ಅಮಿತಾಬ್ ಬಚ್ಚನ್ 
ಬಾಲಿವುಡ್

5 ವರ್ಷದ ಪುಟ್ಟ ಬಾಲಕ ಕೇಳಿದ ಪ್ರಶ್ನೆಗೆ ನಿಬ್ಬೆರಗಾದ ಬಿಗ್ ಬಿ, ಮಗು ಕೇಳಿದ ಪ್ರಶ್ನೆ ಏನು?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಗಾಗ ತಮ್ಮ ಬ್ಲಾಗ್ ನಲ್ಲಿ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ 5 ವರ್ಷದ ಮಗು ತಮ್ಮ ಜೊತೆ ನಡೆಸಿದ ಸಂಭಾಷಣೆಯ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಗಾಗ ತಮ್ಮ ಬ್ಲಾಗ್ ನಲ್ಲಿ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಮನಕ್ಕೆ ಯಾವಾಗಲೂ ಹತ್ತಿರವಾಗಲು ಬಯಸುತ್ತಾರೆ. ಅದೇ ರೀತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ 5 ವರ್ಷದ ಮಗು ತಮ್ಮ ಜೊತೆ ನಡೆಸಿದ ಸಂಭಾಷಣೆಯ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಜಾಹೀರಾತುವೊಂದಕ್ಕೆ ಶೂಟಿಂಗ್ ನಲ್ಲಿ ನಿರತರಾಗಿದ್ದರಂತೆ. ಆಗ 5 ವರ್ಷದ ಪುಟ್ಟ ಬಾಲಕ ಅವರ ಬಳಿ ಬಂದು ನಿಮ್ಮ ವಯಸ್ಸೆಷ್ಟು ಎಂದು ಕೇಳಿದನಂತೆ. ಅದಕ್ಕವರು 80 ಎಂದಾಗ ನೀವ್ಯಾಕೆ ಇನ್ನೂ ಕೆಲಸ ಮಾಡುತ್ತಿದ್ದೀರಿ, ಮನೆಯಲ್ಲಿ ಆರಾಮಾಗಿ ಸಮಯ ಕಳೆಯಬೇಕಲ್ಲವೇ, ನನ್ನ ಅಜ್ಜ-ಅಜ್ಜಿ ಮನೆಯಲ್ಲಿ ಆರಾಮಾಗಿರುತ್ತಾರೆ, ನೀವು ಕೂಡ ಹಾಗಿರಬೇಕು ಎಂದು ಹೇಳಿದನಂತೆ. ಆತನ ಮಾತು ಕೇಳಿ ಬೆರಗಾಯಿತು ಎಂದು ಬರೆದುಕೊಂಡಿದ್ದಾರೆ ಬಿಗ್ ಬಿ.

ಆತನಿಗೆ ಪ್ರತಿಕ್ರಿಯಲು ನನ್ನಲ್ಲಿ ಉತ್ತರವಿರಲಿಲ್ಲ, 5 ವರ್ಷದ ಪುಟ್ಟ ಮಗುವಿನ ಬಾಯಲ್ಲಿ ಇಂಥ ಮಾತು ಕೇಳಿ ಅಚ್ಚರಿಯಾಯಿತು, ಎರಡನೆಯದಾಗಿ ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ಕೊನೆಗೆ ಶೂಟಿಂಗ್ ಮುಗಿದ ಮೇಲೆ ಆತನ ಜೊತೆ ಫೋಟೋ ತೆಗೆದುಕೊಂಡು ಆಟೋಗ್ರಾಫ್ ಕೊಟ್ಟು ಅವನಿಗೆ ಗುಡ್ ಬೈ ಹೇಳಿ ಬಂದೆ. ಆದರೆ ಆ ಪುಟ್ಟ ಮಗು ಆಡಿದ ಮಾತು ಇಂದಿನ ಡಿಜಿಟಲ್ ಅರ್ಥಕೋಶದ ಕಾಲದಲ್ಲಿ ನನ್ನ ಮನಸ್ಸಲ್ಲಿ ಇನ್ನೂ ಗುನುಗುಡುತ್ತಲೇ ಇದೆ ಎಂದು ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. 

ಅಮಿತಾಬ್ ಬಚ್ಚನ್ ಅವರು ಸದ್ಯದಲ್ಲಿಯೇ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಆಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿದ್ದು ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಕೆಲವು ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಾವು ಏಕೆ ತಡೆಯಲಿ... ತಾಂತ್ರಿಕ ಸಮಸ್ಯೆ ಹೊರತು ಉದ್ದೇಶಪೂರ್ವಕವಲ್ಲ: ಮಹಿಳಾ ಪತ್ರಕರ್ತರನ್ನು ದೂರವಿಟ್ಟ ಬಗ್ಗೆ ಮುತ್ತಕಿ ಸ್ಪಷ್ಟನೆ

'ಆಕೆ ಮಧ್ಯರಾತ್ರಿ 12.30ಕ್ಕೆ ಹೇಗೆ ಹೊರಬಂದಳು?': ಗ್ಯಾಂಗ್ ರೇಪ್ ಕುರಿತು ಮಮತಾ ಬ್ಯಾನರ್ಜಿ ಹೇಳಿಕೆ

ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳನ್ನು ನಿಷೇಧಿಸಿ: ಮುಖ್ಯಮಂತ್ರಿಗೆ ಪ್ರಿಯಾಂಕ್ ಖರ್ಗೆ ಪತ್ರ

RSS ನಿಷೇಧಕ್ಕೆ ಕರೆ: ಸಚಿವ ಪ್ರಿಯಾಂಕ್ ಖರ್ಗೆ ಬೌದ್ಧಿಕ ದಾರಿದ್ರ್ಯತನ ತೋರಿಸುತ್ತದೆ, ಯತ್ನಾಳ್ ಕಿಡಿ!

ಭಾರತ- ಬಾಂಗ್ಲಾದೇಶ ಗಡಿ: ರೂ. 2.82 ಕೋಟಿ ಮೌಲ್ಯದ 'ಚಿನ್ನದ ಬಿಸ್ಕತ್ತು' ಜೊತೆಗೆ ಕಳ್ಳಸಾಗಣೆದಾರನನ್ನು ಬಂಧಿಸಿದ BSF!

SCROLL FOR NEXT