ಕಂಗನಾ ರನೌತ್ 
ಬಾಲಿವುಡ್

ಪಠಾಣ್ ಸಿನಿಮಾಗೆ ಇಂಡಿಯನ್ ಪಠಾಣ್ ಅಂತ ಮರುನಾಮಕರಣ ಮಾಡ್ತಾರಂತೆ ಕಂಗನಾ, ಯಾಕೆ ಅಂದರೆ...

ನಟಿ ಕಂಗಣಾ ರನೌತ್, ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ್ದು ತಾವು ಆ ಸಿನಿಮಾಗೆ ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ. 

ಮುಂಬೈ: ನಟಿ ಕಂಗಣಾ ರನೌತ್, ಶಾರೂಖ್ ಖಾನ್ ನಟನೆಯ ಪಠಾಣ್ ಚಿತ್ರದ ಬಗ್ಗೆ ಮಾತನಾಡಿದ್ದು ತಾವು ಆ ಸಿನಿಮಾಗೆ ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿದ್ದಾರೆ. 

ಟ್ವಿಟರ್ ಹ್ಯಾಂಡಲ್ ನಲ್ಲಿ ಬರೆದಿರುವ ಕಂಗನಾ,  ಸಿನಿಮಾವನ್ನು ದ್ವೇಷದ ಮೇಲೆ ಪ್ರೀತಿಯ ಗೆಲುವು ಎಂದು ಹೇಳುತ್ತಿರುವವರಿಗೆ ಕೇಳುತ್ತೇನೆ, ಯಾರ ಪ್ರೀತಿಯ ಮೇಲೆ ಯಾರ ಗೆಲುವು? ಯಾರು ಟಿಕೆಟ್ ಖರೀದಿಸಿ ಸಿನಿಮಾವನ್ನು ಯಶಸ್ವಿಗೊಳಿಸುತ್ತಿದ್ದಾರೆ ಎಂಬುದರ ಬಗ್ಗೆ ನಿಖರವಾಗಿರೋಣ. 

ಹೌದು, ಇದು ಶೇ.80 ರಷ್ಟು ಹಿಂದೂಗಳು ಜೀವಿಸುತ್ತಿರುವ ಆದರೂ ಪಠಾಣ್ ಅಂತಹ ಸಿನಿಮಾ ಬಂದಿರುವುದು ಭಾರತದ ಪ್ರೀತಿ ಹಾಗೂ ಸಮಗ್ರತೆ ಎಂದು ಕಂಗಣಾ ಹೇಳಿದ್ದಾರೆ. 

ಅಷ್ಟೇ ಅಲ್ಲದೇ ಪಠಾಣ್ ಸಿನಿಮಾವನ್ನು ತಾವು ಇಂಡಿಯನ್ ಪಠಾಣ್ ಎಂದು ಮರುನಾಮಕರಣ ಮಾಡುವುದಾಗಿ ಹೇಳಿರುವ ಕಂಗನಾ, ಅದಕ್ಕೆ ಕಾರಣವನ್ನೂ ನೀಡಿದ್ದು, ಭಾರತೀಯ ಮುಸ್ಲಿಮರು ದೇಶಭಕ್ತರು ಹಾಗೂ ಅಫ್ಘಾನ್ ನ ಪಠಾಣರಿಗಿಂತಲೂ ಭಿನ್ನರಾಗಿರುವವರು ಎಂದು ಹೇಳಿದ್ದಾರೆ. 

ನಮ್ಮ ಶತ್ರು ದೇಶ ಪಾಕಿಸ್ತಾನ ಹಾಗೂ ಐಎಸ್ಐಎಸ್ ನ್ನು ಒಳ್ಳೆಯ ರೀತಿಯಲ್ಲಿ ತೋರಿಸಿರುವ ಸಿನಿಮಾ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, ಇದು ದ್ವೇಷ ಹಾಗೂ ನಿರ್ಣಯಗಳನ್ನೂ ಮೀರಿದ ಭಾರತದ ಆತ್ಮವಾಗಿದೆ ಇದೇ ಭಾರತವನ್ನು ಶ್ರೇಷ್ಠವಾಗಿರಿಸಿದೆ.  ಇದು ಶತ್ರುಗಳ ಸಣ್ಣ ರಾಜಕೀಯ ಹಾಗೂ ದ್ವೇಷದ ವಿರುದ್ಧ ಭಾರತದ ಪ್ರೀತಿಯ ಗೆಲುವಾಗಿದೆ. ಇದನ್ನು ಅತಿಯಾದ ನಿರೀಕ್ಷೆಗಳಿಟ್ಟುಕೊಂಡಿರುವವರು ಗಮನಿಸಬೇಕು ಎಂದು ಕಂಗನಾ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ

KPSC ಪಶುವೈದ್ಯಾಧಿಕಾರಿ ನೇಮಕಾತಿ ಹಗರಣ: ಎಲ್ಲಾ 329 ಅಭ್ಯರ್ಥಿಗಳಿಗೆ CID ಶಾಕ್, ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್!

ನಮ್ಮಲ್ಲೂ ಅಸ್ತ್ರಗಳಿವೆ, ದಾಳಿಗೆ ಸಂಪೂರ್ಣ ಸಿದ್ಧ: ಅಮೆರಿಕಾ ಆರ್ಥಿಕ ದಿಗ್ಬಂಧನಕ್ಕೆ ಇರಾನ್‌ ಪ್ರತಿರೋಧ, ಭಾರೀ ಪ್ರತೀಕಾರದ ಎಚ್ಚರಿಕೆ

‘Iran ನನ್ನ ಪುತ್ರನನ್ನು ಹತ್ಯೆ ಮಾಡಲು ಯತ್ನಿಸಿತ್ತು’: ಟೆಹ್ರಾನ್‌ ವಿರುದ್ಧ ನೆತನ್ಯಾಹು ಗಂಭೀರ ಆರೋಪ

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!