ವಿಕ್ರಮ್ ಭಟ್ 
ಬಾಲಿವುಡ್

ರಕ್ತ ಕುದಿಯುತ್ತಿದೆ, ಆದರೂ ನಾವು ಅಸಹಾಯಕರು: ಬನ್ಸಾಲಿ ಮೇಲಿನ ಹಲ್ಲೆಗೆ ವಿಕ್ರಮ್ ಭಟ್ ಆಕ್ರೋಶ

ಜೈಪುರದಲ್ಲಿ ಪದ್ಮಾವತಿ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಖಂಡಿಸಿರುವ ನಿರ್ಮಾಪಕ ವಿಕ್ರಮ್ ಭಟ್, ಇಡೀ ಘಟನೆ ...

ಮುಂಬಯಿ: ಜೈಪುರದಲ್ಲಿ ಪದ್ಮಾವತಿ ಚಿತ್ರದ ಶೂಟಿಂಗ್ ವೇಳೆ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲಿನ ಹಲ್ಲೆ ಖಂಡಿಸಿರುವ ನಿರ್ಮಾಪಕ ವಿಕ್ರಮ್ ಭಟ್, ಇಡೀ ಘಟನೆ ದುರಾದೃಷ್ಟಕರ ಎಂದಿದ್ದಾರೆ.
ಸಿನಿಮಾ ನಿರ್ಮಾಪಕರು ಮತ್ತು ಕಲಾವಿದರು ಗಾಜಿನ ಮನೆಯಲ್ಲಿ ಜೀವಿಸುತ್ತಾರೆ. ಯಾವಾಗ ನಮ್ಮ ಮನೆ ಮೇಲೆ ಕಲ್ಲು ಬೀಳುತ್ತದೋ ಎಂದು ಸದಾ ನಾವು ಭಯದಲ್ಲೇ ಬದುಕುತ್ತಿರುತ್ತೇವೆ, ನಮಗೆ ರಕ್ಷಣೆ ಇಲ್ಲ ಎಂದು ಅವರು ದೂರಿದ್ದಾರೆ.
ಇದಕ್ಕೆ ಪರಿಹಾರ ಏನು ಎಂಬುದು ತಿಳಿಯುತ್ತಿಲ್ಲ, ನಮ್ಮ ಇಡಿ ಬಾಲಿವುಡ್ ಸಿನಿಮಾ ರಂಗ ಬನ್ಸಾಲಿ ಅವರ ಜೊತೆಯಲ್ಲಿದೆ. ಘಟನೆ ನಂತರ ನನ್ನ ರಕ್ತ ಕುದಿಯುತ್ತಿದೆ, ಆದರೆ ಏನನ್ನೂ ಮಾಡಲು ನಾವು ಶಕ್ತರಾಗಿಲ್ಲ, ನಾವು ಅಸಹಾಯಕರು ಎಂದು ಹೇಳಿದ್ದಾರೆ. 
ಶ್ರೀ ರಾಜಪೂತ್ ಕರ್ಣಿ ಸೇನೆ ಪದ್ಮಾವತಿ ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಮೇಲೆ ನಡೆಸಿದ ಹಲ್ಲೆಗೆ ಇಡೀ ಬಿಟೌನ್ ಖಂಡಿಸಿದೆ. ಹಲ್ಲೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT