ನಟಿ ಕಂಗನಾ ರನೌತ್ 
ಬಾಲಿವುಡ್

ನಾನು ಬೇಡದ ಮಗುವಾಗಿದ್ದೆ: ಕಂಗನಾ ರನೌತ್

ಹಲವಾರು ಪ್ರಶಸ್ತಿಗಳನ್ನು ಗೆದ್ದಿರಬಹುದು, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರಬಹುದು ಆದರೆ ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದು,

ಮುಂಬೈ: ಹಲವಾರು ಪ್ರಶಸ್ತಿಗಳನ್ನು ಗೆದ್ದಿರಬಹುದು, ಸಾವಿರಾರು ಅಭಿಮಾನಿಗಳ ಹೃದಯದಲ್ಲಿ ನೆಲೆಸಿರಬಹುದು ಆದರೆ ಬಾಲಿವುಡ್ ನಟಿ ಕಂಗನಾ ರನೌತ್ ತಮ್ಮ ಬಾಲ್ಯದ ಬಗ್ಗೆ ಹೇಳಿಕೊಂಡಿದ್ದು, ಬೇಡವಾಗಿದ್ದ ಮಗುವಿನಿಂದ ಬೆಳೆದುಬಂದ ಕಥೆಯನ್ನು ಬಿಚ್ಚಿಟ್ಟಿದ್ದಾರೆ.

ಅಂತರಾಷ್ಟ್ರೀಯ ಮಹಿಳಾ ದಿನವಾದ ನೆನ್ನೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ  ಅವರು, ಪುರುಷರ ಸಂತಸಕ್ಕಾಗಿ ಮಹಿಳೆಯರ ತ್ಯಾಗವನ್ನು ಬಣ್ಣಿಸುವುದನ್ನು ನಿಲ್ಲಿಸಬೇಕು ಎಂದಿದ್ದಾರೆ.

"ರಂಗೋಲಿಗೂ(ಅಕ್ಕ) ಮುಂಚಿತವಾಗಿ ನನ್ನ ಪೋಷಕರಿಗೆ ಒಂದು ಮಗುವಾಗಿತ್ತು. ಆದರೆ ಅವನು ಜನಿಸಿದ ೧೦ ದಿನಗಳಲ್ಲಿ ಮೃತಪಟ್ಟ. ಅವನನ್ನು ಹೀರೋ ಎಂದು ಕರೆಯಲಾಗಿತ್ತು. ಅವನನ್ನು ಕಳೆದುಕೊಂಡ ದುಃಖದಿಂದ ನನ್ನ ಪೋಷಕರಿಗೆ ಹೊರಬರಲು ಸಾಧ್ಯವಾಗಲೇ ಇಲ್ಲ. ನಂತರ ರಂಗೋಲಿ ಹುಟ್ಟಿದ ಮೇಲೆ ಸಂಭ್ರಮಗಳಿದ್ದವು" ಎಂದು 'ಕಟ್ಟಿ ಬಟ್ಟಿ'  ನಟಿ ಹೇಳಿದ್ದಾರೆ.

ಹಿರಿಯ ಅಕ್ಕ ರಂಗೋಲಿ ಜನಿಸಿದ ಮೇಲೆ ಮತ್ತೊಂದು ಹೆಣ್ಣು ಮಗು ಜನಿಸಿದ್ದಕ್ಕೆ ಅವರ ಪೋಷಕರು ಬೇಸರದಿಂದ ಹೊರಬರಲು ಸಾಧ್ಯವಾಗಲೇ ಇಲ್ಲ ಎಂದಿದ್ದಾರೆ ನಟಿ.

"ನಾನು ಜನಿಸಿದಾಗ, ನನ್ನ ಪೋಷಕರಿಗೆ, ಅದರಲ್ಲೂ ನನ್ನ ತಾಯಿಗೆ ಮತ್ತೊಂದು ಹೆಣ್ಣು ಮಗು ಜನಿಸಿದ್ದನ್ನು ಅರಗಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ಕಥೆಗಳೆಲ್ಲ ವಿವರವಾಗಿ ನನಗೆ ತಿಳಿದಿದೆ, ಏಕೆಂದರೆ ಪ್ರತಿ ಬಾರಿ ಅತಿಥಿಗಳು ಮನೆಗೆ ಬಂದಾಗ, ಅಥವಾ ಮನೆಯ ಕಾರ್ಯಕ್ರಮಗಳಲ್ಲಿ ನಾನು ಹೇಗೆ ಬೇಡವಾಗಿದ್ದ ಮಗುವಾಗಿದ್ದೆ ಎಂಬ ಕಥೆಯನ್ನು ನನ್ನ ಮುಂದೆಯೇ ಪದೇ ಪದೇ ಹೇಳಲಾಗುತ್ತಿತ್ತು" ಎಂದು ಕಂಗನಾ ಹೇಳಿದ್ದಾರೆ.

"ನಿಮ್ಮ ಅಸ್ತಿತ್ವದ ಅವಶ್ಯಕತೆಯನ್ನು ಸದಾ ಪ್ರಶ್ನಿಸುವ ವಾತಾವರಣದಲ್ಲಿ ಬದುಕಲು ಕಷ್ಟ" ಎಂದಿದ್ದಾರೆ 'ತನು ವೆಡ್ಸ್ ಮನು ರಿಟರ್ನ್ಸ್' ಖ್ಯಾತಿಯ ನಟಿ.

ಹುಡುಗಿಯರಿಗಿಂತಲೂ ಹುಡುಗರು ಮೇಲು ಎಂಬುದನ್ನು ತಾನೆಂದು ಒಪ್ಪಿಕೊಳ್ಳಲೇ ಇಲ್ಲ ಎನ್ನುತಾರೆ ಕಂಗನಾ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

SCROLL FOR NEXT