ಸಂಗ್ರಹ ಚಿತ್ರ 
ಬಾಲಿವುಡ್

ಧಡಕ್ ಟ್ರೇಲರ್ ಬಿಡುಗಡೆ: ಶ್ರೀದೇವಿ ಪುತ್ರಿ ಜಾಹ್ನವಿಗೆ ಸಹೋದರ ಅರ್ಜುನ್ ಹೃದಯಸ್ಪರ್ಶಿ ಟ್ವೀಟ್!

ಬಾಲಿವುಡ್ ನ ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಅಭಿನಯದ ಧಡಕ್ ಚಿತ್ರದ ಟ್ರೇಲರ್ ಬಿಡುಗಡೆ ಹಿನ್ನಲೆಯಲ್ಲಿ ಸಹೋದರ ಅರ್ಜುನ್ ಕಪೂರ್ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ.

ಮುಂಬೈ: ಬಾಲಿವುಡ್ ನ ದಿವಂಗತ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಅಭಿನಯದ ಧಡಕ್ ಚಿತ್ರದ ಟ್ರೇಲರ್ ಬಿಡುಗಡೆ ಹಿನ್ನಲೆಯಲ್ಲಿ ಸಹೋದರ ಅರ್ಜುನ್ ಕಪೂರ್ ಹೃದಯಸ್ಪರ್ಶಿ ಟ್ವೀಟ್ ಮಾಡಿದ್ದಾರೆ.

ಇಂದು ಮುಂಬೈನಲ್ಲಿ ಜಾಹ್ನವಿ ಅಭಿನಯದ ಧಡಕ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮವಿದ್ದು, ಈ ಹಿನ್ನಲೆಯಲ್ಲಿ ನಟ ಅರ್ಜುನ್ ಕಪೂರ್ ಟ್ವೀಟ್ ಮಾಡಿದ್ದಾರೆ. ತಮ್ಮ ಸಹೋದರಿ ಜಾಹ್ನವಿ ಕುರಿತು ಸರಣಿ ಟ್ವೀಟ್ ಮಾಡಿರುವ ಅರ್ಜುನ್ ಕಪೂರ್, ಸಿನಿಮಾರಂಗಕ್ಕೆ ಪದಾರ್ಪಣೆ ಮಾಡುತ್ತಿರುವ ತಂಗಿಗೆ ಸ್ವಾಗತ ಕೋರಿದ್ದಾರೆ. ಅಂತೆಯೇ ಸಿನಿಮಾ ರಂಗದಲ್ಲಿ ಶ್ರದ್ಧೆ, ಪ್ರಾಮಾಣಿಕತೆ ಮತ್ತು ಶ್ರಮಪಟ್ಟು ಕೆಲಸ ಮಾಡು ಎಂದು ಕಿವಿ ಮಾತು ಹೇಳಿದ್ದಾರೆ. 

'ನಾಳೆಯಿಂದ ನೀನು ಅಭಿಮಾನಿಗಳೊಂದಿಗೆ ಇರುವೆ.. ನಿನ್ನ ಧಡಕ್ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದ್ದು, ಮೊದಲಿಗೆ ನಾನು ಕ್ಷಮೆ ಕೇಳುತ್ತೇನೆ. ನಾಳೆ ನಾನು ಮುಂಬೈನಲ್ಲಿ ಇರುವುದಿಲ್ಲ. ಆದರೆ ಚಿಂತೆ ಬೇಡ.. ಸಿನಿಮಾ ರಂಗಕ್ಕೆ ನಿನಗ ಸ್ವಾಗತ.. ನೀನು ಶ್ರದ್ಧೆ, ಪ್ರಮಾಣಿಕತೆ ಮತ್ತು ಶ್ರಮದಿಂದ ಕೆಲಸ ಮಾಡಿದರೆ ಈ ರಂಗ ನಿನಗೆ ಅದ್ಬುತವಾಗಿ ಕಾಣುತ್ತದೆ. ಪ್ರಾಮಾಣಿಕವಾಗಿ ಕೆಲಸ ಮಾಡು, ಎದುರಾಳಿಗಳನ್ನು ಗೌರವಿಸು, ಕಲಿಕೆಗಾಗಿ ನಿನ್ನನ್ನು ನೀನು ಸಂಪೂರ್ಣ ತೊಡಗಿಸಿಕೊ, ನಿನ್ನದೇ ಹೊಸ ಶೈಲಿ ಮತ್ತು ಮಾರ್ಗದಲ್ಲಿ ಚಲಿಸು. ಇದು ಸುಲಭವಲ್ಲ ಎಂದು ತಿಳಿದಿದೆ. ಆದರೆ ನೀನು ಯಾವುದೇ ಸವಾಲಿಗೆ ಸಿದ್ಧ ಎಂದು ನನಗೆ ತಿಳಿದಿದೆ ಎಂದು ಅರ್ಜುನ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಅಂತೆಯೇ ಧಡಕ್ ಚಿತ್ರ ತಂಡಕ್ಕೆ, ಚಿತ್ರ ನಿರ್ದೇಶಕರಿಗೆ, ನಿರ್ಮಾಪಕ ಕರಣ್ ಜೋಹಾರ್ ಅವರಿಗೆ ಅರ್ಜುನ್ ಕಪೂರ್ ಶುಭ ಕೋರಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಪ್ಯಾಕ್ಸ್ ಸಿಲಿಕಾ ಅಲೈಯನ್ಸ್‌ನ ಸದಸ್ಯ ದೇಶವಾಗಲಿದೆ; ಅಮೆರಿಕಕ್ಕೆ ಭಾರತಕ್ಕಿಂತ ಮುಖ್ಯ ದೇಶ ಮತ್ತೊಂದಿಲ್ಲ: ಸೆರ್ಗಿಯೊ ಗೋರ್

ಬಿಗ್ ಬಾಸ್ 12 ಫಿನಾಲೆ ಹೊತ್ತಲ್ಲಿ ಕಿಚ್ಚ ಸುದೀಪ್‌ಗೆ ಸಂಕಷ್ಟ ತಂದ 'ರಣಹದ್ದು'!

CM ಕುರ್ಚಿ ಗುದ್ದಾಟ: ಅಗತ್ಯವಿದ್ದಾಗ ಸಿದ್ದರಾಮಯ್ಯ, ಶಿವಕುಮಾರ್‌ರನ್ನು ಮಾತುಕತೆಗೆ ಕರೆಯಲಾಗುವುದು; ಮಲ್ಲಿಕಾರ್ಜುನ ಖರ್ಗೆ

ಉತ್ತರ ಪ್ರದೇಶ: "ಆಕ್ಷೇಪಾರ್ಹ" ಸ್ಥಿತಿಯಲ್ಲಿದ್ದ ಪ್ರೇಮಿಗಳನ್ನು ಹೊಡೆದು ಕೊಂದ ಕುಟುಂಬಸ್ಥರು!

ಮಹಾತ್ಮ ಗಾಂಧಿ ಸಂದೇಶಗಳು ಹಿಂದೆಂದಿಗಿಂತಲೂ ಈಗ ಹೆಚ್ಚು ಪ್ರಸ್ತುತ: ಸಬರಮತಿ ಆಶ್ರಮದಲ್ಲಿ ಜರ್ಮನ್ ಚಾನ್ಸೆಲರ್!

SCROLL FOR NEXT