಷ್ಪರಿ ಣಾಮವನ್ನು ವಿವರವಾಗಿ ತಿಳಿದುಕೊಂಡಿದ್ದೇನೆ ಎನ್ನುತ್ತಾಳೆ. ಡ್ರಾಮೇಬಾಜ್ ಎಂಬ ರಿಯಾಲಿಟಿ ಶೋ ಮೂಲಕ ಕಿರುತೆರೆಗೆ ಕಾಲಿಟ್ಟ ಗ್ರೇಸಿ, ಮಕ್ಕಳಿಗೆ ಶಿಕ್ಷಣ ಸೌಲಭ್ಯ ಸಿಕ್ಕಿದಲ್ಲಿ ಬಾಲ್ಯವಿವಾಹ ಸಮಸ್ಯೆ ತಂತಾನೇ ನಿರ್ಮೂಲನೆಯಾಗುತ್ತದೆ ಎಂದು ಪ್ರಬುದ್ಧ ನಾಯಕಿಯಂತೆ ಮಾತನಾಡುತ್ತಾಳೆ. ಧಾರಾವಾಹಿಯನ್ನು ಕೇವಲ ಮನರಂಜನೆಗೆ ನೋಡಿ, ಅದರಲ್ಲಿನ ಉತ್ತಮ ಸಂದೇಶ ಅಳವಡಿಸಿಕೊಳ್ಳಿ ಎನ್ನುವುದು ಆಕೆಯ ಅಡ್ವೈಸು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!