ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ 
ಬಾಲಿವುಡ್

ವೆಂಬ್ಲೆ ಸಂಗೀತೋತ್ಸವ: ಎ.ಆರ್.ರೆಹಮಾನ್ ವಿರುದ್ಧ ಹಿಂದಿ ಪ್ರಿಯರ ಅಕ್ರೋಶ

ಬಾಲಿವುಡ್ ಸಂಗೀತ ರಂಗದಲ್ಲಿ ಅತ್ಯಂತ ಹೆಸರುಗಳಿಸಿರುವ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿರುದ್ಧ ಇದೀಗ ಹಿಂದಿ ಪ್ರಿಯಕರು ಸಾಕಷ್ಟು ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದಾರೆ...

ನವದಹೆಲಿ: ಬಾಲಿವುಡ್ ಸಂಗೀತ ರಂಗದಲ್ಲಿ ಅತ್ಯಂತ ಹೆಸರುಗಳಿಸಿರುವ ಸಂಗೀತ ಮಾಂತ್ರಿಕ ಎ.ಆರ್ ರೆಹಮಾನ್ ವಿರುದ್ಧ ಇದೀಗ ಹಿಂದಿ ಪ್ರಿಯಕರು ಸಾಕಷ್ಟು ಆಕ್ರೋಶಗಳನ್ನು ವ್ಯಕ್ತಪಡಿಸತೊಡಗಿದ್ದಾರೆ. 
ವೆಂಬ್ಲೆಯಲ್ಲಿ ಆಯೋಜಿಸಿದ್ದ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಎ.ಆರ್.ರೆಹಮಾನ್ ಅವರು ತಮಿಳು ಹಾಡುಗಳನ್ನೇ ಹೆಚ್ಚಾಗಿ ಹಾಡಿದ್ದಕ್ಕೆ ಹಿಂದಿ ಪಿಯರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಹಿಂದಿ ಹಾಡುಗಳನ್ನು ಹಾಡದ್ದಕ್ಕೆ ಅಭಿಮಾನಿಗಳು ಟ್ವಿಟರ್ ನಲ್ಲಿ ರೆಹಮಾನ್ ವಿರುದ್ಧ ಟ್ವೀಟ್ ಮಾಡಿ ಅಸಮಾಧಾನವನ್ನು ಹೊರಹಾಕಿದ್ದಾರೆ. 
ಕಳೆದ ಜೂನ್. 3 ರಂದು ಲಂಡನ್ ನಲ್ಲಿ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಉಗ್ರರು ದಾಳಿ ನಡೆಸಿದ್ದರು. ಇದಾದ ಬಳಿಕ ಜೂನ್.8 ರಂದು 'ನೆಟ್ರು ಇಂಡ್ರು ನಳೈ' ಕಾರ್ಯಕ್ರಮವನ್ನು ಲಂಡನ್ ನಲ್ಲಿ ಆಯೋಜಿಸಲಾಗಿತ್ತು. ವಿದೇಶದಲ್ಲಿ ನಡೆದ ಈ ಸಂಗೀತ ಕಾರ್ಯಕ್ರಮದಲ್ಲಿ ರೆಹಮಾನ್ ಅವರು ಒಟ್ಟು 16 ಹಾಡುಗಳನ್ನು ಹಾಡಿದ್ದಾರೆ. 16 ಹಾಡುಗಳ ಪೈಕಿ 12 ಹಾಡುಗಳನ್ನು ತಮಿಳು ಹಾಡುಗಳನ್ನೇ ಹಾಡಿದ್ದಾರೆ. 
ಎ.ಆರ್. ರೆಹಮಾನ್ ಅವರ ಹಿಂದಿ ಹಾಡುಗಳಿಗೆ ಹೆಚ್ಚು ಅಭಿಮಾನಿಗಳಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ, ರೆಹಮಾನ್ ಅವರು ಹಿಂದಿ ಹಾಡುಗಳನ್ನು ಹಾಡದೆ ತಮಿಳು ಹಾಡುಗಳನ್ನು ಹೆಚ್ಚಾಗಿ ಹಾಡಿರುವುದು ಇದೀಗ ಹಿಂದಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಎ.ಆರ್. ರೆಹಮಾನ್ ಅವರು ಖ್ಯಾತಿ ಗಳಿಸಿದ್ದು ಹಿಂದಿಯಿಂದ ಎಂಬುದನ್ನು ಅವರು ಮರೆತಿರುವ ಹಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ನೀವು ಖ್ಯಾತಿ ಗಳಿಸಿರುವುದಕ್ಕೆ ಹಿಂದಿ ಮ್ಯೂಸಿಕ್ ಕಾರಣವೇ ಹೊರತು ತಮಿಳು ಅಲ್ಲ. ನಮಗೆ ನಿರಾಸೆಯಾಗಿದೆ. ಈ ಮಟ್ಟದ ನಿರಾಸೆ ಎಂದೂ ಆಗಿರಲಿಲ್ಲ ಎಂದು ಬಾಲಿವುಡ್ ಪ್ರಿಯರು ರೆಹಮಾನ್ ವಿರುದ್ಧ ಕಿಡಿಕಾರುತ್ತಿದ್ದಾರೆ. 
ಮತ್ತೆಯೊಂದೆಡೆ ರೆಹಮಾನ್ ಅವರಿಗೆ ಬೆಂಬಲ ಕೂಡ ವ್ಯಕ್ತವಾಗುತ್ತಿದ್ದು, ಕಾರ್ಯಕ್ರಮ ಇತರ ಭಾಷೆಗಳ ಕಡೆಗಿನ ಅಸಹಿಷ್ಣುತೆಯನ್ನು ತೋರಿಸುತ್ತದೆ. ಆದರೆ, ಮೊದಲಿಗೆ ಹಿಂದೆ ಭಾರತದ ಭಾಷೆಗಳಲ್ಲಿ ಒಂದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರ ಆಲೋಚನೆಗಳು ಎಂದಿಗೂ ಬದಲಾಗುವುದಿಲ್ಲ. ಸಂಗೀತಕ್ಕೆ ಭಾಷೆಯ ಸೀಮಿತ ಇದೆಯೇ? ಎಂದು ಪ್ರತಿಕ್ರಿಯಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಇತಿಹಾಸ ಕಲಿಯಬೇಕಿದ್ದರೆ ಕಾಲೇಜಿಗೆ ಹೋಗುತ್ತಾರೆ, ನಿಮ್ಮ ಬೋಧನೆಯ ಅಗತ್ಯವಿಲ್ಲ: ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

MGNREGA Row: ಯಾವಾಗ-ಎಲ್ಲಿ ಬೇಕಾದರೂ ಚರ್ಚೆಗೆ ಸಿದ್ಧ, ಡೈಲಾಗ್‌ ವೀರ HDK ಬಂದರೆ ಒಳ್ಳೆಯದು; ಡಿ.ಕೆ.ಶಿವಕುಮಾರ್

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

SCROLL FOR NEXT