ಬಾಲಿವುಡ್

ಭಾರತಕ್ಕಾಗಿ ಪ್ರಾಣ ಕೊಡಲು ಸಿದ್ಧ- ರಾಖಿ ಸಾವಂತ್

Nagaraja AB
ಲೂದಿಯಾನಾ: ಭಾರತ- ಪಾಕಿಸ್ತಾನ ನಡುವೆ ಪರಿಸ್ಥಿತಿ ಬಿಗಡಾಯಿಸಿರುವಂತೆ ಒಂದು ವೇಳೆ ಅಗತ್ಯ ಬಿದ್ದರೆ ದೇಶಕ್ಕಾಗಿ ನಾನೂ ಕೂಡಾ ಸಾಯಲು ಸಿದ್ದವಿರುವುದಾಗಿ ಬಾಲಿವುಡ್  ನಟಿ ರಾಖಿ ಸಾವಂತ್ ಹೇಳಿದ್ದಾರೆ.
ಪುಲ್ವಾಮಾ ಉಗ್ರರ ದಾಳಿ ನಂತ ಭಾರತೀಯ ಸೇನೆ ಕೈಗೊಂಡ ನಿರ್ಧಾರವನ್ನು  ಅವರು ಶ್ಲಾಘಿಸಿದ್ದಾರೆ.ಪುಲ್ವಾಮಾ ದಾಳಿಗೆ ಪ್ರತಿಕಾರವಾಗಿ ಪ್ರಧಾನಿ ನರೇಂದ್ರ ಮೋದಿ  ಕೈಗೊಂಡ ನಿರ್ಧಾರ ಸಂಪೂರ್ಣವಾಗಿ ಸರಿಯಾಗಿಯೇ ಇದೆ. ಅವರು ಏನೂ ಬೇಕಾದರೂ ಮಾಡುವಂತವರಾಗಿದ್ದು, ಅವರನ್ನು ನಾವೆಲ್ಲರೂ ಬೆಂಬಲಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ.
SCROLL FOR NEXT