ವಿವೇಕ್ ಓಬೇರಾಯ್ 
ಬಾಲಿವುಡ್

ಕಪಿಲ್ ಶರ್ಮ ಉತ್ತಮ ಮನುಷ್ಯ, ಅಪರಾಧಿಯಲ್ಲ: ವಿವೇಕ್ ಓಬೇರಾಯ್

ಕಾಮಿಡಿ ನಟ ಕಪಿಲ್ ಶರ್ಮಾ ಅಪರಾಧಿಯಲ್ಲ, ಒಬ್ಬ ಉತ್ತಮ ಮನುಷ್ಯ, ಹೀಗಾಗಿ ಅವರು ವಿವಾದದಿಂದ ಹೊರಬರಲು ಸಹಾಯ ಮಾಡುವುದರಲ್ಲಿ ತಪ್ಪಿಲ್ಲ ಎಂದು ನಟ ...

ನವದೆಹಲಿ; ಕಾಮಿಡಿ ನಟ ಕಪಿಲ್ ಶರ್ಮಾ ಅಪರಾಧಿಯಲ್ಲ, ಒಬ್ಬ ಉತ್ತಮ ಮನುಷ್ಯ, ಹೀಗಾಗಿ ಅವರು ವಿವಾದದಿಂದ ಹೊರಬರಲು ಸಹಾಯ ಮಾಡುವುದರಲ್ಲಿ ತಪ್ಪಿಲ್ಲ ಎಂದು ನಟ ವಿವೇಕ್ ಓಬೇರಾಯ್ ಅಭಿಪ್ರಾಯ ಪಟ್ಟಿದ್ದಾರೆ.

ಮುಂಬಯಿ ಮಹಾನಗರ ಪಾಲಿಕೆಯಲ್ಲಿ ಲಂಚದ ಬೇಡಿಕೆ ಇಟ್ಟ ಪ್ರಕರಣದ ಸಂಬಂಧ ಟ್ವೀಟ್ ಮಾಡಿ ಕಪಿಲ್ ಶರ್ಮಾ ಸಂಕಷ್ಟದಲ್ಲಿ ಸಿಲುಕಿದ್ದಾರೆ, ಇದರಿಂದ ಹೊರಬರಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಲು ಕಪಿಲ್ ಶರ್ಮಾ ವಿವೇಕ್ ಓಬೇರಾಯ್ ಅವರ ಸಹಾಯ ಕೇಳಿದ್ದಾರೆ ಎಂದು ಹೇಳಲಾಗಿದೆ.

ನಾನು ಪ್ರತಿ ವರ್ಷ 15 ಕೋಟಿ ಆದಾಯ ತೆರಿಗೆ ಕಟ್ಟುತ್ತಿದ್ದೇನೆ, ಆದರೂ ಮುಂಬಯಿ ಮಹಾನಗರ ಪಾಲಿಕೆ ನನ್ನಿಂದ 5 ಲಕ್ಷ ಲಂಚ ಕೇಳಿದೆ ಎಂದು ಟ್ವೀಟ್ ಮಾಡಿದ್ದರು. ವಿವೇಕ್ ಓಬೇರಾಯ್ ಗಿರುವ ರಾಜಕೀಯ ಸಂಪರ್ಕ ಉಪಯೋಗಿಸಿಕೊಂಡು ಪ್ರಕರಣದಿಂದ ಹೊರಬರಲು ಕಪಿಲ್ ಶರ್ಮಾ ಓಬೇರಾಯ್ ಸಹಾಯ ಕೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸರುವ ಓಬೇರಾಯ್, ಆತ ಉತ್ತಮ ಮನುಷ್ಯ ಎಂದು ನನಗೆ ನಂಬಿಕೆಯಿದೆ. ಜೊತೆಗೆ ನಾವು ಉತ್ತಮ ಸ್ಥಿತಿಯಲ್ಲಿದ್ದಾಗ ಸಮಸ್ಯೆಯಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಬೇಕು ಎಂಬುದರಲ್ಲಿಯೂ ನನಗೆ ನಂಬಿಕೆಯಿದೆ, ಹೀಗಾಗಿ ನಾನು ಕಪಿಲ್ ಶರ್ಮಾ ಅವರಿಗೆ ಸಹಾಯ ಮಾಡುತ್ತೇನೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT