ಸೋನು ಸೂದ್ 
ಬಾಲಿವುಡ್

'ಮಣಿಕರ್ಣಿಕಾ'ದಿಂದ ಹೊರಬಂದ ಸೋನು ಸೂದ್, ಪುರುಷ ಅಹಂಕಾರ ಎಂದ ಕಂಗನಾ ರಾನಾವತ್

ನಟ ಸೋನು ಸೂದ್ ಮಣಿಕಾರ್ಣಿಕ: ದ ಕ್ವೀನ್ ಆಫ್ ಝಾನ್ಸಿ ಚಿತ್ರದಿಂದ ಹೊರಬಂದಿದ್ದಾರೆ. ...

ಮುಂಬೈ: ನಟ ಸೋನು ಸೂದ್ ಮಣಿಕಾರ್ಣಿಕ: ದ ಕ್ವೀನ್ ಆಫ್ ಝಾನ್ಸಿ ಚಿತ್ರದಿಂದ ಹೊರಬಂದಿದ್ದಾರೆ. ಸಿಂಬಾ ಚಿತ್ರದಲ್ಲಿನ ನಟನೆಯಿಂದಾಗಿ ವೃತ್ತಿಪರ ಬದ್ಧತೆಯಿಂದಾಗಿ ಈ ಚಿತ್ರದಿಂದ ಹೊರಬಂದಿರುವುದಾಗಿ ಸ್ಪಷ್ಟಪಡಿಸಿದ್ದಾರೆ. ಆದರೆ ಚಿತ್ರದ ನಾಯಕಿ ಕಂಗನಾ ರಾನಾವತ್ ಹೇಳುವುದು ಬೇರೆ, ಮಹಿಳಾ ನಿರ್ದೇಶಕಿಯ ಕೈಕೆಳಗೆ ಕೆಲಸ ಮಾಡಲು ಇಷ್ಟವಿಲ್ಲದ್ದರಿಂದ ಸೋನು ಸೂದ್ ಹೊರಹೋಗಿದ್ದಾರೆ ಎಂದಿದ್ದಾರೆ.

ಚಿತ್ರದ ನಿರ್ದೇಶಕ ಕೃಶ್ ಬೇರೆ ಚಿತ್ರಗಳಲ್ಲಿ ಬ್ಯುಸಿ ಇರುವುದರಿಂದ ಇದೀಗ ಸ್ವತಃ ಕಂಗನಾ ಅವರೇ ಬಾಕಿ ಇರುವ ಭಾಗದ ಚಿತ್ರೀಕರಣವನ್ನು ಮಾಡುತ್ತಿದ್ದಾರೆ. ಇಲ್ಲಿ ರಾಣಿ ಲಕ್ಷ್ಮೀಬಾಯಿಯ ಕಥೆ ಹೇಳಲಾಗುತ್ತಿದೆ.

ರೋಹಿತ್ ಶೆಟ್ಟಿ ಅವರ ಸಿಂಬಾ ಚಿತ್ರದಲ್ಲಿ ಸೋನ್ ಸೂದ್ ಅವರದ್ದು  ಪ್ರಮುಖ ಪಾತ್ರವಾಗಿದೆ. ಇದರಲ್ಲಿನ ಪಾತ್ರಕ್ಕಾಗಿ ಗಡ್ಡ ಬಿಟ್ಟಿರುವ ಅವರು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಮಣಿಕಾರ್ಣಿಕದಲ್ಲಿ ಯೋಧನ ಪಾತ್ರದಲ್ಲಿ ಗಡ್ಡ ತೆಗೆದಿರುವ ಪಾತ್ರದಲ್ಲಿ ನಟಿಸಬೇಕಾಗಿತ್ತು.

ಸಿಂಬಾ ಚಿತ್ರದಲ್ಲಿನ ನೋಟದಿಂದಾಗಿ ಝಾನ್ಸಿ ಚಿತ್ರದಲ್ಲಿದ ಕಥೆಯನ್ನು ಬದಲಾಯಿಸಲು ನಿರ್ದೇಶಕರು ಮತ್ತು ನಿರ್ಮಾಪಕರು ಬಯಸಿದ್ದರು, ಆದರೆ ಅದು ಯೋಜನೆಯಂತೆ ಸಾಗಲಿಲ್ಲ.

ಆದರೆ ಈ ಬಗ್ಗೆ ಕಂಗನಾ ಸೋನು ಸೂದ್ ವಿರುದ್ಧ ಆರೋಪಿಸಿದ್ದಾರೆ. ಹೊಂದಾಣಿಕೆ ಮಾಡಿಕೊಳ್ಳಲು ಅವರು ಬೇರೆ ಸಮಯವನ್ನೇ ನೀಡಲಿಲ್ಲ ಎನ್ನುತ್ತಾರೆ.

ಅವರು ನನ್ನನ್ನು ಭೇಟಿ ಮಾಡಲು ಕೂಡ ನಿರಾಕರಿಸಿದ್ದಾರೆ. ಮಹಿಳಾ ನಿರ್ದೇಶಕಿ ಜೊತೆ ಅವರಿಗೆ ಕೆಲಸ ಮಾಡುವುದು ಇಷ್ಟವಿಲ್ಲ. ಚಿತ್ರತಂಡಕ್ಕೆ ನನ್ನ ಮೇಲೆ ಸಂಪೂರ್ಣ ನಂಬಿಕೆಯಿದ್ದರೂ ಕೂಡ ಸೋನು ಸೂದ್ ಅವರು ಬೇರೆ ದಿನ ನೀಡುತ್ತಿಲ್ಲ ಮತ್ತು ನನ್ನ ಮೇಲೆ ನಂಬಿಕೆಯನ್ನು ಕೂಡ ಇಟ್ಟುಕೊಂಡಿಲ್ಲ ಎಂದಿದ್ದಾರೆ.

ಮೂಲಗಳಿಂದ ಸಿಕ್ಕಿರುವ ಮಾಹಿತಿ ಪ್ರಕಾರ ಸೋನು ಸೂದ್ ಚಿತ್ರದಿಂದ ಹೊರಬರಲು ಕಾರಣ ಕಂಗನಾ ರಾನಾವತ್ ಅವರಲ್ಲಿ ವೃತ್ತಿಪರತೆ ಇಲ್ಲದಿರುವುದು ಮತ್ತು ಅವರು ಮಾಡುತ್ತಿರುವ ಸುಳ್ಳು ಆರೋಪಗಳು.

ಮಣಿಕಾರ್ಣಿಕಾ-ದ ಕ್ವೀನ್ ಆಫ್ ಝಾನ್ಸಿ ಮುಂದಿನ ವರ್ಷ ಜನವರಿ 25ರಂದು ತೆರೆಗೆ ಬರಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT