ನಿರ್ದೇಶಕ ವಿಶಾಲ್ ಭಾರದ್ವಾಜ್ 
ಬಾಲಿವುಡ್

ಪ್ರತಿ ಗಾಂಧಿ ಜಯಂತಿಗೂ ಸಿನೆಮಾ ಬಿಡುಗಡೆ ಮಾಡಲಿರುವ ವಿಶಾಲ್ ಭಾರದ್ವಾಜ್

ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ

ಮುಂಬೈ: ವಿಶಾಲ್ ಭಾರದ್ವಾಜ್ ನಿರ್ದೇಶನದ 'ಹೈದರ್' ಕಳೆದ ವರ್ಷ ಅಕ್ಟೋಬರ್ ೨ಕ್ಕೆ ಬಿಡುಗಡೆಯಾಗಿತ್ತು ಹಾಗೂ ಈ ವರ್ಷ ಅವರ ಸಹ ನಿರ್ಮಾಣದ 'ತಲ್ವಾರ್' ಬಿಡುಗಡೆಗೆ ಸಿದ್ಧವಾಗಿದೆ. ಅವರೇ ಚಿತ್ರಕಥೆ ಬರೆದು ನಿರ್ಮಿಸಿರುವ ಈ ಚಲನಚಿತ್ರ ಭಾರಿ ನಿರೀಕ್ಷೆ ಹುಟ್ಟಿಸಿದೆ. ಹೀಗೆ ಪ್ರತಿ ಗಾಂಧಿ ಜಯಂತಿಗೆ ಬಿಡುಗಡೆ ಮಾಡುವ ಸಂಪ್ರದಾಯವನ್ನು ನಿರ್ದೇಶಕ ಬೆಳೆಸಿಕೊಂಡಿದ್ದಾರಂತೆ.

"ಬಿಡುಗಡೆ ದಿನಾಂಕದ ಬಗ್ಗೆ ವಿಶಾಲ್ ಸರ್ ಬಹಳ ಸಂತಸದಿಂದಿದ್ದಾರೆ. ಕಳೆದ ವರ್ಷ 'ಹೈದರ್' ಆಶ್ಚರ್ಯಕರವಾಗಿ ಬಿಡುಗಡೆಯಾಗಿತ್ತು... ಈ ವರ್ಷ 'ತಲ್ವಾರ್'.  ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಸಿನೆಮಾ ಈಗಾಗಲೇ ಸದ್ದು ಮಾಡಿದೆ. ಇನ್ನು ಮುಂದೆ ಪ್ರತಿ ಅಕ್ಟೋಬರ್ ೨ ಕ್ಕೆ ಸಿನೆಮಾ ಮಾಡಲು ಉತ್ಸುಕರಾಗಿದ್ದಾರೆ" ಎಂದು ವಕ್ತಾರ ತಿಳಿಸಿದ್ದಾರೆ.

ಹೈದರ್ ಸಿನೆಮಾದಲ್ಲಿ ಶಾಹಿದ್ ಕಪೂರ್, ಕೆ ಕೆ ಮೆನನ್, ಶ್ರದ್ಧಾ ಕಪೂರ್ ಮತ್ತು ಟಬು ನಟಿಸಿದ್ದರೆ ಮೇಘನಾ ಗುಲ್ಜಾರ್ ನಿರ್ದೇಶಿಸಿರುವ 'ತಲ್ವಾರ್' ನಲ್ಲಿ ಕೂಡ ಟಬು ನಟಿಸಿದ್ದು, ಇರ್ಫಾನ್ ಖಾನ್, ಕೊಂಕಣಾ ಸೇನ್ ಶರ್ಮಾ ಮತ್ತು ನೀರಜ್ ಕಾಬಿ ನಟಿಸಿದ್ದರೆ.

೨೦೦೮ ರಲ್ಲಿ ನೋಯ್ಡಾ ದಲ್ಲಿ ನಡೆದಿದ್ದ ಎರಡು ಕೊಲೆಗಳ ಆಧಾರವಾಗಿ 'ತಲ್ವಾರ್' ನಿರ್ಮಿಸಲಾಗಿದ್ದು, ಕೆನಡಾದ ಟೊರೆಂಟೊ ಅಂತರಾಷ್ಟ್ರೀಯ ಸಿನೆಮೋತ್ಸವದಲ್ಲಿ ಒಳ್ಳೆಯ ಪ್ರತಿಕ್ರಿಯೆ ಗಳಿಸಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT