ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ 
ಬಾಲಿವುಡ್

'ಕಾಲೇಜು ಹುಡುಗಿಯರು ಪ್ರತಿ ವಾರ ಬಾಯ್ ಫ್ರೆಂಡ್ ಚೇಂಜ್ ಮಾಡ್ತಾರೆ, ಮುರಿದುಬಿದ್ದ ನನ್ನ ನಿಶ್ಚಿತಾರ್ಥದ ಬಗ್ಗೆ ಯಾಕೆ ಗೂಗಲ್ ಸರ್ಚ್ ಮಾಡ್ತೀರಿ?'

ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.

ಮುಂಬಯಿ: ನಟಿ ರವೀನಾ ಟಂಡನ್ ಮತ್ತು ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಆದರೆ ಕೆಲವು ಕಾರಣಗಳಿಂದ ಇಬ್ಬರೂ ಬ್ರೇಕ್ ಅಪ್ ಮಾಡಿಕೊಂಡಿದ್ರು. 20 ವರ್ಷಗಳ ನಂತರ ಅಕ್ಷಯ್ ಜೊತೆಗಿನ ಮುರಿದು ಹೋದ ಸಂಬಂಧದ ಬಗ್ಗೆ ರವೀನಾ ಟಂಡನ್ ಮಾತಾಡಿದ್ದಾರೆ.

1995ರ ನಂತರದಲ್ಲಿ ನಟಿ ರವೀನಾ ಟಂಡನ್ ಅಕ್ಷಯ್ ಕುಮಾರ್ ನಿಶ್ಚಿತಾರ್ಥ ಆಗಿತ್ತು. ಇನ್ನೇನು ಇವರಿಬ್ಬರು ಮದುವೆಯಾಗ್ತಾರೆ ಎಂದುಕೊಳ್ಳುವಾಗ ನಿಶ್ಚಿತಾರ್ಥ ಮುರಿದು ಬಿತ್ತು. ಇವರಿಬ್ಬರು ಬೇರೆ ಬೇರೆ ಸಂಗಾತಿಯನ್ನು ಹುಡುಕಿಕೊಂಡು, ಮದುವೆಯಾಗಿ ಖುಷಿಯಾಗಿದ್ದಾರೆ. ಆದರೂ ಕೂಡ ಪದೇ ಪದೇ ನಿಶ್ಚಿತಾರ್ಥದ ವಿಷಯದ ಬಗ್ಗೆ ಮಾತನಾಡುವುದು ರವೀನಾಗೆ ಬೇಸರ ತರಿಸಿದೆ.

1994ರಲ್ಲಿ 'ಮೊಹ್ರಾ' ಸಿನಿಮಾದಲ್ಲಿ ಇವರಿಬ್ಬರು ಒಟ್ಟಿಗೆ ನಟಿಸಿದ್ದರು. ಈ ಚಿತ್ರ ಹಿಟ್ ಆಯ್ತು. ಅದಾಗಿ 1995ರಲ್ಲಿ ರವೀನಾ ಟಂಡನ್, ಅಕ್ಷಯ್ ಕುಮಾರ್ ಅವರು ಡೇಟ್ ಮಾಡಲು ಆರಂಭಿಸಿದೆವು.

ನಮ್ಮಿಬ್ಬರ ನಿಶ್ಚಿತಾರ್ಥ ಮುರಿದೋಯ್ತು. ಆಮೇಲೆ ನಾನು ಬೇರೆಯವರ ಜೊತೆ ಡೇಟ್ ಮಾಡಿದೆ, ಅಕ್ಷಯ್ ಕೂಡ ಬೇರೆಯವರ ಜೊತೆ ಡೇಟ್ ಮಾಡಿದರು. ಆದರೂ ಕೂಡ ಗೂಗಲ್‌ನಲ್ಲಿ ನಮ್ಮ ನಿಶ್ಚಿತಾರ್ಥದ ಬಗ್ಗೆ ಯಾಕೆ ಸರ್ಚ್ ಮಾಡ್ತೀರಿ? ಇಬ್ಬರೂ ಬೇರೆ ಬೇರೆ ದಾರಿ ಕಂಡುಕೊಂಡು ಬಂದಾಗಿದೆ. ಈಗ ಇಬ್ಬರ ಮಧ್ಯೆ ಅಸೂಯೆ, ಹೊಟ್ಟೆಕಿಚ್ಚು ಎಲ್ಲಿಂದ ಬರುತ್ತದೆ?" ಎಂದು ರವೀನಾ ಟಂಡನ್ ಹೇಳಿದ್ದಾರೆ.

ಮೊಹ್ರಾ ಸಿನಿಮಾ ಟೈಮ್‌ನಲ್ಲಿ ನಾವಿಬ್ಬರೂ ಹಿಟ್ ಜೋಡಿಗಳು. ನಾವಿಬ್ಬರೂ ಭೇಟಿಯಾದ್ರೆ ಮಾತನಾಡುತ್ತೇವೆ. ಎಲ್ಲರೂ ಜೀವನದಲ್ಲಿ ಮುಂದೆ ಸಾಗುತ್ತಾರೆ. ವಾರಕ್ಕೊಮ್ಮೆ ಕಾಲೇಜಿನಲ್ಲಿ ಹುಡುಗಿಯರು ಬಾಯ್‌ಫ್ರೆಂಡ್ ಬದಲಾಯಿಸುತ್ತಾರೆ. ಆದರೆ ಒಂದು ಮುರಿದುಬಿದ್ದ ನಿಶ್ಚಿತಾರ್ಥ ನನ್ನ ತಲೆಗೆ ಇನ್ನೂ ಅಂಟಿಕೊಂಡಿದ್ದು ಯಾಕೆ ಅಂತ ಅರ್ಥ ಆಗುತ್ತಿಲ್ಲ. ಎಲ್ಲರೂ ಮುಂದೆ ಸಾಗ್ತಾರೆ, ವಿಚ್ಛೇದನ ಆಗಿ ಇನ್ನೊಂದು ಜೀವನ ನೋಡಿಕೊಳ್ತಾರೆ. ಅದರಲ್ಲಿ ಏನಿದೆ? ಎಂದು ರವೀನಾ ಟಂಡನ್ ಗರಂ ಆಗಿದ್ದಾರೆ.

ಬ್ರೇಕಪ್ ಆದ್ಮೇಲೆ ರವೀನಾ ಟಂಡನ್ ರೀತಿ ಕಾಣುವ ಹುಡುಗಿಯ ಜೊತೆ ಅಕ್ಷಯ್ ಕುಮಾರ್ ಡೇಟ್ ಮಾಡಲು ಆರಂಭಿಸಿದ್ರು ಅಂತ ಹೇಳಲಾಗಿತ್ತಂತೆ. ಆದರೆ ಅದು ಆಗ ನನಗೆ ಗೊತ್ತಾಗಲಿಲ್ಲ ಎಂದು ರವೀನಾ ಟಂಡನ್ ಹೇಳಿದ್ದಾರೆ. ರವೀನಾ ಟಂಡನ್ ಅವರು ಉದ್ಯಮಿ ಅನಿಲ್ ತಡಾನಿಯವರನ್ನು ಮದುವೆಯಾಗಿದ್ದಾರೆ. ಇನ್ನೂ ಅಕ್ಷಯ್ ಕುಮಾರ್ ಕೂಡ ಟ್ವಿಂಕಲ್ ಖನ್ನಾ ಅವರನ್ನು ವಿವಾಹವಾಗಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT