ಜೈರಾ ವಾಸಿಮ್ 
ಬಾಲಿವುಡ್

ಚಿತ್ರರಂಗಕ್ಕೆ ಗುಡ್ ಬೈ ಹೇಳಿದ 'ದಂಗಲ್ 'ಖ್ಯಾತಿಯ ಜೈರಾ ವಾಸಿಮ್

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, "ದಂಗಲ್" ಖ್ಯಾತಿಯ ಜೈರಾ ವಾಸಿಮ್ ಬಾಲಿವುಡ್ ಹಾಗೂ ಚಿತ್ರಜಗತ್ತಿನಿಂದ ನಿವೃತ್ತಿ ಘೋಷಿಸಿದ್ದಾರೆ.

ರಾಷ್ಟ್ರ ಪ್ರಶಸ್ತಿ ವಿಜೇತ ನಟಿ, "ದಂಗಲ್" ಖ್ಯಾತಿಯ ಜೈರಾ ವಾಸಿಮ್ ಬಾಲಿವುಡ್ ಹಾಗೂ ಚಿತ್ರಜಗತ್ತಿನಿಂದ ನಿವೃತ್ತಿ ಘೋಷಿಸಿದ್ದಾರೆ. ಇದು ತನ್ನ ನಂಬಿಕೆ ಮತ್ತು ಧರ್ಮಕ್ಕೆ ಅಡ್ಡಿಯಾಗಿದ್ದು ಕೆಲಸದಲ್ಲಿ ಣಾನು ಖುಷಿಯಾಗಿಲ್ಲ ಎಂದಿರುವ ಜೈರಾ ಈ ಕಾರಣಕ್ಕೆ ತಾನು ನಟನಾ ಕ್ಷೇತ್ರದೊಡನೆ ಸಂಬಂಧ ಕಡಿದುಕೊಂಡಿರುವುದಾಗಿ ಹೇಳಿದ್ದಾರೆ.
ನಟಿ ಈ ಬಗೆಗೆ ತನ್ನ ಫೇಸ್‌ಬುಕ್ ಪುಟದಲ್ಲಿ ವಿವರವಾದ ಪೋಸ್ಟ್‌ ಬರೆದುಕೊಂಡಿದ್ದು ಅದನ್ನು ತಮ್ಮೆಲ್ಲಾ ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದಾರೆ. 
ಕಾಶ್ಮೀರಿ ಮೂಲದ ದಂಗಲ್ ಖ್ಯಾತಿಯ ತಾರೆ "ನಾನು ಇಲ್ಲಿಗೆ ಹೊಂದಿಕೊಳ್ಳಬಹುದಾದರೂ  ನಾನು ಇಲ್ಲಿಗೆ ಸೇರಿದವನಲ್ಲ" ಎಂದು ಅರಿತುಕೊಂಡೆ ಎಂದು ಹೇಳಿದ್ದಾರೆ."ಐದು ವರ್ಷಗಳ ಹಿಂದೆ ನಾನು ನನ್ನ ಜೀವನವನ್ನು ಶಾಶ್ವತವಾಗಿ ಬದಲಿಸುವ ನಿರ್ಧಾರವನ್ನು ತೆಗೆದುಕೊಂಡೆ. ನಾನು ಬಾಲಿವುಡ್‌ನಲ್ಲಿ ಹೆಜ್ಜೆ ಇಡುತ್ತಿದ್ದಂತೆ , ಅದು ನನಗೆ ಭಾರಿ ಜನಪ್ರಿಯತೆಯ ನ್ನೇ ತಂದುಕೊಟ್ಟಿತು. . ನಾನು ಸಾರ್ವಜನಿಕ ಗಮನ ಸೆಳೆಯುವ ವ್ಯಕ್ತಿಯಾಗಿ ಬದಲಾದೆ.ನನ್ನ ಯಶಸ್ಸನ್ನು  ಯುವಕರಿಗೆ ಆದರ್ಶಪ್ರಾಯ ಎಂದೆಲ್ಲಾ ಬಿಂಬಿಸಲಾಗಿತ್ತು. ಆದಾಗ್ಯೂ, ಅದು ಎಂದಿಗೂ ನಾನು ಮಾಡಲು ಅಥವಾ ಆಗಲು ಹೊರಟದ್ದಲ್ಲ. ಅದರಲ್ಲೂ ವಿಶೇಷವಾಗಿ ನನ್ನ ಯಶಸ್ಸು ಮತ್ತು ವೈಫಲ್ಯದ ವಿಚಾರಗಳಿಗೆ ಸಂಬಂಧಿಸಿದಂತೆ, ನಾನು ಅದನ್ನು ಅನ್ವೇಷಿಸಲು ಮತ್ತು ಅರ್ಥಮಾಡಿಕೊಳ್ಳಲು ಪ್ರಾರಂಭಿಸಿದೆ" ಎಂದು ವಾಸಿಮ್ ಸುದೀರ್ಘ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
18ರ ಹರೆಯದ ನಟಿ ವೃತ್ತಿಯಲ್ಲಿ ಐದು ವರ್ಷಗಳನ್ನು ಪೂರೈಸುತ್ತಿದ್ದಂತೆ, "ಈ ಕ್ಷೇತ್ರ ಹಾಗೂ ಯಶಸ್ಸಿನಿಂದ ನಾನು ನಿಜವಾಗಿಯೂ ಸಂತೋಷವಾಗಿಲ್ಲ ಎಂದು ಒಪ್ಪಿಕೊಳ್ಳಲು ಬಯಸುತ್ತೇನೆ" ಎನ್ನುತ್ತಾರೆ.ಅಲ್ಲದೆ ಈ ಕೆಲಸದ ಬಗೆಗೆ ನನಗೆ ಸಂತಸವಿಲ್ಲ ಎಂದೂ ಸ್ಪಷ್ತಪಡಿಸಿದ್ದಾರೆ.
"ಈ ಕ್ಷೇತ್ರವು ನನಗೆ ಅಪಾರ ಪ್ರೀತಿ, ಬೆಂಬಲ ಮತ್ತು ಕಾಳಜಿಯನ್ನು ತಂದುಕೊಟ್ಟಿದೆ ಆದರೆ ಅಷ್ಟೇ ಆಗಿರದೆ ಇದೇ ಕ್ಷೇತ್ರ ನನ್ನನ್ನು ನಿರ್ಲಕ್ಷದ ಹಾದಿಗೆ ಸಹ ಒಯ್ದಿದೆ.ಮೌನವಾಗಿ ಹಾಗೂ ನನಗೇ ಅರಿವಿಲ್ಲದಂತೆ ನನ್ನ ನಂಬಿಕೆಗಳನ್ನು ಇದು ಬದಲಿಸಿದೆ. ನಂಬಿಕೆಗೆ ಪದೇ ಪದೇ ಘಾಸಿಪಡಿಸುವ ಕ್ಷೇತ್ರದಲ್ಲಿ ನಾನು ಕಾರ್ಯ ಮುಂದುವರಿಸಿದರೆ ಮುಂದೆ ನನ್ನ ಧರ್ಮದ ಜತೆಗಿನ ಸಂಬಂಧಕ್ಕೇ ಇದರಿಂದ ಅಪಾಯವಾಗಬಹುದು" ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT