ಜಸ್ಲೀನ್ ಮಥಾರು, ಅನೂಪ್ ಜಲೋಟ- ಸಲ್ಮಾನ್ ಖಾನ್ 
ಬಾಲಿವುಡ್

ಬಿಗ್ ಬಾಸ್-12 : 28 ವರ್ಷದ ಶಿಷ್ಯೆ ಜೊತೆ 65ರ ಗುರು ಅನೂಪ್ ಪ್ರೇಮ ಪುರಾಣ ಬಹಿರಂಗ!

ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಭಾನುವಾರ...

ಮುಂಬೈ: ವಿಚಿತ್ರ ಜೋಡಿ ಹಾಗೂ ವಿಚಿತ್ರ ಘಟನೆಗಳಿಂದಲೇ ಸುದ್ದಿ ಮಾಡುವ ಹಿಂದಿ ಬಿಗ್ ಬಾಸ್ ನ 12ನೇ ಆವೃತ್ತಿ ಭಾನುವಾರ ಆರಂಭವಾಗಿದ್ದು, ಈ ಬಾರಿ ಗುರು - ಶಿಷ್ಯೆಯ ವಿಚಿತ್ರ ಜೋಡಿಯೊಂದು ಎಂಟ್ರಿಕೊಟ್ಟಿದೆ. ಅವರ ಪ್ರೇಮ ಕಥೆಯನ್ನು ಕೇಳಿ ವೀಕ್ಷಕರು ಕಕ್ಕಾಬಿಕ್ಕಿಯಾಗಿದ್ದಾರೆ.
'ಭಜನೆಗಳ ಸಾಮ್ರಾಟ' ಎಂದೇ ಖ್ಯಾತಿ ಪಡೆದ 65 ವರ್ಷದ ಅನೂಪ್ ಜಲೋಟ ಅವರು ತಮ್ಮ ಶಿಷ್ಯೆ 28 ವರ್ಷದ ಜಸ್ಲೀನ್ ಮಥಾರು ಅವರೊಂದಿಗೆ ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸಿದ್ದು, ಇವರು ಬರೀ ಗುರು ಶಿಷ್ಯೆಯರಲ್ಲ ಇವರಿಬ್ಬರ ನಡುವೆ ಮೂರು ವರ್ಷಗಳಿಂದ ಅಫೇರ್ ಇದೆ. ಇದನ್ನು ಸ್ವತಃ ಜಸ್ಲೀನ್ ಅವರೇ ಬಹಿರಂಗಪಡಿಸಿದ್ದು, ಇಬ್ಬರ ನಡುವೆ 37ವರ್ಷಗಳ ಅಂತರವಿದೆ!
'ನಾನು ಮತ್ತು ಅನೂಪ್ ಜಲೋಟ ಕೇವಲ ಗುರು-ಶಿಷ್ಯೆ ಮಾತ್ರ ಅಲ್ಲ. ನಮ್ಮಿಬ್ಬರ ನಡುವೆ ಮೂರು ವರ್ಷಗಳಿಂದ ಸಂಬಂಧ ಇದೆ. ಈ ಗುಟ್ಟನ್ನ ನಾನು ಇಲ್ಲಿಯವರೆಗೂ ಯಾರೊಂದಿಗೂ ಹಂಚಿಕೊಂಡಿಲ್ಲ. ಈ ಸಂಗತಿ ಬಹಿರಂಗವಾದಾಗ, ನನ್ನ ಕುಟುಂಬದವರಿಗೂ ಶಾಕ್ ಆಗುತ್ತೆ. ಎಲ್ಲವನ್ನ ಫೇಸ್ ಮಾಡಲು ನಾನು ರೆಡಿ ಇದ್ದೇನೆ. 'ಬಿಗ್ ಬಾಸ್' ಗೆಲ್ಲುವುದೇ ನನ್ನ ಗುರಿ' ಎಂದು ತಮ್ಮ ಪರಿಚಯದ ವಿಡಿಯೋದಲ್ಲಿ ಜಸ್ಲೀನ್ ಹೇಳಿಕೊಂಡಿದ್ದಾರೆ.
ಇವರಿಬ್ಬರ ಪ್ರೇಮ ಪುರಾಣ ಬಹಿರಂಗವಾಗುತ್ತಿದ್ದಂತೆ ಸಾಮಾಜಿಕ ತಾಣದಲ್ಲಿ ಭರ್ಜರಿ ಟ್ರೋಲ್ ಆಗಿದ್ದಾರೆ.
ಇನ್ನು ಈ ಬಗ್ಗೆ ಸುದ್ದಿ ವಾಹಿನಿಯೊಂದಕ್ಕೆ ಪ್ರತಿಕ್ರಿಯಿಸಿದ ಜಸ್ಲೀನ್ ತಂದೆ, 'ನನ್ನ ಹಾಗೂ ನನ್ನ ಕುಟುಂಬಕ್ಕೆ ಇದು ಶಾಕಿಂಗ್ ಸಂಗತಿ. ಈ ವಿಚಾರದ ಬಗ್ಗೆ ನಾನು ಹೆಚ್ಚು ಕಾಮೆಂಟ್ ಮಾಡುವುದಿಲ್ಲ. ಮೊದಲು ನಾನು ನನ್ನ ಪುತ್ರಿಯ ಜೊತೆಗೆ ಮಾತನಾಡಬೇಕು. ಆಕೆ 'ಬಿಗ್ ಬಾಸ್' ಗೆದ್ದು ಬರಲಿ' ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಜನ ಮಾಡುತ್ತಿರುವ ಕಾಮೆಂಟ್ಸ್ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ನನ್ನ ಪುತ್ರಿ ಈಗಾಗಲೇ ಹಲವು ಬಾಲಿವುಡ್ ಗಾಯಕರ ಜೊತೆಗೆ ಸ್ಟೇಜ್ ಶೋ ಮಾಡಿದ್ದಾಳೆ. ಆಕೆಗೆ ಬಾಲಿವುಡ್ ಪರಿಚಯ ಇದೆ. ಚೀಪ್ ಪಬ್ಲಿಸಿಟಿ ಗಿಟ್ಟಿಸಿಕೊಳ್ಳುವ ಉದ್ದೇಶ ಇಲ್ಲ ಎಂದು ಜಸ್ಲೀನ್ ತಂದೆ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT