ರಣಬೀರ್ ಕಪೂರ್ 
ಬಾಲಿವುಡ್

ಫ್ಲ್ಯಾಟ್ ಗೆ ಹಾನಿ: ಬಾಡಿಗೆದಾರರಿಗೆ 50 ಲಕ್ಷ ದಂಡ ಹಾಕಿದ ರಣಬೀರ್ ಕಪೂರ್

ಬಾಡಿಗೆ ಒಪ್ಪಂದ ನಿಯಮಾವಳಿಗಳನ್ನು ಗೌರವಿಸಲು ವಿಫಲರಾದ ಬಾಡಿಗೆದಾರರ ಮೇಲೆ ರಣಬೀರ್ ಕಪೂರ್ ಪುಣೆಯಲ್ಲಿರುವ ಅವರ ಅಪಾರ್ಟ್ ಮೆಂಟ್ ಬಾಡಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ.

ಪುಣೆ: ಬಾಡಿಗೆ ಒಪ್ಪಂದ ನಿಯಮಾವಳಿಗಳನ್ನು ಗೌರವಿಸಲು ವಿಫಲರಾದ ಬಾಡಿಗೆದಾರರ ಮೇಲೆ ರಣಬೀರ್ ಕಪೂರ್ ಪುಣೆಯಲ್ಲಿರುವ ಅವರ ಅಪಾರ್ಟ್ ಮೆಂಟ್  ಬಾಡಿಗೆದಾರರ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. 
ಬಾಡಿಗೆದಾರರಾದ ಶೀತಲ್ ಸೂರ್ಯವಂಶಿ ಲಾಕ್-ಇನ್ ಗೆ ಮುನ್ನ ಅಪಾರ್ಟ್ ಮೆಂಟ್ ಗೆ ಹಾನಿ ಮಾಡಿದ್ದಾರೆ ಎಂದು ಆರೊಪಿಸಿರುವ ನಟ ರಣಬೀರ್ ಕಪೂರ್ ಅವರ ವಿರುದ್ಧ ಪುಣೆ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಬಾಡಿಗೆದಾರರೌ ಅಪಾರ್ಟ್ ಮೆಂಟ್ ಗೆ ಮಾಡಿದ ಹಾನಿಗೆ ಪ್ರತಿಯಾಗಿ. 50 ಲಕ್ಷ ಪರಿಹಾರ ನಿಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ಮಾದ್ಯಮ ವರದಿ ಹೇಳಿದೆ.
ಶೀತಲ್ ಹೇಳುವಂತೆ ಆಕೆಯನ್ನು ರಣವಿರ್ ಆಗಸ್ಟ್ 2017ಕ್ಕೆ ಮನೆ ತೊರೆಯುವಂತೆ ಹೇಳಿದ್ದರು.ಇದಾಗ ಆಕೆ ಮನೆಗೆ ಬಾಡಿಗೆಗಾಗಿ ಬಂದು ಹನ್ನೊಂದು ತಿಂಗಳಾಗಿತ್ತು.. ಆಕೆ ಅಕ್ಟೋಬರ್ 2017ಕ್ಕೆ ಮನೆ ಖಾಲಿ ಮಾಡಿದ್ದಾರೆ.ಈ ವೇಳೆ ಅವರ ಕುಟುಂಬವು "ತೀವ್ರ ಅನಾನುಕೂಲತೆ ಮತ್ತು ಕಷ್ಟಗಳನ್ನು ಅನುಭವಿಸಿತು" ಎಂದು ಹೇಳಿದ್ದಾರೆ.
ಆದರೆ ರನಬೀರ್ ಹೇಳಿಕೆಯಂತೆ ಅವರು ಬಾಡಿಗೆದಾರರಿಗೆ ಯಾವ ತೊಂದರೆ ನೀಡಿಲ್ಲ.ಬಾಡಿಗೆದಾರನು ಅವರ ಸ್ವ ಇಚ್ಚೆಯಿಂದಲೇ ಮನೆಯನ್ನು ತೆರವುಗೊಳಿಸಿದ್ದಾರೆ. ಹಾಗೆ ಖಾಲಿ ಮಾಡುವಾಗ ಅವರು ನೀಡದೆ ಹೋಗಿದ್ದ  ಮೂರು ತಿಂಗಳ ಬಾಡಿಗೆಯನ್ನು ಹಿಡಿದಿಟ್ಟುಕೊಳ್ಳಲಾಗಿದೆ. ಪ್ರಕರಣ ಮುಂದಿನ ವಿಚಾರಣೆ ಆಗಸ್ಟ್ 28 ರಂದು ನಡೆಯಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಜಮ್ಮು-ಕಾಶ್ಮೀರ: ಮಸೂದ್ ಅಜರ್ ಆಡಿಯೋ ಬೆನ್ನಲ್ಲೇ ಭಾರತದ ಗಡಿಗೆ ನುಗ್ಗಲು 'ಪಾಕ್ ಡ್ರೋನ್' ಗಳು ಯತ್ನ!

1st ODI: ಕೊಹ್ಲಿ ಅರ್ಧಶತಕ: ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತಕ್ಕೆ ರೋಚಕ ಜಯ!

ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮಗೆ ಅಶ್ಲೀಲ ಕಾಮೆಂಟ್! ಕಿಡಿಗೇಡಿಗಳಿಗೆ ಕೊಟ್ಟ ವಾರ್ನಿಂಗ್ ಏನು?

ಮಿಲಿಟರಿ ದಾಳಿಗೆ ಟ್ರಂಪ್, ನೆತನ್ಯಾಹು ಸಜ್ಜು: ತಿರುಗೇಟು ನೀಡಿದ ಇರಾನ್! ಹೇಳಿದ್ದೇನು ಗೊತ್ತಾ?

ಪಾಕಿಸ್ತಾನದಲ್ಲಿ 'ಗುಂಡಿಟ್ಟು' ಹಿಂದೂ ರೈತನ ಕಗ್ಗೊಲೆ! ಹೈದರಾಬಾದಿನಲ್ಲಿ ಆರೋಪಿಗಳ ಬಂಧನ

SCROLL FOR NEXT