ಸುಚಿತ್ರ ಕೃಷ್ಣಮೂರ್ತಿ 
ಬಾಲಿವುಡ್

'ಅಜಾನ್' ಅನಾಗರಿಕತೆ, ಸೋನು ನಿಗಮ್ ಬಳಿಕ ಇದೀಗ ಸುಚಿತ್ರ ಟ್ವೀಟ್

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು...

ಬಾಲಿವುಡ್ ಖ್ಯಾತ ಗಾಯಕ ಸೋನು ನಿಗಮ್ ಈ ಹಿಂದೆ ಮುಸ್ಲಿಂರ ಮುಂಜಾನೆಯ ಪ್ರಾರ್ಥನೆ ಅಜಾನ್ ಕುರಿತು ಟ್ವೀಟ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದರು. ಇದೀಗ ಗಾಯಕಿ-ನಟಿ ಸುಚಿತ್ರ ಕೃಷ್ಣಮೂರ್ತಿ ಎಂಬುವರು ಅಜಾನ್ ಕುರಿತು ಟ್ವೀಟ್ ಮಾಡಿದ್ದಾರೆ. 
ಜನರ ಮೇಲೆ ಧರ್ಮವನ್ನು ಹೇಗೆ ಒತ್ತಾಯ ಪೂರ್ವಕವಾಗಿ ವಿಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಬೆಳಗ್ಗೆ 4.45ರ ಸುಮಾರಿಗೆ ಆಕ್ರಮಣಕಾರಿ/ಕಿವಿ ಛಿದ್ರಗೊಳಿಸುವ ಅಜಾನ್ ಕರೆ ಅನಾಗರಿಕವಾಗಿದೆ ಎಂದು ಟ್ವೀಟಿಸಿದ್ದು ಇದಕ್ಕೆ ಪರ ವಿರೋಧ ಟ್ವೀಟ್ ಗಳು ಬರುತ್ತಿದೆ.
ನಿಶಬ್ಧ ಸಮಯದಲ್ಲಿ ಪ್ರಾರ್ಥನೆ ಮಾಡುವುದಕ್ಕೆ ನನ್ನ ಅಭ್ಯಂತರವಿಲ್ಲ. ಆದರೆ ಆಜಾನ್ ಮೂಲಕ ಬೆಳಗ್ಗೆ 5 ಗಂಟೆಗೆ ನೆರೆಹೊರೆಯವರನ್ನು ಎಚ್ಚರಗೊಳಿಸುವುದು ಅನಾಗರಿಕತೆ ಎಂದು ಬರೆದುಕೊಂಡಿದ್ದಾರೆ.
ಈ ಹಿಂದೆ ಅಜಾನ್ ಕುರಿತಂತೆ ಸೋನು ನಿಗಮ್ ಮಾಡಿದ್ದ ಟ್ವೀಟ್ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಅಲ್ಲ ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಗಾಳಿ ಎಬ್ಬಿಸಿತ್ತು. ಅಲ್ಲದೆ ಕೆಲ ಕಿಡಿಗೇಡಿಗಳು ಸೋನು ನಿಗಮ್ ಅವರಿಗೆ ಕೆಲ ಪ್ರತ್ಯಕ್ಷ ಬೆದರಿಕೆಗಳನ್ನು ಹಾಕಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜನಪ್ರಿಯ ಪ್ಯಾಲೆಸ್ತೀನ್ ನಾಯಕ ಮರ್ವಾನ್ ಬರ್ಘೌಟಿ ಬಿಡುಗಡೆಗೆ ಇಸ್ರೇಲ್ ನಕಾರ: 250 ಕೈದಿಗಳ ಪಟ್ಟಿ ಸಿದ್ಧ

'ನಮ್ಮ ಪಾತ್ರವಿಲ್ಲ': ಆಫ್ಘನ್ ಸಚಿವರ ಸುದ್ದಿಗೋಷ್ಠಿ ವೇಳೆ ಮಹಿಳಾ ಪತ್ರಕರ್ತೆಯರಿಗೆ ನಿರ್ಬಂಧ ಕುರಿತು 'ಕೇಂದ್ರ' ಸ್ಪಷ್ಟನೆ

'ನಂಗೇ ಕೊಡಿ ಎಂದು ನಾನೇನು ಕೇಳಿಲ್ಲ..': ನೊಬೆಲ್ ಶಾಂತಿ ಪ್ರಶಸ್ತಿ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು!

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

2nd test, Day 2: 518 ರನ್ ಗಳಿಗೆ ಭಾರತ ಇನ್ನಿಂಗ್ಸ್ ಡಿಕ್ಲೇರ್!

SCROLL FOR NEXT