ಅಂಕಿತಾ ಲೋಖಂಡೆ 
ಬಾಲಿವುಡ್

ಸುಶಾಂತ್ ಸಾವು ಕೊಲೆ ಎಂದು ಹೇಳಿಲ್ಲ, ಇದಕ್ಕೆ ಯಾರು ಹೊಣೆ ಎಂದೂ ಹೇಳಿಲ್ಲ: ನಿಲುವು ಸ್ಪಷ್ಟಪಡಿಸಿದ ಅಂಕಿತಾ

ನಾನು ನ್ಯಾಯ ಕೇಳಿದ್ದೇನೆ ಹೊರತು ಸುಶಾಂತ್ ಸಾವು ಕೊಲೆ ಎಂದು ಯಾವತ್ತೂ ಹೇಳಿಲ್ಲ, ಹಾಗೂ ಇದಕ್ಕೆ ಯಾರೂ ಜವಾಬ್ದಾರಿಯೂ ಎಂದೂ ನಾನು ಹೇಳಿಲ್ಲ ಎಂದು ನಟಿ ಅಂಕಿತಾ ಲೋಖಂಡೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಮುಂಬಯಿ: ನಾನು ನ್ಯಾಯ ಕೇಳಿದ್ದೇನೆ ಹೊರತು ಸುಶಾಂತ್ ಸಾವು ಕೊಲೆ ಎಂದು ಯಾವತ್ತೂ ಹೇಳಿಲ್ಲ, ಹಾಗೂ ಇದಕ್ಕೆ ಯಾರೂ ಜವಾಬ್ದಾರಿಯೂ ಎಂದೂ ನಾನು ಹೇಳಿಲ್ಲ ಎಂದು ನಟಿ ಅಂಕಿತಾ ಲೋಖಂಡೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಸುಶಾಂತ್ ಸಾವಿಗೆ  ಮತ್ತು ಅವರ ಕುಟುಂಬದವರಿಗೆ ನ್ಯಾಯ ಸಿಗಬೇಕೆಂಬುದೇ ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ ತಿಂಗಳಿನಲ್ಲಿ 34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ ಸುಶಾಂತ್ ಸಾವಿನ ಸಂಬಂಧ ಹಲವು ಚರ್ಚೆಗಳು ನಡೆದಿದ್ದವು.

ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಪವಿತ್ರ ರಿಶ್ತಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.2016ರ ವರೆಗೂ ಇಬ್ಬರು ಡೇಟಿಂಗ್ ನಡೆಸುತ್ತಿದ್ದರು. ಆದರೆ ಸುಶಾಂತ್ ಸಾವಿನ ನಂತರ ಆತನ ಗೆಳತಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. 

ರಿಯಾ ಚಕ್ರವರ್ತಿ ಬಂಧನಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಂಕಿತಾ ಲೋಖಂಡೆ, ಅವಕಾಶದಿಂದ ಯಾವುದು ಆಗುವುದಿಲ್ಲ, ಇದು ಅವರ ಹಮೆ ಬರಹ, ನಿನ್ನ ಕೆಲಸಗಳಿಂದ ನಿನ್ನ ಹಣೆಬರಹ ನಿರ್ಧಾರವಾಗುತ್ತದೆ ಅದುವೇ ಕರ್ಮ ಎಂದು ಟ್ವೀಟ್ ಮಾಡಿದ್ದರು. ಇದು ಕೊಲೆ ಎಂದು ನಾನು ಯಾವತ್ತೂ ನಾನು ಹೇಳಿಲ್ಲ, ಮತ್ತೂ ಇದಕ್ಕೆ ಯಾರೂ ಹೊಣೆ ಎಂದು ಕೂಡ ನಾನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರ ಕುಸಿತ: 5ನೇ ತರಗತಿವರೆಗಿನ ವಿದ್ಯಾರ್ಥಿಗಳ ದೈಹಿಕ ತರಗತಿಗಳಿಗೆ ಬ್ರೇಕ್!

ಪಹಲ್ಗಾಮ್ ಉಗ್ರ ದಾಳಿ: 1,597 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ NIA; ಉನ್ನತ LeT ಕಮಾಂಡರ್ ಸಾಜಿದ್ ಜಾಟ್ ಹೆಸರು ಉಲ್ಲೇಖ!

Gold Rate: ಮತ್ತೆ ಗಗನಕ್ಕೇರಿದ ಚಿನ್ನದ ದರ, ಒಂದೇ ದಿನ ಬರೊಬ್ಬರಿ 4 ಸಾವಿರ ರೂ ಏರಿಕೆ, ಎಷ್ಟು ಗೊತ್ತಾ?

Video: ಯಶವಂತಪುರ ನಿಲ್ದಾಣದಲ್ಲಿ ಹೈಡ್ರಾಮಾ: RPF ಸಿಬ್ಬಂದಿ ಮೇಲೆ ಪುಂಡರ ಹಲ್ಲೆ, ರೈಲು ವಿಳಂಬ! ಆಗಿದ್ದೇನು?

ನವೆಂಬರ್‌ನಲ್ಲಿ ನಿರುದ್ಯೋಗ ದರ ಶೇ. 4.7 ಕ್ಕೆ ಇಳಿಕೆ, ಉದ್ಯೋಗ ಮಾರುಕಟ್ಟೆ ಚೇತರಿಕೆ!

SCROLL FOR NEXT