ಶಾರುಖ್ ನಿವಾಸ ಮನ್ನತ್ ಗೆ ವಜ್ರದ ಅಲಂಕಾರ 
ಬಾಲಿವುಡ್

‘ಮನ್ನತ್​’ ಗೆ ವಜ್ರದ ನಾಮಫಲಕ; ಶಾರುಖ್ ವೈಭೋಗ ನೋಡಲು ಮುಗಿಬಿದ್ದ ಅಭಿಮಾನಿಗಳು!!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಅವರು ತಮ್ಮ ಸಿನಿಮಾದಿಂದಲ್ಲ ಬದಲಿಗೆ ತಮ್ಮ ಮನೆಯ ಗೇಟ್ ನಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಅವರು ತಮ್ಮ ಸಿನಿಮಾದಿಂದಲ್ಲ ಬದಲಿಗೆ ತಮ್ಮ ಮನೆಯ ಗೇಟ್ ನಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಾಲಿವುಡ್ ನಲ್ಲಿ ಶಾರುಖ್ ಖಾನ್ ರ ಈ ಹಿಂದಿನ ಕೆಲ ಚಿತ್ರಗಳು ಸೋತರೂ ಅವರ ಮೇಲಿನ ಅಭಿಮಾನಿಗಳ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಶಾರುಖ್ ಮಾತ್ರವಲ್ಲ ಅವರಂತೆಯೇ ಅವರ ನಿವಾಸ ಮನ್ನತ್ ಕೂಡ ಇದೀಗ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ. ಅದಕ್ಕೆ ಕಾರಣ ಅವರ ಮನೆಯ ಗೇಟ್.. ಹೌದು.. ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ಮನೆ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಕಿಂಗ್​ ಖಾನ್​ ಅವರ ‘ಮನ್ನತ್​’ (Mannat) ನಿವಾಸಕ್ಕೆ ವಿಶೇಷ ಆಕರ್ಷಣೆ ಇದ್ದು, ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲ. 

ಮುಂಬೈ ಮಹಾನಗರದಲ್ಲಿ ‘ಮನ್ನತ್​’ ಕಟ್ಟಡಕ್ಕೆ ಅದರದ್ದೇ ಆದ ಮೆರುಗು ಇದೆ. ಆಗಾಗ ಬಾಲಿವುಡ್​ ಸೆಲೆಬ್ರಿಟಿಗಳು ಈ ಬಂಗಲೆಯಲ್ಲಿ ಪಾರ್ಟಿ ಮಾಡುತ್ತಾರೆ. ಈಗ ಶಾರುಖ್​ ಖಾನ್​ ಮನೆ ಬಗ್ಗೆ ಹೊಸ ಅಪ್ಡೇಟ್​ ಕೇಳಿಬಂದಿದ್ದು, ಮನ್ನತ್​ ನಿವಾಸದ ಗೇಟಿಗೆ ವಜ್ರದ (Diamond) ಅಲಂಕಾರ ಮಾಡಲಾಗಿದೆ. ಈ ಕುರಿತು ಶಾರುಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದು ಈ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಕಿಂಗ್​ ಖಾನ್​ ನಿವಾಸದ ಮುಖ್ಯ ದ್ವಾರದಲ್ಲಿ ‘ಮನ್ನತ್’ ಎಂದು ನೇಮ್​ ಪ್ಲೇಟ್​ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ವಜ್ರಖಚಿತ ನೇಮ್​ಪ್ಲೇಟ್​ ಹೊಂದಿರುವ ಕಾರಣದಿಂದ ‘ಮನ್ನತ್​’ ಈಗ ಇನ್ನಷ್ಟು ಆಕರ್ಷಕವಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ರಷ್ಯಾ ಸಂಬಂಧಗಳು ವ್ಯಾಪಾರ ಒಪ್ಪಂದಕ್ಕೆ ಅಡ್ಡಿಯಾಗಬಹುದು: ಯುರೋಪಿಯನ್ ಒಕ್ಕೂಟ ವಾರ್ನಿಂಗ್!

ಭಾರತದ ಅಣೆಕಟ್ಟು-ನದಿಗಳು ನಮ್ಮದಾಗಲಿದೆ: Op Sindoorಗೆ ಪ್ರತೀಕಾರ ಹೇಳ್ತೀವಿ; ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಬೆದರಿಕೆ!

Bumrah ಓವರ್​ನಲ್ಲಿ 6 ಸಿಕ್ಸರ್ ಸಿಡಿಸುವ ಸವಾಲು: ಆದ್ರೆ Saim Ayub ಆಡಿದ 3 ಪಂದ್ಯದಲ್ಲೂ ಸುತ್ತಿದ್ದು ಶೂನ್ಯ, ಕಳಪೆ ದಾಖಲೆ ಬರೆದ Pak ಬ್ಯಾಟರ್, Video!

ಬರೇಲಿಯಲ್ಲಿ ದಿಶಾ ಪಠಾನಿ ಮನೆಯ ಹೊರಗೆ ಗುಂಡು ಹಾರಿಸಿದ್ದ ಇಬ್ಬರು ಶಂಕಿತರು ಎನ್‌ಕೌಂಟರ್‌ನಲ್ಲಿ ಸಾವು

ನವೆಂಬರ್ ಒಳಗೆ ಬೆಂಗಳೂರಿನ ಎಲ್ಲಾ ಗುಂಡಿಗಳನ್ನು ಮುಚ್ಚಿ: ಗುತ್ತಿಗೆದಾರರಿಗೆ DCM ಡಿಕೆಶಿ ಗಡುವು

SCROLL FOR NEXT