ಮಾಧುರಿ ದೀಕ್ಷಿತ್ 
ಬಾಲಿವುಡ್

ಟಿವಿ ಶೋಗೆ ಮತ್ತೆ ಎಂಟ್ರಿ ಕೊಟ್ಟ ಮಾಧುರಿ ದೀಕ್ಷಿತ್

ಖಾಸಗಿ ವಾಹಿನಿಯ ಝಲಕ್ ದಿಖ್ಲಾ ಜಾ ಕಾರ್ಯಕ್ರಮ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಾಧುರಿ ದೀಕ್ಷಿತ್ ಅವರು ಇದೀ ಮತ್ತೆ ಟಿವಿ ಶೋಗೆ ಎಂಟ್ರಿ ನೀಡಲಿದ್ದು, ನೃತ್ಯ ಕಾರ್ಯಕ್ರಮವೊಂದಕ್ಕೆ...

ಮುಂಬೈ: ಖಾಸಗಿ ವಾಹಿನಿಯ ಝಲಕ್ ದಿಖ್ಲಾ ಜಾ ಕಾರ್ಯಕ್ರಮ ಮೂಲಕ ಎಲ್ಲರ ಗಮನ ಸೆಳೆದಿದ್ದ ಮಾಧುರಿ ದೀಕ್ಷಿತ್ ಅವರು ಇದೀ ಮತ್ತೆ ಟಿವಿ ಶೋಗೆ ಎಂಟ್ರಿ ನೀಡಲಿದ್ದು, ನೃತ್ಯ ಕಾರ್ಯಕ್ರಮವೊಂದಕ್ಕೆ ತೀರ್ಪುಗಾರರಾಗಿ ಬರುತ್ತಿದ್ದಾರೆಂದು ಹೇಳಲಾಗುತ್ತಿದೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಈಗಾಗಲೇ ಹೆಸರುವಾಸಿಯಾಗಿರುವ 'ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್' ಅವತರಣಿ ಭಾರತದಲ್ಲೂ ಬರುತ್ತಿದ್ದು, ಈ ನೃತ್ಯ ಕಾರ್ಯಕ್ರಮಕ್ಕೆ ಮಾಧುರಿಯವರು ತೀರ್ಪುಗಾರರಾಗಿ ಬರುತ್ತಿದ್ದಾರೆಂದು ತಿಳಿದುಬಂದಿದೆ.

ಮಾಧುರಿಯವರು ಕಥಕ್ ನೃತ್ಯದಲ್ಲಿ ತರಬೇತಿ ಪಡೆದಿದ್ದು, ಅವರ ಪ್ರತಿಭೆಯನ್ನು ಹಿಂದಿ ಸಿನಿಮಾ ಹಾಗೂ ಪ್ರಖ್ಯಾತಿ ಪಡೆದುಕೊಂಡಿರುವ ಹಾಡುಗಳ ಮುಖೇನ ಜನತೆಯ ಮನಮುಟ್ಟಿದ್ದಾರೆ. ಈ ಹಿಂದೆಯೂ ಮಾಧುರಿ ಖಾಸಗಿ ವಾಹಿನಿಯೊಂದರ ಝಲಕ್ ದಿಖ್ಲಾ ಜಾ ನೃತ್ಯ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗುವ ಮೂಲಕ ಸಿನಿಮಾದಲ್ಲಿ ಅಷ್ಟೇ ಅಲ್ಲದೆ ಟಿವಿ ಕಾರ್ಯಕ್ರಮಗಳಲ್ಲೂ ಜನತೆಯ ಮನಮುಟ್ಟಿದ್ದರು. ಇದೀಗ ಮತ್ತೆ ಟಿವಿ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕಾಲಿಡುತ್ತಿದ್ದಾರೆ.

ಇನ್ನು 'ಸೋ ಯು ಥಿಂಕ್ ಯು ಕ್ಯಾನ್ ಡ್ಯಾನ್ಸ್' ನೃತ್ಯ ಕಾರ್ಯಕ್ರಮ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗಲಿದ್ದು, ಮಾಧುರಿಯವರೊಂದಿಗೆ ನೃತ್ಯ ತರಬೇತುದಾರರಾದ ಟೆರೆನ್ಸ್ ಲೆವಿಸ್ ಮತ್ತು ಬೋಸ್ಕೋ ಮಾರ್ಟಿಸ್ ಅವರು ಜೊತೆಗೂಡಲಿದ್ದಾರೆ. ಕಾರ್ಯಕ್ರಮ ಏಪ್ರಿಲ್ ತಿಂಗಳಿನಲ್ಲಿ ಆರಂಭವಾಗಲಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾತನಾಡಿರುವ ಟೆರೆನ್ಸ್ ಲೆವಿಸ್ ಅವರು, ಬೋಸ್ಕೋ ಅವರು ರಸ್ತೆ ಹಾಗೂ ನಗರದ ಶೈಲಿ ಕುರಿತಂತೆ ತೀರ್ಪು ನೀಡುವುದಾದರೆ, ನಾನು ತಾಂತ್ರಿಕ ಅಂಶಗಳು ಹಾಗೂ ವೇದಿಕೆಯ ಪ್ರದರ್ಶನದ ಕುರಿತು ತೀರ್ಪು ನೀಡುತ್ತೇನೆ. ಇನ್ನು ಮಾಧುರಿಯವರು ಭಾರತೀಯ ನೃತ್ಯ ಶೈಲಿ ಕುರಿತು ತೀರ್ಪು ನೀಡಲಿದ್ದಾರೆಂದು ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

Positive Vibes ಗಾಗಿ ಮನೆಯಲ್ಲಿ ಯಾವ ಗಿಡ ಬೆಳಸಬೇಕು: ಮುಳ್ಳಿನ ಗಿಡಗಳಲ್ಲಿದೆಯೇ ನಕರಾತ್ಮಕ ಶಕ್ತಿ; ಮಲ್ಲಿಗೆ ಮತ್ತು ತುಳಸಿಗೆ ಸೂಕ್ತ ಸ್ಥಳ ಯಾವುದು?

ಬೆಂಗಳೂರು: 6 ವರ್ಷದ ಬಾಲಕಿ ಅಪಹರಿಸಿ ಹತ್ಯೆ ; ಕೊಲೆಗೂ ಮುನ್ನ ಲೈಂಗಿಕ ದೌರ್ಜನ್ಯ - ಶವ ಪರೀಕ್ಷೆ ವೇಳೆ ಸತ್ಯ ಬಹಿರಂಗ!

ಮಹಿಳಾ ಟೆಕ್ಕಿ ಸಾವಿನ ಕೇಸ್ ಗೆ ಬಿಗ್ ಟ್ವಿಸ್ಟ್: ಹತ್ಯೆಗೂ ಮುನ್ನ PU ವಿದ್ಯಾರ್ಥಿಯಿಂದ ರೇಪ್; ಸಾಕ್ಷಿ ನಾಶಕ್ಕೆ ಬೆಂಕಿ ಹಚ್ಚಿದ ಕರ್ನಲ್ ಕುರೈ!

SCROLL FOR NEXT