ಕಂಗನಾ ರಣಾವತ್ ಮತ್ತು ಆಮೀರ್ ಖಾನ್ 
ಬಾಲಿವುಡ್

ನನ್ನ ಬಳಿ ಮೂರು ರಾಷ್ಟ್ರಪ್ರಶಸ್ತಿಗಳಿವೆ, ಹೊಗಳಿದ್ರೂ ನಿಮ್ಮನ್ನ ಬಿಡಲ್ಲ; ಆಮೀರ್ ಖಾನ್ ಕಾಲೆಳೆದ ಕಂಗನಾ ರಣಾವತ್

ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್, ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ನಟ ಆಮೀರ್ ಖಾನ್ ಬಾಲಿವುಡ್ ನಟಿ ಕಂಗನಾ ರಣಾವತ್ ಅವರನ್ನು ಹೊಗಳಿದ್ದರು.

ಆದರೆ ಆಮೀರ್ ಖಾನ್ ತಮ್ಮನ್ನು ಹೊಗಳಿದ್ರು ಕಂಗನಾ ಪ್ರಭಾವಿತರಾಗಿಲ್ಲ, ಇದಕ್ಕೆ ಸಾಕ್ಷಿ ಎನ್ನುವಂತೆ ಒಂದು ಟ್ವೀಟ್ ಮಾಡಿದ್ದಾರೆ. ಇತ್ತೀಚಿಗಷ್ಟೆ ಆಮೀರ್ ಖಾನ್ ಕಾದಂಬರಿಗಾರ್ತಿ ಮತ್ತು ಅಂಕಣಗಾರ್ತಿ ಶೋಭಾ ಡೇ ಅವರ ಹೊಸ ಪುಸ್ತಕ ಪ್ರಮೋಷನ್ ನಲ್ಲಿ ಭಾಗಿಯಾಗಿದ್ದರು. ಸಂವಾದದಲ್ಲಿ ಆಮೀರ್ ಖಾನ್ ಕಂಗನಾ ಬಗ್ಗೆ ಮಾತನಾಡಿದರು. ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ನಟಿ ಕಂಗನಾ ಪ್ರತಿಕ್ರಿಯೆ ನೀಡಿದ್ದಾರೆ.

ಶೋಭಾ ಡೇ ಪಾತ್ರಕ್ಕೆ ಯಾವ ನಟಿ ಸೂಕ್ತ ಎಂದು ಆಮೀರ್ ಖಾನ್ ಅವರನ್ನು ಕೇಳಲಾಯಿತು. ಅಲಿಯಾ ಭಟ್, ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಎಂದು ಆಮೀರ್ ಖಾನ್ ಹೇಳಿದರು.

ಆಮೀರ್ ಹೀಗೆ ಹೇಳಿದ ಬಳಿಕ ಕಂಗನಾ ರಣಾವತ್ ಅವರನ್ನು ಮರೆತಿದ್ದೀರಿ ಎಂದು ಶೋಭಾ ಡೇ ನೆನಪಿಸಿದರು. ಬಳಿಕ ಆಮೀರ್ ಖಾನ್, ಕಂಗನಾ ಅವರನ್ನು ಹೊಗಳಿದರು. 'ತುಂಬಾ ಸ್ಟ್ರಾಂಗ್ ನಟಿ, ಅವರೂ ಕೂಡ ಈ ಪಾತ್ರಕ್ಕೆ ಫಿಟ್ ಆಗುತ್ತಾರೆ' ಎಂದು ಹೇಳಿದರು. ತಲೈವಿ ಸಿನಿಮಾದ ಪಾತ್ರಕ್ಕಾಗಿ ಹೊಗಳಿದರು.

ಆಮೀರ್ ಖಾನ್ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ಕಂಗನಾ, ಸಾಮಾಜಿಕ ಜಾಲತಾಣದ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

'ಬೇಚಾರ ಅಮೀರ್ ಖಾನ್... ಹ ಹ್ಹಾ.. ಅವರು ನಾನು ಮೂರು ಬಾರಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ನಟಿ ಎಂದು ಗೊತ್ತಿಲ್ಲದವರಂತೆ ನಟಿಸಲು ಅವರು ಅತ್ಯುತ್ತಮವಾಗಿ ಪ್ರಯತ್ನಿಸಿದ್ದಾರೆ. ಶೋಭಾ ಡೇ ಧನ್ಯವಾದಗಳು. ನಾನು ನಿಮ್ಮ ಪಾತ್ರ ಮಾಡಲು ಇಷ್ಟಪಡುತ್ತೇನೆ' ಎಂದು ಹೇಳಿದ್ದಾರೆ.

ಬಳಿಕ ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, 'ಶೋಭಾ ಡೆ ನಾವು ವಿರೋಧಾತ್ಮಕ ರಾಜಕೀಯ ದೃಷ್ಟಿಕೋನಗಳನ್ನು ಹೊಂದಿದ್ದೇವೆ. ಆದರೆ ಅದು ನನ್ನ ಕಲೆ. ಕಠಿಣ ಪರಿಶ್ರಮ ಮತ್ತು ನನ್ನ ಕುಶಲತೆಗೆ ಸಮರ್ಪಣೆ ಮಾಡುವುದನ್ನು ತಡೆಯುವುದಿಲ್ಲ. ನಿಮ್ಮ ಹೊಸ ಪುಸ್ತಕಕ್ಕೆ ನಾನು ಶುಭ ಹಾರೈಸುತ್ತೇನೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT